Thursday 26 September 2013

ಕಾಲ ಮುಂದೆ ನಡೆದುಬಿಡುವುದು,
ಇಂದು ತೋರಿದ ಬಿಗುವು
ಮುಂದೊಂದು ದಿನದ ಪಶ್ಚಾತ್ತಾಪ;
ಇದು ಕಾರಣ, ಕ್ಷಮೆ ಕೋರಲು ವಂದನೆಗಳ ಅರ್ಪಿಸಲು
ಮನವೆಂದಿಗೂ ಹಿಂದೆ ಬೀಳಬಾರದು;
ಹಾಗೆಯೇ ಜೊತೆಯಾದ ಸಂಬಂಧಗಳು
ಬಿಟ್ಟು ನಡೆದರೂ ಬಾಧಿಸಬಾರದು
ಉಳಿಸಿಕೊಳ್ಳುವ ಪ್ರಯತ್ನ ಇನ್ನೂ ಬಾಕಿಯಿತ್ತೆಂದು 

ದಿವ್ಯ ಆಂಜನಪ್ಪ
27/09/2013

No comments:

Post a Comment