Wednesday 29 October 2014

ಕವನ

ಸತ್ಯವು ಕಣ್ಣೆದುರೇ ಬಂದು ನಿಂತು 
ನಗಬಾರದಿತ್ತು ಅದಕ್ಕೇನು ಗೊತ್ತಿತ್ತು 
ಅದನ್ನವರು ಮುಚ್ಚಿಟ್ಟಿದ್ದರೆಂದು!

ಈಗ ಅವರೂ ನಗುವರು ಸತ್ಯದೊಡನೆ
ಅಡಗಿಸಿಟ್ಟ ಸತ್ಯ ಶುದ್ಧವೆಂದು 
ಅಶುದ್ಧವನ್ನು ಮೆರೆಸೊ ಮಾಂತ್ರಿಕರು

ಹೆಚ್ಚೇನು ವಿಷಯ ಬೇಕಿರಲಿಲ್ಲ 
ಪಸರಿಸಿದ ವಿಷದ ಗುರುತು ಹಚ್ಚಲು 
ಮೂಢರಲ್ಲ, ಇಲ್ಯಾರು ಮೂಢರಿಲ್ಲ
ನೈತಿಕತೆ ಬಿಟ್ಟ ಆರಾಧಕರು!!

27/10/2014 

No comments:

Post a Comment