Saturday 14 November 2015

ಪದ್ಯ

ವಸ್ತು,


ಯಾವ ವಸ್ತುವಿಗೆ
ಇಡೀ ಜೀವಭಾರವ ತೂಗಿಬಿಡುವೆವೊ
ಅವುಗಳೇ ನೆಲಮಟ್ಟಕ್ಕೆ ಬಗ್ಗಿಸಿಬಿಡುವವು..

ಯಾವುದನ್ನೂ ಹಿಡಿದಿಟ್ಟು 
ಮೆರೆಯಬಾರದು
ಹಕ್ಕೆಂದು..
ಒಲಿಯಬೇಕು ಎಲ್ಲವೂ ನೀತಿಗೆ

ಉಡಾಫೆಗೊಂಡ ಮನಸ್ಸು
ರಮಿಸದ ನಮ್ಮ ಕಣ್ಣು
ಇರಲಿ ಬಿಡು ಹೊರಳಿಸೋಣ 
ಮತ್ತ್ಯಾವುದೋ ನಿಃಸ್ವಾರ್ಥದ ಬದುಕೆನೆಡೆಗೆ

ನಾನು, ನನ್ನದು ನನಗಾಗಿಯೇ ಎಂದು
ಇಲ್ಲಿ ಇದುವರೆಗೂ ಏನೂ ಇರಲಿಲ್ಲ..
ಇರಬಾರದು ಕೂಡ..

ಹಾಗೆ ಇದ್ದು ನಿಂತು ಬಿಟ್ಟರೆ 
ಗಾಣದ ಎತ್ತಾಗಿಬಿಡುವೆ
ಒಂದೇ ವೃತ್ತಕೆ, ಒಂದೇ ಆಸೆಗೆ

ವಿಶಾಲವಾಗಿ ಹರಡಿ ನಿಂತುಬಿಡುವ
ಬಿಟ್ಟುಕೊಟ್ಟು ಬಿಳಲುಗಳನು ಆಲದ ಮರದಂತೆ..
ಹಬ್ಬಿದಷ್ಟೇ ಅದರ ಗರಿಮೆಯಂತೆ..

07/11/2015

No comments:

Post a Comment