Saturday 22 March 2014

ಮನದ ಮಾತು

ಪಕ್ಷಿ ಪ್ರೇಮಿಗಳು ನಾವು, ಈ ಪೇಟೆಯ ಜೀವನದ ಜಂಗುಳಿಯಲಿ ನಿಸರ್ಗದ ಮಡಿಲು ದುರ್ಲಭ. ಹೊರಗೆಲ್ಲೋ ಬಯಲು ಸೀಮೆಗೋ ಮತ್ತೆಲ್ಲೋ ಕಾಡಿಗೋ ಹೋಗಲೂ ಸಮಯ ಅವಕಾಶಗಳಿಲ್ಲ, ಆದ್ದರಿಂದ ಎಲ್ಲವನ್ನೂ ನಾವಿದ್ದಲ್ಲೇ ಯಾವುದೋ ತೆರನಾಗಿ ಪಡೆದು ತೃಪ್ತಿಗೊಳ್ಳುವುದು ನಮಗೀಗ ವಾಡಿಕೆ ಮತ್ತು ಅನಿವಾರ್ಯ. ಅದಕ್ಕಾಗಿ ಛಾಯಾಗ್ರಾಹಕರ ಛಾಯಾಚಿತ್ರಗಳನ್ನು, ಟಿ ವೀ ಕಾರ್ಯಕ್ರಮಗಳನ್ನು,ಮುದ್ರಿತ ವೀಡೀಯೋಗಳ ಮೊರೆ ಹೋಗುವುದೇ ಹೆಚ್ಚು. ಬೇಡಿಕೆ ಹೆಚ್ಚಿದಂತೆ ಅವುಗಳ ತಯಾರಿಕೆಯ ಭರಾಟೆಯೂ ಹೆಚ್ಚು. ನಮ್ಮ ಅನುಕೂಲಕ್ಕೆ ಕಾಡನ್ನು ತೊರೆದು ನಾಡಿನಲ್ಲಿ ಉಳಿದು ಕಾಡನ್ನೇ ನುಂಗುತ್ತಿರುವ ನಾವು, ಮತ್ತೂ ಆಹ್ಲಾದಕ್ಕೇ ಆ ನಿಸರ್ಗದ ಮಡಿನಲ್ಲಿರುವ ಆ ವರ್ಣಮಯ ಪ್ರಾಣಿ ಪಕ್ಷಿಗಳೇ ಬೇಕೆಂದು ಹಂಬಲಿಸುವುದು ನಮ್ಮೊಳಗಿನ ಕಾಡಿನ ಜೀವ ಇನ್ನೂ ಮಿಡಿಯುತ್ತಿದೆ ಎನ್ನಬಹುದೇನೋ. ಎಷ್ಟೇ ಆದರೂ ಆದಿಮಾನವನ ವಾರಸುದಾರರು ನಾವು!.

ಎಲ್ಲವೂ ಸರಿಯೇ, ಆದರೆ ನಾಡಿನಲ್ಲಿ ಕುಳಿತ ನಮಗೆ ಬೇಕಿದ್ದ ಕೊಡುವ ಉದ್ದೇಶಕ್ಕೆ ಪಾಪ, ಆ ಪ್ರಾಣಿ-ಪಕ್ಷಿಗಳಿಗೆ ದೂರದ ಕಾಡಿನಲ್ಲೂ ಕಾಣದೆ ಕುಳಿತ ಅದರ ಗೂಡಿನಲ್ಲೂ ಮಾನವನ ಕಾಟ ಛಾಯಾಚಿತ್ರಕ್ಕೆ.

ನಮಗಾದರೂ "ಪ್ರೈವೆಸಿ" ವಿಚಾರಕ್ಕೆ ಎಷ್ಟು ದುದ್ದಾಡಿಕೊಳ್ಳುವೆವು ನಾವು ಮನುಷ್ಯ ಮನುಷ್ಯರು, ಆದರೆ ನಮ್ಮಂತಹ ಜೀವವೇ ಆದ ಈ ಪಕ್ಷಿಗಳಿಗೇಕೆ ನಾವು ಕೊಡಲಾರದಂತಾದೆವು?!, ಯೋಚಿಸಬೇಕಿದೆ,,,

ಇಂದಿನ ವಿಜಯಕರ್ನಾಟಕದಲ್ಲಿನ "ಅಬ್ದುಲ್ ರಶೀದ್ ರವರ ಕಾಲು ಚಕ್ರ" ಕಾಲಂನನ್ನು ಓದಿದಾಗ ನನ್ನಗನಿಸಿದ್ದು, ನಾನೂ ಪಕ್ಷಿ ಪ್ರೇಮಿಯೇ,, ದಿನವೂ ಫೇಸ್ ಬುಕ್ಕಿನಲ್ಲಿನ ಎಲ್ಲಾ ಪಕ್ಷಿ ಛಾಯಾಚಿತ್ರಗಳ ಪೇಜ್ಗಳನ್ನೇ ಹುಡುಕುವವಳು. ಯಾಕೋ ನನ್ನೊಳಗೊಂದು ಅಳುಕು ಸುಳಿದದ್ದು ಸುಳ್ಳಲ್ಲ. ನಮ್ಮಂತವರ ಸಂತಸಕ್ಕೆ ಅದೆಷ್ಟೋ ಹಕ್ಕಿಗಳು ಕ್ಯಾಮರದ ಮುಂದೆ ನಾಚಿ ಖಿನ್ನಾದದ್ದು ನನ್ನ ಕಲ್ಪನೆಯ ಅನುಭವಕ್ಕೆ ನಿಲುಕದೇ ಇರಲಾರದು,,,,,

ನಮ್ಮೊಳಗನ್ನೊಮ್ಮೆ ಒರೆ ಹಚ್ಚಿಕೊಳ್ಳುವಂತೆ ಪ್ರೇರೇಪಿಸಿದ ಅಬ್ದುಲ್ ರಶೀದ್ ರವರಿಗೆ ವಂದನೆಗಳು 


ವಿಜಯ ಕರ್ನಾಟಕದಲ್ಲಿನ " ಕಾಲು ಚಕ್ರ" ಕಾಲಂನ ಅಬ್ದುಲ್ ರಶೀದ್ ರವರ ಲೇಖನ; ಪಕ್ಷಿ ಫೋಟೋಗ್ರಾಫಿಯ ಕುರಿತು

http://www.vijaykarnatakaepaper.com/Details.aspx?id=11980&boxid=52842916

No comments:

Post a Comment