Friday 24 July 2015

ಗಟ್ಟಲೊತ್ತಿ ಬರುವಾಗ

ಯಾರಿಗಾಗಿ ಬದುಕು ಎನಿಸುವಾಗ

ಕಣ್ಣೀರು ಹರಿದರೆ

ಅದು ಕರುಣೆ

ನಾವು ನಮ್ಮ ಮೇಲಿಟ್ಟದ್ದೇ..

ನೋವೇ ಆದರೂ ನೋಯದ ರೀತಿ

ಬಹುಶಃ ನಮ್ಮ ಆತ್ಮಬಲ

ಸಿದ್ಧಿಸಲಿ ವೃದ್ಧಿಸಲಿ

ಇಂತಹದೇ ಹಲವು ಬಾರಿಗಳಲಿ ಎನುವಾಗಲೂ

ಹೊಟ್ಟೆ ಹಿಸುಕಿದಂತೆ ಎಂತದ್ದೊ ಯಾತನೆ

ಈ ಬಾರಿ ಕ್ಷಮಿಸಿ

ಮುಂದಿನ ಬಾರಿ ಪ್ರಯತ್ನಿಸುವೆ


ಬಹುಶಃ ಗೆಲ್ಲುವೆ....


09/07/2015


******

ಬಡಿಯಲಿಲ್ಲ ಬೈಯ್ಯಲಿಲ್ಲ

ಅತ್ತು ಕರೆದು ರೋದನೆ

ನಡುರಾತ್ರಿ ದಿಢೀರನೆ ಸೂರ್ಯಬೇಕೆಂದಂತೆ

ಬಯಸಿ ಸಿಗದೆ 

ಬರುವ ತನಕ ನಿದ್ದೆಗೆಟ್ಟು ಕಣ್ಣೀರಿಟ್ಟು 


ಬೆಳಕು ಹರಿವಾಗ ಗಾಢನಿದ್ದೆಗೆ....


*****

ಇನಿಯನ ಮಾತುಗಳು

ಎದೆ ಕೊಳದೊಳು 

ಮೀನಿನಂತೆ ಈಜಾಡಿ

ತನು ಮನವೆಲ್ಲಾ ಚಂಚಲ !..


08/07/2015

No comments:

Post a Comment