Sunday 30 March 2014





ಸನ್ಯಾಸತ್ವವ ಹೊಂದುವ ಮುನ್ನ ಮನಸು
ತೀವ್ರವಾಗಿ ಸಂಸಾರಿಯಾಗಿರುತ್ತದೇನೋ
ಹಂಬಲಗಳೆಲ್ಲಾ ಬೆಂಬಿಡದೆ ಕಾಡಿ
ದೊರೆತ ಅಲ್ಪ ತೃಪ್ತಿ, ದೊರೆಯದ ಮಹಾ ಅತೃಪ್ತಿಗಳಲಿ ಮನವು ಹೊಯ್ದಾಡಿ
ಕಂಗೆಟ್ಟು ದಿಕ್ಕೆಟ್ಟು ವಿಧಿ ಕೈಚೆಲ್ಲಲು
ಆ ಮಹಾದೇವನೇ ಗುರುವಾಗಿ ಗುರಿ ಕಾಯಬೇಕೇನೋ.....


***


ನೀನೆಷ್ಟು ಮುನಿದರೇನು
ನಾ ಉರಿದೇ ಹೋದ ಮೇಲೆ..


***


ಬದುಕು ನೀಡಿದ್ದು ಉಸಿರನು
ಮಿಕ್ಕವನ್ನು ಗಳಿಸಲು ಅವಕಾಶಗಳನು
ಮತ್ತೂ ಸಾಧಿಸಲು ಕೆಲ ಕಾಮನೆಗಳನು
ಇದರ ನಡುವೆ ಪ್ರೀತಿಸಲು ಹಲವನು.. 
ಚಂದ್ರ, ಹೂ, ತಾರೆಗಳ ಕನಸುಗಳು
ಮತ್ತೂ ನೀನು,,, 
ನನ್ನೊಳಗೊಂದು ದಿವ್ಯ ಭ್ರಮೆಯಾಗಿ,,,,,


***


ನಡೆದಷ್ಟು ದಾರಿ ಸವೆಯುತ
ಮೂಡುತ್ತಿದೆ
ಜೀವನಕ್ಕೊಂದು ಚಿತ್ರ 
ಅದು ನೀನಲ್ಲ ನಾನಲ್ಲ
ಹಲವು ಸೊಗಸುಗಳ ಸೋಪಾನ
ಹೃದಯ ದೇವನ ಕೃಪೆಯ 
ಸೃಷ್ಟಿಯೊಳ ಪ್ರೀತಿಸೊ ಮನಗಳದು...
ನಿನ್ನಂಗಳ ನನ್ನಂಗಳದವು...


30/03/2014

No comments:

Post a Comment