Thursday 12 November 2015



ಏನೆಲ್ಲಾ ತಳಮಳಗಳ 
ಹೊತ್ತರೂ
ಶಾಂತವಾಗಿ ಹಸಿರಾಗಿ 
ಹೊಮ್ಮುನ ಪೃಥ್ವಿ
ತಳಮಳಗೊಳ್ಳುತ್ತಲೇ 
ಉರಿವ ಸೂರ್ಯ
ಅನೇಕ ಭೂಮಿಗಳ 
ಹೆತ್ತು ಆಡಿಸಿ ಮತ್ತೂ ಉರಿವನು
ಭೂಮಿ ಬಳಗಗಳ 
ಬೆಳಗಲು ಬೆಳಕಾಗಿ
ಉರಿ, ಬೆಂಕಿ, ತಾಪ, ಜ್ವಾಲೆಗಳು 
ಪೋಷಣೆಗಳೇ ಸರಿ
ದೂರದಿಂದ.... 

*****

ಬಿಂಕ ಬಿಟ್ಟ ಹುಡುಗ
ಸುಂಕ ಮುರಿದ ಸರದ್ಹಾಂಗ
ಸರಿದಾಡುತಾನ ಸಲೀಸ 
ಕುತ್ತಿಗೆಯ ಸುತ್ತ ಮುತ್ತ 
ಪೋಣಿಸುತ್ತ ಒಂದೊಂದೇ 
ಸರದ ಮುತ್ತ...!!

*****

ಹೀಗೆ ಅವನ ಕೇಳಿದೆ
ಪ್ರೀತಿ ಹೆಚ್ಚಾದರೆ ಏನು ಮಾಡಬೇಕೆಂದು
ನನಗೂ ಇನ್ನೂ ಗೊತ್ತಾಗದೆ
ನಿನ್ನೊಳಗೆ ಯೋಚಿಸುತ ಕೂತೆ
ಎಂದನವನು... 
ಪ್ರಶ್ನಿಸದವನು... 

*****

ಮೌನವ ಮೀಟುವ
ಈ ಕೆಲ ನೋವುಗಳು
ವೀಣೆ ನುಡಿದಂತೆ ಮಿಡಿದು 
ಹೊರಡಿಸಿದ ಆ ಸ್ವರಗಳ
ಹೆಸರಿಸದಾದೆ
ಗಂಧ ಗಾಳಿಯಿಲ್ಲವೋ ಎನಗೆ
ಈ ಗೀತೆಯದ್ದು... !!!

******

ಮುಳುಗಿದರೂ ಕರಗದ
ಅನೇಕ ಮಣ್ಣಿನ ವಿಗ್ರಹಗಳಂತೆ
ಈ ಕನಸು ಇರುಳ ಹೊಕ್ಕಿ
ನಕ್ಷತ್ರಗಳಾದಂತೆ ಉಳಿದು ಆಗಸದಲಿ....

23/08/2015

No comments:

Post a Comment