Saturday 29 March 2014





ಒಬ್ಬ ವಿಚಾರವಾದಿ ಎನಿಸಿಕೊಂಡವನ ವಿಚಾರ, 
ಛೇ ಪಾಪ ಅನಿಸಿಕೊಂಡದ್ದೇ ನನಗೆ ಸೋಜಿಗ, 
ಸಮಾಜಕ್ಕಾಗಿಯೇ ತಾನೆಂದು ಹೋರಾಡುವವ 
ತನಗಾಗಿಯೇ ಒಂದು ಹೊಸ ಮುಖವ ಹೊಂದಿ, 
ಎಲ್ಲರೆದುರು ಬಚ್ಚಿಟ್ಟ,, ಕೊನೆಗೆ ತನ್ನ ಕನ್ನಡಿಗೂ,,
ಈಗೀಗ ದೂರದ ಬೆಟ್ಟ ನುಣ್ಣಗೆ, ಅನ್ನೋ ಮಾತೆ ಹೆಚ್ಚು ನೆನಪಾಗುವುದು

***

ನಿನ್ನ ಪ್ರೀತಿಗಿಂತ ನಿನ್ನ ಮೌನ ಗೆದ್ದಿತ್ತು ನನ್ನ
ಹೌದು ಮಾತಿಗಿಂತ ಮೌನ ಹೆಚ್ಚು ಅರ್ಥೈಸುತ್ತದೆ
ನಿನಗೆ ನನ್ನನು, ನನ್ನ ಪ್ರೀತಿಯನು,,
ಮೌನದಾಚೆಯ ಗಡಿ ದಾಟಿ ಕಳೆದು ಹೋದ ನನ್ನ
ಹುಡುಕಲೆಂತು ನೀ, 
ಸಿಗದ ಶಬ್ದವದು ಗಾಳಿಯೊಳು ಲೀನವಾದಂತೆ
ನೀನೇ ಸಡಿಲಿಸಿದೆ ಕೈ, ಜಾರಿ ಬಿದ್ದದ್ದು ನನ್ನ ತಪ್ಪೇ,,, ?

***

ಎನ್ನ ಹೆಚ್ಚು ಕಾಡುವ ಕನಸೆಂದರೆ
ಕನಸೊಳು
ನೀ ಬರುವೆನೆಂದು ಬರದೇ ಹೋದದ್ದು...

***

ನನ್ನ ವೇದಾಂತಕ್ಕೆ ಬೆಚ್ಚಿದ ಹಿರಿಯರು
ನನ್ನ ಪ್ರೇಮಕೆ ಹುಚ್ಚೆದ್ದ ಕಿರಿಯರು
ಕಂಡರು ಮಕ್ಕಳಂತೆ ;
ಅವರವರ ವಾಸ್ತವಕೆ ಮರಳಲೊಮ್ಮೆ
ಮತ್ತೂ ನಾನೇ ವಿರುದ್ಧ ದೆಸೆಗಳ ವರಸೆ ಶುರುವಿಟ್ಟೆ,,

***

ಸುಗಂಧ ಹೆಚ್ಚು ಬೀರಿದರೂ
ಒಮ್ಮೊಮ್ಮೆ ಡಸ್ಟ್ ಅಲರ್ಜಿ,,, 
ಅದೇ ಅಮೃತ ವಿಷವಾದ ಘಳಿಗೆ,,,

28/03/2014

No comments:

Post a Comment