Thursday 27 February 2014

ಕವನ; ಬೇಗೆ

ಅನಾದಿ ಕಾಲದಿಂದಲೂ ಲೇಖನಿಯೊಂದೇ ಸತ್ಯ 
ಕಾವ್ಯದೊಳು ಜೀವ ನೀಡಿದ್ದಕೂ ದ್ವೇಷವನ್ನಡಗಿಸುವುದಕೂ
ಪೋಷಣೆಗೆಂದು ಪೊಗಳಿದರೂ , ನೊಂದು ಜರಿದು ಶಾಪವನ್ನೀಯ್ವಕೂ
ಭಕ್ತಿ-ದೇಶ ಭಕ್ತಿ ಮೆರವಕೂ, ಕೊರೆವ ದೇಶ ದ್ರೋಹಕೂ
ಸತ್ಯವೊಂದೇ ಲೇಖನಿ, ದ್ರೋಹವಲ್ಲದ್ದು
ಅಷ್ಟು ನಂಬಿಕೆಯಿಟ್ಟ ಲೇಖನಿ ಕೈ ತಾಗಿತೇನೋ ಬುದ್ಧಿಮತ್ತೆಗೂ
ಕಲಿಯುಗವಂತೆ ಪಾಪಕ್ಕಿಲ್ಲದಂತೆ ಚಿಂತೆ
ನೊಂದು ಬೆಂದರೂ ಬಾಯ್ಬಿಡಲಾರದಂತೆ
ಉಸಿರುಗಟ್ಟಿಸೊ ಸಮಾಜದೊಳು
ಲೇಖನಿಯು ಅಕ್ಷರಗಳಲಿ ದ್ರೋಹವೊಂದನ್ನಡಗಿಸಿ ನಲಿವ ಮೆರೆದರೂ
ಹೆಣ್ಮನದ ಆ ಅಸಹಾಯಕತೆಯೇ ವರದಂತಿದ್ದರೂ
ಲೇಖನಿಯ ಗುರುತು, ಜನ ಶಕ್ತಿಯ ಮೀರೊಂದು ಶಕ್ತಿ
ಪಾಪಗಳ ಹೊಸಕದೇ ಬಿಡದು, ಇಂದಲ್ಲ ನಾಳೆ
ಕಣ್ಣೀರ ಹನಿಗಳು ದಿಟವಾಗಿದ್ದೊಡೆ
ನೋವುಗಳೇ ನೊಂದು ಜೊತೆಯಾಗಿದ್ದೊಡೆ......


24/02/2014

No comments:

Post a Comment