Wednesday 5 August 2015

ಕವನ

ಕೆಂಪು ಕುಂಡ

ದನಿಯೆತ್ತದ ಹೊರತು
ಉಸಿರಿದ್ದ ಪರಿವೆಯೇ ಇಲ್ಲದಂತೆ
ಉಸಿರಾಡಿದ ಕ್ರೂರತೆ
ತಗ್ಗಬೇಕಾಗಿ ಏದುಸಿರ ಕೂಗು

ಇದು ಇಂದು ನೆನ್ನೆಯದಲ್ಲ
ಉಸಿರಿದ್ದ ಕಾರಣ
ಉಸಿರು ತಾಗಿ ಹೋದ ಕಾರಣ
ಕಿಚ್ಚು ಹೊತ್ತಿ ಹಬ್ಬುತ 
ಸದ್ದಡಗಲಿ ಏರಿ ನಿಂತ ಅಮಾನವೀಯತೆ...!

ಕಾಯ್ವ ಕೈ ಕಾಡುವ ಕೈ
ಹೊತ್ತಿನ ತುತ್ತ ನೆಚ್ಚಿ ಗೆಯ್ವ ಕೈ
ಕತ್ತರಿಸಿದ ಬೆರಳುಗಳು
ಒಂದಾಗಿ ಬಿತ್ತಿದ ನೆಲವದು
ಕೊಯ್ಲಿನೊಳು ಕೊಂದುಬಿಟ್ಟ 
ಬದುಕು ನಂಬಿಕೆ ವಿಶ್ವಾಸಗಳು
ಆ ಮಣ್ಣಿನ ಗದ್ದೆ ಈಗ ಕೆಂಪು ಕುಂಡ... !

05/08/2015