Friday 17 October 2014

ಕವನ

ನಿತ್ಯ ನೂತನ ಆಸೆಗಳಲಿ
ಕರಗಿಸಲಿ ಹೇಗೆ ನಾ ಕನಸುಗಳ
ಕಾಣಬಾರದೆಂದು ಎಷ್ಟು ಬಿಗಿಹಿಡಿದರೂ
ರೆಪ್ಪೆ
ಅದ್ಯಾವ ಮಂಪರಿನಲಿ
ತೆರೆದುಕೊಳ್ಳುವುದೋ ಕನಸಿಗೆಬತ್ತಿ ಹೋದ ಪ್ರೀತಿಗೂ
ನೆನಪುಗಳ
ಬಸಿದುಕೊಂಡ ರೀತಿಗೂ
ಸೋಜಿಗದೂರಿನ ಆಹ್ವಾನ
ಇನ್ನೆಷ್ಟು ತಡೆಯಿಡಿಯಲಿ ನಿದಿರೆ
ಇನ್ನೆಷ್ಟು ಬಿಗಿದು ಹಿಡಿಯಲಿ ರೆಪ್ಪೆ
ಜಾರುತಿದೆ ಮನಸ್ಸು ಕನಸಿನೂರಿಗೆ
ಅರೆ ಬೆಂದ ಇಟ್ಟಿಗೆಗಳೊಂದಿಗೆ
ಬೆಂದುಕೊಳ್ಳೊ ಗೂಡಿಟ್ಟು
ಕಾಯಬೇಕಿದೆ ಸೂಕ್ತ ನೆಲೆಗೆ
ಇಟ್ಟು ಮನಸ ಹರವಲೊಂದು
ದಿಟವಾದ ದಿಟ್ಟ ದೀವಿಗೆ!..


13/10/2014

No comments:

Post a Comment