Friday 28 February 2014

ಬಹಳಷ್ಟು ಬಾರಿ ಅವ ಹೆದರಿದ್ದು
ನನ್ನ ಅಕಾರಣ ಖುಷಿಗಳಿಗೆ
ನೋಡಲಾರದೇ ದೂರ ಉಳಿದದ್ದು
ನಗುವಿನ ಅರ್ಥ ತಿಳಿದದ್ದೇ...!


***

ಎನ್ನ ಸಂಭ್ರಮಗಳಿಗೆ ಅಚ್ಚರಿಪಡುವ
ಓ ಗೆಳೆಯನೇ,
ನೀನೊಂದು ಸಂಭ್ರಮವೇ ಆಗಿದ್ದೆ
ಕಳೆದಿರುಳು ಕನಸೊಳು
ಎನ್ನನೇ ಅಚ್ಚರಿಗೊಳಿಸಿ!!.........


***

ಮನಸ್ಸು ತೀರ ಮೃದುವಾಗಬಾರದೆಂಬ
ಬುದ್ದಿಜೀವಿಗಳ ಮಾತು;
ಮೆದುವಾಗಬೇಕು ಭಾವ ತಾಪಗಳಿಗೆ
ಆ ಮನದ ಮೃದುತ್ವವ ಅನುಭವಿಸದೇ
ಹೋದೆಡೆ ಮನಸಿದ್ದೂ ನಮ್ಮದಾಗದು
ಕಳೆಯಬೇಕು ನಾವೇ ನಮ್ಮಯ ಮೃದುತ್ವದೊಳಗೆ
ಹೊರಗಿನ ಕ್ಷೋಭೆಗಳೂ ನಮ್ಮನು ಕದಲಿಸದಂತೆ!!


27/02/2014

No comments:

Post a Comment