Friday 24 July 2015

ಅಲೆ ಬಂದು ಕೊಚ್ಚಿ ಹೋದ ಮೇಲೆ
ಏನಿದ್ದರೂ ಕಪ್ಪೇಚಿಪ್ಪುಗಳನ್ನಾಯುವ ಹೊಸ ಕೆಲಸ... 
ನೆನಪು ನೆನಪು...


******

ಹಲವು ಉದ್ದೇಶಗಳ
ಈ ಬದುಕು 
ಒಮ್ಮೊಮ್ಮೆ 
ಒಂದೇ ಉದ್ದೇಶಕ್ಕಾಗಿಯೇ
ಎಂಬಂತೆ ಭ್ರಮಿಸಿ
ರೋಧನೆ ಕೊಡುವುದು

ಹಲವುಗಳಲಿ ಕೆಲವಾದರೂ
ತೀರಿಸುವ
ಇನ್ನಷ್ಟು ಹುರುಪುಗೊಂಡು
ಪ್ರೀತಿ ತೀರದಲಿ
ನಲಿವಿನ ಹೂ ಬನದಲಿ... 
ಮಮತೆಯ ಕೈಸೆರೆಯಲಿ...

*****

ಒಮ್ಮೋಮ್ಮೆ ನನಗೂ ಅಳು ಬರುವುದು
ಕರುಣೆ ಬೇಡಿ ಅಲ್ಲ
ಕಣ್ಣು ಕಳೆದು ನಿಂತಾಗ 
ಬದುಕಿರುವುದಾಗಿ ಪ್ರತಿಕ್ರಿಯೆ..!

14/07/2015

No comments:

Post a Comment