Saturday 31 August 2013

ಕೊನೆಗೂ 
ನಗು
ನನ್ನಿಂದ 
ಸಾಧ್ಯವಾಗಲೂ
ಅತ್ತ 
ಅಷ್ಟೂ 
ಘಳಿಗೆಗಳಿಗಿದೆ
ನನ್ನ ಕ್ಷಮೆ

31/08/2013
ಒಂದಷ್ಟು ಹೊತ್ತು ಹರಟು
ನಿನ್ನ ಸ್ವಾರ್ಥತೆ ಇಲ್ಲದೆ
ನೋಡೋಣ ಆಗಲೂ
ನಿನ್ನಲ್ಲಿ ಮಾನವೀಯತೆ
ಜಾಗೃತವಾಗದೇ ಎಂದು


31/08/2013
ಮನೆಯ ಮುಂದಿನ ಬೃಂದಾವನಕಷ್ಟೇ
ದೀಪ ಹಚ್ಚಬೇಕೆಂದಿದ್ದೆ
ಯಾವ ಮಾಯೆಯಲಿ ಮನೆಯೊಳಗೂ
ಬೆಳಕಾಯಿತೋ
ಬೆಂಕಿತಾಗದ ಸೊಡರುಗಲಿದ್ದ ದೀಪಗಳಲಿ
ಙ್ಞಾನವಾಹಿನಿ ಹರಿದು :-)

31/08/2013
ಮಂಜಿನ 
ಚೂರಿಯಾಗಿ 
ಇರಿಯುತ್ತಿದೆ 
ನಿನ್ನ 
ಅಕಾರಣ 
ಮೌನ


31/08/2013
ಹೂವಿನಂತಹ ಮನಸ್ಸು 
ಬೇಗೆಗೆ ಬಾಡಲು 
ತುಸು ಹಾರೈಕೆ 
ತಂಗಾಳಿಯಂತಹ 
ಇಷ್ಟು ಸವಿ ಮಾತು
ಸಾಕಲ್ಲವೇ 
ಜೀವ ಜೀಕಾಡಲು
ಹೂವಿನ ಉಯ್ಯಾಲೆಯಲಿ

-ದಿವ್ಯ ಆಂಜನಪ್ಪ
31/08/2013
ಕಳೆದ ಕಾಲಕ್ಕೆ 
ಮರೆತ ಭಾವಕ್ಕೆ 
ನನ್ನದೊಂದು
ನಿಟ್ಟುಸಿರು
ಎರಡು ಹನಿ ಕಂಬನಿಯಷ್ಟೇ
ಹೆಚ್ಚಾದರೆ ಉದಯರವಿ
ಸುಡುತಾನೊ ಬೆಳ್ಳಂಬೆಳಗ್ಗೆ 


31/08/2013

Friday 30 August 2013

ಅರಳುವ ಮನವ 
ಮುದುಡಿದ ಭಾವವ
ಒಮ್ಮೆಲೆ 
ಮಡಿಸಲಾಗದು ಬಿಡಿಸಲಾಗದು
ಕಾಯಬೇಕಷೇ
ತಾಳ್ಮೆಗೆ 
ಮೃದುವಾಗಬಹುದೆಂದು
ಆತುರಪಟ್ಟರೆ
ಮುರಿವುದು 
ಮಾನಸ ಪಕಳೆಗಳು

-ದಿವ್ಯ ಆಂಜನಪ್ಪ
30/08/2013
ಹಾಗೇ ಸುಮ್ಮನೆ...... :-)

ಮಳೆಯಲಿ ಬೇಸಿಗೆಯ
ಬೇಸಿಗೆಯಲಿ ಮಳೆಯ
ತರಿಸುವವ
ಮೋಡಿಗಾರ
ಮೇಘರಾಜ
ಕ್ಷೀಣಿಸಿದರೂ
ಬಿಡಿಸುವನು
ಬಣ್ಣದ ಚಿತ್ತಾರ!!

-ದಿವ್ಯ ಆಂಜನಪ್ಪ
30/08/2013
ಪ್ರೀತಿ 
ಪರಿಚಯಿಸಿ
ಸ್ನೇಹ 
ತೊರೆದ
ಕತೆಗೆ
ಅವನೇ
ಕರ್ತೃ


30/08/2013
"ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ
ಗೆಳತೀ ಓ ನನ್ನ ಗೆಳತಿ......."

ಈ ಸಾಲಿನ ಕವಿಗಳು ಯಾರೆಂದ ಈ ಕ್ಷಣಕ್ಕೆ ನೆನಪಿಲ್ಲ. ಆದರೆ ತುಂಬಾ ಕಾಡುವ ಸಾಲುಗಳು... ಇತ್ತೀಚಿನ ದಿನಗಳಲ್ಲಿ. ಈ ಹಾಡು ನನ್ನ ಕಾಲೇಜು ದಿನಗಳಲ್ಲಿ ತುಂಬಾ ಫೇಮಸ್. ನಮ್ಮ ಟಿ.ಸಿ.ಹೆಚ್ ನಲ್ಲಿ ವಾರಕ್ಕೊಂದು ಪ್ರೊಗ್ರಾಮ್ ಕಂಪಲ್ಸರಿ. ಎಲ್ಲರೂ ಭಾಗವಹಿಸಲೇ ಬೇಕು ಇಂಟರ್ನಲ್ ಮಾರ್ಕ್ಸ್ ಉಂಟು. ಹಾಗಾಗಿ ಬರ್ದಿದ್ರೂ ಹಾಡ್ಬೇಕು ನೃತ್ಯ ಮಾಡ್ಬೇಕು ಮೋನೋ ಆಕ್ಟ್ ಮಾಡ್ಬೇಕು..... ಆಗಲ್ಲ ಬರಲ್ಲ ಅನ್ನಂಗಿಲ್ಲ. ಅಗ್ಲೇ ನಮಗೂ ಇವೆಲ್ಲಾ ಬರುತ್ತಾ ಅಂತ ಗೊತ್ತಾಗಿದ್ದು :-). ಈ ಸಂಬರ್ಭಗಳಲ್ಲಿ ಹುಡುಗರೆಲ್ಲಾ ಹೆಚ್ಚು ಈ ಹಾಡನ್ನೇ ಹಾಡ್ತಿದ್ರು ಯಾರ್ಯಾರ್ನೋ ಮನಸಲಿಟ್ಕೊಂಡು. ಕೇಳಿ ಕೇಳಿ ನಮಗೂ ಬಾಯ್ ಪಾಠ. ಪಾಪ ಅವರ ವೇದನೆ ಏನಿತ್ತೋ. ಅಗೆಲ್ಲಾ ನಾವು ಹಾಡಿನ ಧಾಟಿ, ರಾಗ ಏರಿಳಿತ ಅಷ್ಟನ್ನೇ ಗಮನಿಸುತ್ತಿದ್ದೆವೇನೋ ಅದರ ಭಾವಾರ್ಥದ ಗೋಜಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ. ಭಾವಗೀತೆಗೆ ಚಿತ್ರಗೀತೆಯಂತಹ ನೃತ್ಯ ಸಂಯೋಜನೆ. ಯಾವ್ದೋ ಚಿತ್ರಗೀತೆಗೆ ತಮಟೆ ಬಡಿದು ನೃತ್ಯ ಸಂಯೋಜನೆ ಹೀಗೆ ಹೊಸ ಹೊಸ ಪ್ರಯತ್ನ ನಮ್ಮದು. ಬಹಳ ಸ್ಟ್ರಿಕ್ಟ್ ನಮ್ ಕಾಲೇಜ್ ಬೇರೆ ಹೆಚ್ಚು ಕಡಿಮೆ ಆದ್ರೂ ಸರಿಯಾಗ್ ಬೈತಿದ್ರು. ತಂಡದ ಸಾಧನೆಯೇ ಒಂದು ಖುಶಿ. ಆಗಿನ ಹಾಡುಗಳೆಲ್ಲಾ ಈಗ ಅರ್ಥ ನೀಡುತ್ತಿವೆ ಅನಿಸುತ್ತಿದೆ ನನಗೆ. ಏಷ್ಟ್ ಲೇಟ್ ನಾನು ಅನ್ಸುತ್ತೆ :-)
ಈ ಮೇಲಿನ ಹಾಡು ಏಷ್ಟು ಭಾವಪೋರ್ಣ; ಹೌದಲ್ವಾ? ಯಾರನ್ನಾದರೂ ತುಂಬಾ ಕಾಡಿಸೋದು ತಪ್ಪು. ಆ ವೇದನೆಯನ್ನು ತಾಳಲಾರದೆ ಕವಿಗಳು ತನ್ನನ್ನು ಕೊಂದುಬಿಡು ಆದರೆ ಹೀಗೆ ಕಾಡಬೇಡವೆಂದು ಬೇಡುತ್ತಿದ್ದಾರೆ. ಜೀವನದಲ್ಲಿನ ಯಾವ ವಿಚಾರ ಕವಿಗೆ ವಸ್ತುವಾಗಲಾರದು ಹೇಳಿ? ಎಲ್ಲವೂ ಸಾಧ್ಯ. ಅದಕ್ಕಾಗಿಯೇ ಕವಿಗಿಲ್ಲ ಯಾವುದರ ಹಂಗು. ಭಾವಗಳ ಬಂಧಿಸುವ ಅನಿವಾರ್ಯತೆ. ನಿಜ ಸ್ವತಂತ್ರ್ಯ ಅಂದರೆ ಇದೇ ಅನಿಸುತ್ತೆ ನನಗೆ. ಮನಬಿಚ್ಚಿ ಹಾರುವ ಭಾವಗಳ ತಾರಾಟವ ಗಾಳಿಪಟವೆಂಬಂತೆ ನೋಡಿ ಆಡಿ ಆನಂದಿಸುವ ಸುವವಕಾಶ. ಸಿಕ್ಕರೆ ಬಿಡಬಾರದು ಇಂತಹ ಅವಕಾಶಗಳ....... :-)


ಧನ್ಯವಾದಗಳು
-ದಿವ್ಯ ಆಂಜನಪ್ಪ
30/08/2013

Thursday 29 August 2013

ಭಾವ ಬೆಸೆಯುವ
ಭರಕ್ಕಿಂತ 
ಭಾವ ಹೊಸೆಯುವ 
ವರ ಸಿದ್ಧಿಸಬೇಕು


(ಅದು ಸಾಧನೆ 
ನಾ ಸಾಧಿಸಲಾದದ್ದು ) ;-)

29/08/2013
ಸ್ನೇಹ-ಸಂಬಂಧಿಗಳಿಂದ ಆಕ್ಷೇಪ
ವಿರಹಗೀತೆ ಸಾಕು
ಪ್ರಣಯಗೀತೆ ಬೇಕು
ನನ್ನದೂ ಒಂದು ಭಾವ ನಿಕ್ಷೇಪ
ಬೇಡುತ್ತಿದೆ ಪಕ್ವವಾಗಲೂ 
ಇನ್ನೂ ಸ್ವಲ್ಪ ಸಮಯ ಬೇಕು

-ದಿವ್ಯ ಆಂಜನಪ್ಪ :-)
30/08/2013
ನೀ ದಾರಿ ಬದಲಿಸಿದೆಯೆಂದು 
ನಾನೂ ತಿರುಗಿದರೆ
ಅಷ್ಟೂ ದಿನ ನಮ್ಮ ನೆಡೆಸಿದ
ದಾರಿ ಒಂಟಿಯಾಗಬಾರದಲ್ಲವೇ 

-ದಿವ್ಯ ಆಂಜನಪ್ಪ
29/08/2013
ಕೃಷ್ಣ
ನೀ ಸಿಕ್ಕರೆ
ನಾ ರಾಧೆ 
ಸಿಗದಿರೆ
ನಾ ನಿನ್ನ ಮೀರೆ


29/08/2013
ಪದೇ ಪದೇ
ನೆನಪಾಗೊ ನೆನಪಿಗೆ 
ನೆನಪು
ಎಂದರೆ ತಪ್ಪೇನೋ 
ನೆನಪೆಂಬ 
ನೆಪ
ನಿನ್ನ ನೆನೆಯಲು
ಎಂದರೆ ಸರಿಯೇನೋ 


29/08/2013

Wednesday 28 August 2013

ಚುಟುಕು

ಬರೆದು ಹಾಕಿ
ಇಲ್ಲ 
ಬರೆದು ಹರಿದು ಹಾಕಿ
ಕಳೆದ ಕಹಿ ಘಳಿಗೆಯ
ಜೀವನವದು
ಸವಿಯಲು ಸವಿಯ
ಹೊರತು 
ಸವೆಯಲಲ್ಲ ಕಹಿಯ

-ದಿವ್ಯ ಆಂಜನಪ್ಪ
28/08/2013

ಚುಟುಕು

ಸಮಯ ನೋಡಿ 
ಹೊಂಚ ಹೂಡಿ
ಸೇತುವೆಯಾಗುವ
ನಿನ್ನ ನೆನಪು 
ನಿನ್ನೆಡೆಗೇ
ಸೆಳೆದು ದೂಡುವುದು
ನಾ ಏನು ಮಾಡಲಿ
ಎಲ್ಲಾ 
ನಿನ್ನ ಮೋಡಿ 


28/08/2013

ಚುಟುಕು

ನಿನ್ನ ಮುಂದಿನ 
ದೂರದ ಮಂದಿಗೂ
ತಲುಪುವ ನೀನು
ನಿಲುಕದಾದೆ
ಎನಗೆ 
ದೀಪದ ಬುಡ
ಕತ್ತಲೆನ್ನುವಂತೆ



27/08/2013

ಚುಟುಕು

ರಸಿಕ ಕೃಷ್ಣನ
ವೈಭವೀಕರಿಸುವ
ಅನುಕರಿಸುವ ಜನ
ಮರೆತರೊ
ಆತ ಸಾರಿದ
ಸಂದೇಶವ 


27/08/2013

Tuesday 27 August 2013

 ನೆನ್ನೆ ರಾತ್ರಿ ಊಟಕ್ಕೆ ಕೂತ ಸಮಯ, ಅಪ್ಪನಿಂದ ನೇರ ಮಾತು, "ದಿವ್ಯಾ, ಬರಿತೀನಿ ಅಂತ ಏನೇನೋ ಬರಿಬೇಡ ಕಣಮ್ಮ", ನನಗೆ ಒಮ್ಮೆಲೆ ಆಶ್ಚರ್ಯ ಆತಂಕ. "ಏನ್ ಬರಿಬಾರ್ದು ಕಣಣ್ಣಾ?" ತಗ್ಗಿದ ದನಿಯಲಿ ಕೇಳಿದೆ. "ನೆಟ್ನಲ್ಲಿ ಏನೋ ಬರ್ದು ಹಾಕ್ತಿರ್ತಿಯಲ್ಲಾ?". ನನಗೋ ಭಯವಾಗೋಯಿತು. ನಾನ್ ಬರಿಯೋ ಚುಟುಕು ಹನಿಗವನಗಳ ಬಗ್ಗೆಯೇ ಮಾತಾಡ್ತಾ ಇದ್ದಾರೆ ಎಂದೆನಿಸಿತು. ಫೇಸ್ ಬುಕ್ಕಿನಲ್ಲಿ ಎಲ್ಲರೂ ಕೇಳುವ ಹಾಗೇ; ಅದರಲ್ಲಿನ ಹುಡುಗ ಯಾರು ಅಂತ ಕೇಳ್ತಾ ಇದ್ದಾರಾ?? ಒಂದು ಕ್ಷಣ ಉಸಿರು ಬಿಗಿಹಿಡಿದಂತೆ..... ಅದನ್ನೆಲ್ಲಾ ನಮ್ಮಪ್ಪ ಯಾವಾಗ್ ಓದಿದ್ರು?. ಯಾರ್ ಓದಿಸಿರಬಹುದು ಎಂದೆಲ್ಲಾ ಮನಸ್ಸು ಓಡುತ್ತಿರುವಾಗಲೇ ಅಪ್ಪನಿಂದ ಮುಂದುವರೆದ ಮಾತು. "ನೋಡಮ್ಮ ಯಾರೋ ಒಬ್ಬ ಲೇಖಕರು ಗಣೇಶನ ಬಗ್ಗೆ ನೆಗೆಟೀವ್ ಆಗಿ ಪುಸ್ತಕ ಬರೆದಿದ್ದಾರೆ. ಅದೀಗ ವಿವಾದದಲ್ಲಿದೆ ಪೇಪರ್ನಲ್ಲಿದೆ ಓದು. ನೀನ್ ಬರಿಯೋದರ ಮೇಲೆ ನಿಗಾ ಇರಲಿ ಅಂತ ಹೇಳೋಕ್ ಬಂದೆ". ನನಗೇ ಓಹ್...... :-) ಸುಸ್ತಾಗಿತ್ತು. ಚೇತರಿಸಿಕೊಂಡು, "ಇಲ್ಲಣ್ಣ ನಾನಿನ್ನೂ ಹೂವು, ಹಣ್ಣು, ಕಾಯಿ ಅಂತ ಬರಿತಾ ಇದ್ದೀನಿ ಅಂದೆ". ಅಪ್ಪನಿಂದ ಇನ್ನಷ್ಟು ವಿಚಾರ ಕೇಳಿ ತಿಳಿದೆ. ಖುಷಿಯಾಯಿತು ಅಪ್ಪ ನನ್ನ ಎಲ್ಲೊ ಇಟ್ಟು ನೋಡ್ತಾ ಇದ್ದಾರೆ; ನಾನ್ ಸೋಮಾರಿಯಾಗಿ ಕಾಲಕಳೆದೆ ಅಂತ ಬೇಸರವೂ ಆಯಿತು. ಅದೇ ಗುಂಗಿನಲ್ಲಿದ್ದ ನನಗೆ ಬೆಳಗ್ಗಿನ ಸುದ್ದೀ ವಾಹಿನಿಯೊಂದರಲ್ಲಿ ಅಪ್ಪ ಹೇಳಿದ ಪುಸ್ತಕದ ಕುರುತಾಗಿ ಮತ್ತಷ್ಟು ಮಾಹಿತಿ ದೊರೆತವು.
ಲೇಖಕರು; "ಯೋಗೇಶ್ ಮಾಸ್ಟರ್". ಪುಸ್ತಕ; "ಢುಂಢೀ". ವಿವಾದಗಳಿಗೊಳಗಾಗಿ ಸುದ್ಧೀ ವಾಹಿನಿಯಲ್ಲಿ ಬಿತ್ತರವಾದ ವಿಚಾರ ಸಾರಾಂಶ ಹೀಗಿದೆ; ಗಣೇಶನನ್ನು ಲೇಖಕರು ರೌಡಿಯಾಗಿ, ಕಾಡ ಬಾಲಕನಾಗಿ ಬಿಂಬಿಸಿದ್ದಾರೆ. ಅವನು ಪಾರ್ವತಿಸುತನಲ್ಲ. "ಮಾಲ" ಎನ್ನುವ ದಾಸಿಯ ಮಗ ಎನ್ನುವಾಗ ಆ ತಾಯಿಯ ಚರಿತ್ರೆಯೂ ಸರಿಯಿಲ್ಲವೆಂಬುವಂತೆ ಪುಸ್ತಕದಲ್ಲಿ ಚಿತ್ರಿಸಲಾಗಿದೆ ಎಂದು ವಾಹಿನಿಯು ಪ್ರಸಾರ ಮಾಡಿರುತ್ತದೆ. ಇದರೊಟ್ಟಿಗೆ ಶಿವನನ್ನು ಬೇಡ ಕುಲಕ್ಕೆ ಸೇರಿಸಿ ಆತನನ್ನು ಚಾರಿತ್ಯ ಹರಣ ವಿಚಾರಗಳಲ್ಲಿ ಬಿಂಬಿಸಿ ಲೇಖಕರು ಬರೆದಿದ್ದಾರೆ ಎಂದು ಹೇಳಲಾಗಿದೆ. ವಾಹಿನಿಯಲ್ಲಿ ಲೇಖಕರು, ಜನ ಪೂರ್ಣ ಪುಸ್ತಕವನ್ನು ಓದಲಿ ಹಾಗೇಯೇ ಪುಸ್ತಕದ ಆಧಾರಗಳನ್ನು ಪರಿಶೀಲಿಸಲಿ ಎಂಬಿತ್ಯಾದಿ ಮಾತನಾಡುತ್ತಿದ್ದರು. ಗಣೇಶನ ಹಬ್ಬಕ್ಕೆ ಕಾತುರರಾಗಿ ಸಂಭ್ರಮದಿಂದ ಕಾಯುತ್ತಿರುವ ನಮಗೆ ಈ ವಿಚಾರಗಳು ಈ ಸಂದರ್ಭದಲ್ಲೇಯೇ ಏಕೆ ಬಂದವು ಎಂದೆನಿಸದೇ ಇರಲಾರದು, ಅಲ್ಲವೇ ಸ್ನೇಹಿತರೇ? ಅದೇನೇ ಇರಲಿ ಪುಸ್ತಕವನ್ನು ಓದುವ ಕಾತುರತೆ ಏಕೋ ನನಗೂ ಹುಟ್ಟಿದೆ. ಡಾ||ಚಿದಾನಂದಮೂರ್ತಿರವರು ಪುಸ್ತಕವನ್ನು ಬ್ಯಾನ್ ಮಾಡಬೇಕಾಗಿ ವಿನಂತಿಸುತ್ತಿದ್ದಾರೆ. ವಿವಾದಗಳು ಓದಲು ಪ್ರೇರೇಪಿಸುತ್ತಿವೆ. ಈ ಮಧ್ಯೆ ನನ್ನಂತಹ ಓದುಗರು ಅರ್ಧ ತಿಳಿದು ತಬ್ಬಿಬ್ಬಾಗುತ್ತಿದ್ದಾರೆ.
ಧನ್ಯವಾದಗಳು
ದಿವ್ಯ ಆಂಜನಪ್ಪ

೨೮/೦೮/೨೦೧೩  

ಚುಟುಕು

ಕನಸಿನ 
ಬಣ್ಣ ಕದ್ದ
ಮನಸಿನ 
ಮಾತ ಕದ್ದ
ಚೋರ 
ಅವ 
ಚತುರ 


27/08/2013

ಚುಟುಕು

ಪ್ರೀತಿಯೊಂದು ಭ್ರಮೆ
ಎಂದಾದರೂ
ಭ್ರಮೆಯಲ್ಲಿನ 
ನನ್ನ ಪ್ರೇಮವೂ
ಆಹ್ಲಾದ
ನನ್ನ ಭ್ರಮೆಗೆ
ನಾ ಪ್ರಾಮಾಣಿಕ
ಅನುಭಾವಿ


26/08/2013

ಮನದ ಮಾತು

ಮನಸೇ ಹಾಗೆ ಎಲ್ಲೆಲ್ಲೋ ಓಡಿ ಎಲ್ಲೆಲ್ಲೋ ನಿಲ್ಲಿಸಿ; ಮರೆಸಿ ಎಲ್ಲವ ಮತ್ತೆ ಪ್ರಶ್ನೆಗಳನ್ನು ಎದುರು ನಿಲ್ಲಿಸಿಬಿಡುತ್ತದೆ, "ಇಲ್ಲಿಗೇಕೆ ಬಂದು ನಿಂತೆ?, ಏಕೆ ಓಡಿದೆ? ನಾನೆಲ್ಲಿ ನಿಂತಿದ್ದೆ ಏನಾಗಿ ನಿಂತಿದ್ದೆ... ? ಮನಸ್ಸಿನೊಂದಿಗೆ ಓಡುವುದು ಒಂದು ಮಗುವಿನೊಂದಿಗೆ ಓಡಿದಂತೆ. ಮಗುವಿನ ಓಟ ಅದೊಂದು ಆಟ. ಉದ್ದೇಶವು ಖುಷಿಯ ಹೊರತಾಗಿ ಇನ್ನೇನು ಅಲ್ಲ. ಮನಸ್ಸಿನಂತೆ ನಡೆವ ನಡೆಯೂ ನಿಜವಾದ ಒಂದು ಸಂತೃಪ್ತಿ. "ಏನಿದ್ದರೂ ಇಲ್ಲದಂತೆ" ಎಂಬ ಭಾವ ಹುಟ್ಟುವುದು ನಮ್ಮ ನಮಸ್ಸಿಗೆ ನಾವೇ ಸ್ವತಃ ದ್ರೋಹ ಬಗೆದಾಗಲೇ. ಮನಸ್ಸು ನಿರಂತರ ಸಂಚಾರಿ ಅದರ ಬಯಕೆ ಅಪಾರ. ಒಮ್ಮೊಮ್ಮೆ ಏನೇನೋ ಬಯಸಿ ಕಿನ್ನತೆಗೊಳಗಾಗುತ್ತದೆ. ಈ ಕಿನ್ನತೆ, ದುಃಖ ಇವೆಲ್ಲಕ್ಕೂ ಕಾರಣ ಯಾವುದೋ ಒಂದು ಆಸೆ. ಆಸೆ ಈಡೇರದೇ ಮನಸ್ಸು ಮಗುವಿಂತೆ ಹಟಹಿಡಿದು ಬುದ್ಧಿಗೂ ಮನಸ್ಸಿಗೂ ತಾಕಲಾಟವುಂಟಾಗುತ್ತದೆ. ಕೊನೆಗೆ ಗೆಲ್ಲುವುದು ಯಾವುದೋ? ಆದರೆ ಅಷ್ಟರಲ್ಲಿ ಮನುಷ್ಯ ಕುಗ್ಗಿ ಹೋಗಿರುತ್ತಾನೆ. ಬಂದ ಅತೀ ಸಣ್ಣ ಕಾಯಿಲೆ ನೆಗಡಿಯೂ ಮಹಾ ಮಾರಿಯಾಗಿ ವಾರಗಟ್ಟಲೆ ಕಾಡುತ್ತದೆ. ಸಣ್ಣ ಕೆಲಸವೂ ತನ್ನಿಂದಾಗುವುದೇ ಎಂದು ಯೋಚಿಸುವಂತಾಗುತ್ತದೆ. ಮುಂದೆ ಇದೇ ಅತಿರೇಕವಾದರೇ ಮುಂಚೆ ಹೇಳಿದ ಎಲ್ಲಾ ಗುಣಗಳು ಉಲ್ಬಣವಾಗಿ ನಿಂತಿರುತ್ತದೆ. ಇಷ್ಟೇಲ್ಲಾ ಅನಾಹುತಗಳಿಗೆ ಕಾರಣ "ಆ ಅದ್ಯಾವುದೋ ತೀರದ ಬಯಕೆ, ಆಸೆ". ಒಂದು ಕ್ಷಣ ಯೋಚಿಸುವ; ಈ ಮುಂಚೆ ತನಗೆ ತನ್ನ ಜೀವನದಲ್ಲಿ ಆ ಆಸೆ ಇದ್ದಿತೇ? ಇಲ್ಲದಿದ್ದರೂ ತಾನು ಸುಖವಾಗಿರಲಿಲ್ಲವೇ? ಹೌದು ಎಂದಾದರೇ ಈಗಲೂ ನಾ ಮೊದಲಿನಂತೆ ದೃಡಭಾವದ ಅದೇ ಖುಷೀ ಜೀವಿ ಎಂದುಕೊಳ್ಳಬಹುದಲ್ಲವೇ?. ಇಂತಹ ಘಳಿಗೆಗಳಲ್ಲಿ ಮನಸ್ಸಿಗೆ ಬೇಕಿರುವುದು ಒಂದು ನಿರಾಳಭಾವ. ಅದನ್ನರಿತು ಸುಮಾರ್ಗದಲ್ಲಿ ಮನಸ್ಸಿಗೆ ನಾವೇ ರಮಿಸಬೇಕಿದೆ. ಮನಸ್ಸಿನ ಶಕ್ತಿ ಅಗಾಧ. ಆಸೆಪಡುವ, ಆಸೆಯನ್ನು ಹಸನುಗೊಳಿಸುವ, ಇತರಲ್ಲಿ ಆಶಾಭಾವ ಮೂಡಿಸುವ ಅಮೋಘವಾದ ಶಕ್ತಿ ಅದಕ್ಕಿದೆ. ಮತ್ತೆ ಹೊಸ ಆಸೆ ಹೊಸ ಕನಸ ಕಟ್ಟುವ ಸಾಮರ್ಥ್ಯವಿದೆ. ಯಾರೂ ದುರ್ಬಲ ಮನಸ್ಸಿನವರಲ್ಲ. ನಾವು ಹೇಗೆ ಶಾಲೆಗೆ ಹೋಗುತ್ತ, ಕಾಲೇಜಿಗೆ ಹೊಗುತ್ತಾ ಪಾಠ ಕಲಿತು ವಿದ್ಯಾವ೦ತರು ಎನಿಸಿಕೊಳ್ಳುತ್ತೇವೋ ಹಾಗೆಯೇ ನಮ್ಮ ಮನಸ್ಸನ್ನೂ ಶಿಕ್ಷಿತಗೊಳಿಸಬೇಕು. ಅದುವೇ ನಿಜವಾದ ಶಿಕ್ಷಣ. ಶಿಕ್ಷಣವೆಂದರೆ ಜೀವನ ನಿರ್ವಹಣೆಯ ಕಲೆ, ಉತ್ತಮ ನಡೆ-ನುಡಿ, ಆಚಾರ-ವಿಚಾರಗಳನ್ನು ಅರಿವುದು ಙ್ಞಾನಾರ್ಜನೆ ಸಾಧನ ಎಂದೆಲ್ಲಾ ಹೇಳುವಾಗ ಇಷ್ಟೇಲ್ಲಾ ಕಾರ್ಯಗಳ ಹಿಂದಿನ ಮನಸ್ಸನ್ನು ಮರೆಯುವ ಹಾಗಿಲ್ಲ. ಮನಸ್ಸಿನ ಮೇಲಿನ ಪರಿಣಾಮವೇ ಬಾಹ್ಯ ನಡತೆ. ಹೌದಲ್ಲವೇ ಸ್ನೇಹಿತರೆ? .ಹಾಗಾದರೇ ನಿಮಗೆ ಆಸೆಗಳು ಬಾಧಿಸಿವೆಯೇ???? :-)

ಧನ್ಯವಾದಗಳು
ದಿವ್ಯ ಆಂಜನಪ್ಪ

೨೭/೦೮/೨೦೧೩   

Monday 26 August 2013

ಚುಟುಕು

ಕದಿಯುವವರು ಕದ್ದಾರು
ಎನ್ನ ಕವನವ,
ಕದಿಯಲಾರರು
ಬರಹದ ಭಾವವ
ಮತ್ತೂ
ಕದಿಯಲಸಾಧ್ಯ
ಎನ್ನ ಚುಟುಕುವಿನ
ಚೊಟುದ್ದ ಹುಡುಗನ
ನನ್ನಿಂದ!!..... :-)

26/08/2013

ಚುಟುಕು

ಜೀವನವೆಲ್ಲಾ 
ಪ್ರೇಮಮಯ
ಜೀವಕ್ಕೆ ಪ್ರೀತಿ ಬಿದ್ದ 
ಕನಸಿನಿಂದ 


26/08/2013

ಚುಟುಕು

ನೈಜ ನಡೆ
ಫಾಸಿಯೇ ಆದರೂ
ಕಟ್ಟ ಕಡೆ
ಫಲವದು ಪ್ರಫುಲ್ಲ 


25/08/2013

ಚುಟುಕು

ಎಲ್ಲಾ
ಮೇರುಗಳ
ಮೀರಿದರೂ
ಮೀರಲಾರೆ
ನಿನ್ನ ಮನಸ
ಹಜಾರವ 


24/08/2013

ಚುಟುಕು

ಒಂಟಿ 
ಎನಿಸಲೂ
ದುಃಖಿಯೇ
ಆದರೂ
ನಾ
ನೆನೆವೆ ನಿನ್ನನೇ
ನೀಡು ಬಾ
ತುಸು 
ಚೈತನ್ಯವ
ನಿನ್ನೆದೆಗಪ್ಪಿ 
ಕೆಲ ಕಾಲ 
ಕಳೆದು ನನ್ನಲಿ 


23/08/2013

ಹನಿಗವನ

ಜೀವಕ್ಕೆ ಬೆಲೆ
ಭಾವಕ್ಕೆ ನೆಲೆಸಿಕ್ಕಾಗಲೇ;
ಅದಕ್ಕಾಗಿ ಕಟ್ಟಬೇಕಿದೆ
ಮನಕೊಂದು ನೆಲೆ,
ದಟ್ಟ ಕಡಪಗಳ ಅಡಿಪಾಯದಲಿ
ಬತ್ತಲಾರದ ಪ್ರೀತಿ-ವಿಶ್ವಾಸದ ಸೆಲೆ
ನಿತ್ಯ ನೂತನ ಸಂತೋಷದಲೆ
ದೊಷ ವಿದ್ದರೂ ನಿಭಾಯಿಸುವ ಕಲೆ
ಹೌದು;
ಆತ್ಮವಿಶ್ವಾಸವೇ ಎಲ್ಲಕೂ
ಗಟ್ಟಿ ನೆಲೆ!!! 


-ದಿವ್ಯ ಆಂಜನಪ್ಪ
23/08/2013

Friday 23 August 2013

ಚುಟುಕು

ಈ ಎನ್ನ 
ಪ್ರಿಯ ಕನವರಿಕೆಯ
ಅವನಾಗಿ
ನನ್ನ ಅನುಭಾವ
ಮತ್ತೊಂದು ತರಹದ
ಮಧುರ 


-ದಿವ್ಯ ಆಂಜನಪ್ಪ
23/08/2013

ಚಟುಕು

ಮಿತ 
ಶಬ್ಧದಿ
ನಿನ್ನಷ್ಟೂ
ಭಾವಗಳ 
ತುಂಬಿಕೊಳುವ
ತುಡಿತ;
ನೀನಿರುವ
ಈ 
ಹೃದಯದ 
ಮಿಡಿತ 


-ದಿವ್ಯ ಆಂಜನಪ್ಪ
23/08/2013

ಚುಟುಕು

ನಿನ್ನ 
ಮನಮೋಹಕ
ಮಾಯಾ ಜಾಲದಿ
ಸೆರೆ ಸಿಕ್ಕ 
ಮಿಣುಕು 
ಮೀನು
ನಾನು 


-ದಿವ್ಯ ಆಂಜನಪ್ಪ

22/08/2013

ಚುಟುಕು

ಕಾಗೆಯೆಂದು
ಕುಹುಕವಾಡಿ
ಅದರ ಕಾವಲೇ
ಮರಿಯ ಮಾಡಿ
ಹಾರುತಿರೆ
ತನ್ನದೆನುವ
ಕಪಟಿಯೇ
ಕೋಗಿಲೆ 

-22/08/2013

Wednesday 21 August 2013

ಚುಟುಕು

ಎನ್ನ ಭಾವದ
ಹೊರಚಾಚಿಕೆಗಳೆಲ್ಲಾ
"ತನ್ನ ಕುರಿತಾಗಿಯೇ"
ಎನುವ ಅವನ ಭಾವ
ನನ್ನೆಲ್ಲಾ ಪ್ರಶ್ನೆಗಳಿಗೆ
ಉತ್ತರ....
 — feeling ಯುರೇಕಾss.....


-ದಿವ್ಯ ಆಂಜನಪ್ಪ
21/08/2013

ಹನಿಗವನ

"ಅಂತರಾತ್ಮವಿಲ್ಲದ ಪರಮಾತ್ಮ"

ಜೋಗಿ ಜಂಗಮರಿಗೂ
ಒಂದು ನೆಲೆಯುಂಟು
ಮಾತಿಗೆ ನಿಲುಕದ
ಆಧ್ಯಾತ್ಮ;
ಭೋಗಿ ವಿಲಾಸಿಗಿಲ್ಲ
ತನ್ನದೆನ್ನುವ
ಅಂತರಾತ್ಮ;
ನಿರಂತರ ಸಂಚಾರಿ
ಚಂಚಲಿತ ಮನ
ತನ್ನೊಳಗೇ ತಾ ಅವಿತು
ಕೂತ ಪರಮಾತ್ಮ.

-ದಿವ್ಯ ಆಂಜನಪ್ಪ
21/08/2013
 — feeling ಹತಾಶೆ.

Tuesday 20 August 2013

ಚುಟುಕು

ಸೈರಿಸದ 
ಮನ
ಸೇರಿಸಿ 
ನೋಡುವದು
ಇಲ್ಲದ 
ಅವಗುಣ


21/08/2013

ಚುಟುಕು

ತೊಡಕುಗಳೆಂದು ದೂರ ಸರಿಸಿದ
ಅದೆಷ್ಟೋ ಎಳೆಗಳ;
ಮತ್ತೆ ಹುಡುಕುವಂತೆ ಮಾಡಿವೆ
ಈ ಹೊಸ ಬಗೆಯ ಹೊಡೆತಗಳು 

-ದಿವ್ಯ ಆಂಜನಪ್ಪ
20/08/2013

ಚುಟುಕು

ತಟ್ಟೆಯಲ್ಲಿನ 
ಅನ್ನದಗುಳಿಗೂ
ಹಸಿವೆಯಂತೆ
ಹಸಿದವನ ಹೊಟ್ಟೆ
ಸೇರಬೇಕೆಂಬ...

-ದಿವ್ಯ ಆಂಜನಪ್ಪ
೨೦/೦೮/೨೦೧೩

ಚುಟುಕು

ಬುದ್ಧಿ ಮಾತ ಕೇಳಿ 
ಭಾವ ಬಂಧಿಸುವುದು
ನನಗೆ ನಾ ಕೊಟ್ಟ 
ಶಿಕ್ಷೆ 


19/08/2013

Monday 19 August 2013

ಚುಟುಕು

ಬದುಕೊಂದು ಭಾವಗೀತೆ
ಮನದುಂಬಿ ನೀ ಹಾಡು
ರಾಗ ವ್ಯತ್ಯಾಸವಾದರೂ
ಭಾವಗೆಡದಿರಲಿ ಅಪಚಾರವಾಗಿ

-ದಿವ್ಯ ಆಂಜನಪ್ಪ
19/08/2013

ಚುಟುಕು

ನೆಡೆವ ದಾರಿಯೊಳ್
ಸಿಗುವುದೈ ನೂರ್ಚರಂಡಿಗಳ್
ದಾಟುವೆಯಾದರೆ ನೀ ಮಡಿ
ನಿಂತು ದೂಷಿಸುವೆಯಾದೊಡೆ
ಮೂರ್ಖರೆನ್ವರು ;
ಗುದ್ದಾಡುವುದಾದರೂ
ಗಂಧದೊಡನೆ ಗುದ್ದಾಡೆಂದು 

-ದಿವ್ಯ ಆಂಜನಪ್ಪ
19/08/2013

Sunday 18 August 2013

ಚುಟುಕು

ಹಾಗೇ ಸುಮ್ಮನೆ...... 

ನೀ ಬದುಕಿಗೆ ಬಂದು 
ಭಾವವಾದೆಯೋ
ಇಲ್ಲ
ಭಾವದಲಿ ಮಿಂದು
ಬದುಕಾದೆಯೋ
ತಿಳಿಯದು ನನಗೀಗ;
ನಿರ್ಭಾವುಕತೆಯ ಪರದೆ ಸರಿಸಿ
ತಿಳಿಸು ಬಾ
ನಾನರಿಯೆ
ನಿನ್ನ
ಮೌನದ ಮರ್ಮವ.

-ದಿವ್ಯ ಆಂಜನಪ್ಪ
18/08/2013

ಚುಟಿಕು

ಹಾಗೇ ಸುಮ್ಮನೆ... :-)

ಅಪ್ಪಿ-ತಪ್ಪಿ
ಕನಸಲಿ
ನಾ
ಕೊಟ್ಟ
ಪಪ್ಪಿ
ವಾಪಸ್ ಕೊಟ್ಬಿಡು
ಅಪ್ಪ ಬೈತಾರೆ!! :-)

18/08/2013

ಚುಟುಕು

ಹಾಗೇ ಸುಮ್ಮನೆ.......... :-)

ಮನದ ಬಿಂಬ 
ನಯನ
ಸೋತವೋ 
ನೆನೆನೆನೆದು 
ನೆನೆದವೋ 
ನಿನ್ನ ನೆನಪಿನಲಿ

-ದಿವ್ಯ ಆಂಜನಪ್ಪ
18/08/2013

Saturday 17 August 2013

ಚುಟುಕು

ಮೌನ ಪ್ರೀತಿ;
ಇದೊಂದು ತರಹದ ವಿರಹ!
ವಿರಹದಲ್ಲೊಂದು ಕವನ
ಅದು ಅವನ ಪ್ರೀತಿಯದೇ ಗುಣಗಾನ :-)

-ದಿವ್ಯ ಆಂಜನಪ್ಪ
17/08/2013

ಹನಿಗವನ

"ಸೇವಂತಿ ಚೆಂಡು"

ಇಳಿ ಸಂಜೆಯಲಿ
ತಿಳಿ ಮೋಡಗಳ 
ಮರೆಯಲಿ
ಅವಿತ ಅವನು;
ಮತ್ತೆ ಸೆಳೆಯುವನು
ಸೇವಂತಿ ಚೆಂಡಿನ
ಹೊಸ ಚಿತ್ರದಲಿ,
ಕಣ್ಗಳು ತಂಪಾಗುವ ಘಳಿಗೆಯಲಿ
ಹೊರಗೆಲ್ಲೋ ಹೂವಾಡಿಗನ ಕೂಗು
ಸೇವಂತೀss......

-ದಿವ್ಯ ಆಂಜನಪ್ಪ
17/08/2013

Friday 16 August 2013

ಚುಟುಕು

ಹಕ್ಕಿಯಂತಹ ಮನಸ್ಸಿಟ್ಟುಕೊಂಡು
ಮುರಿಯಲಾರೆ ಕನಸ ರೆಕ್ಕೆಗಳ
ತರಿಯಲಾರೆ ಭಾವದ ಪುಕ್ಕಗಳ
ಕೂರಲಾರೆ ನಾ ಹಾರದ ಹಕ್ಕಿಯಾಗಿ
ಈ ಜಗದ ಕ್ರೂರತೆಗೆ ಒಳಗಾಗಿ ಬಲಿಯಾಗಿ.

-ದಿವ್ಯ ಆಂಜನಪ್ಪ
16/08/2013

ಹನಿಗವನ

*ಮೇಘ ಮಾಲೆ*

ಮೇಘಮಾಲೆಯ ಸರದಾರ ನನ್ನ ನಲ್ಲ
ಮಿಂಚುವನು ಮೊದಲು ಎಚ್ಚರಿಸಲೆಂದೇ
ಗುಡುಗುವನು ದೂರದಿ ನಾ ಬೆಚ್ಚುವಂತೆ;
ಮಿಡಿದು ಕರಗುವನು ತನ್ನೆಡೆಗೆ ಮೌನಿಯಂತೆ,
ಪ್ರೇಮದ ಮಳೆಗರಿವನು ತನ್ಮಯದಿ ಜೀವದಂತೆ,
ಮೋಹದಿ ಬೆಳಗುವನು ಕಾಮನಬಿಲ್ಲಾಗಿ;
ನಿರ್ಮಲ ಮನದ ಬಾಂದಳದಿ ಜ್ಯೋತಿಯಂತೆ.

-ದಿವ್ಯ ಆಂಜನಪ್ಪ
16/08/2013
 

Thursday 15 August 2013

ಚುಟುಕು

ಅವ ಮತ್ತೂ
ಉಳಿದಾನೋ
ಗಾಳಿಯಲಿ
ತೇಲುವ
ಆಮ್ಲಜನಕದಂತೆ
ಬಿಡಲಾರೆನು
ತಬ್ಬಿ ಹಿಡಿಯಲಾರೆನು.... :-)

-ದಿವ್ಯ ಆಂಜನಪ್ಪ
15/08/2013 :-)

ಚುಟುಕು

ಹಗುರಾದಂತೆ 
ಹೇರಿಸುತ್ತಲಿರುವ
ಜೀವನ; 
ತೂಗಿದೆ ತಕ್ಕಡಿಯಾ
ನಾನೋ ಇಲ್ಲ 
ಆ ಒತ್ತಡಗಳೋ?

-ದಿವ್ಯ ಆಂಜನಪ್ಪ
15/08

ಚುಟುಕು

ಹಾಗೇ ಸುಮ್ಮನೆ..... :-)

ಹೃದಯವು ಹಾಡಲು
ಮನದೊಳು ಗೆಲುವಿರಬೇಕು
ಒಲವು ಅಳಿದರೂ
ನಯನವು ಅರಳಿರಬೇಕು

-ದಿವ್ಯ ಆಂಜನಪ್ಪ
15/08/2013

ಚುಟುಕು

ಕಂಡರೆದೆಗೆ 
ಚೂರಿ ಮೊನೆಯ
ಗುರಿಯಿಡುವವರು
ಮರೆತಾರೋ
ತಮ್ಮೆದೆಯಲೊಂದು 
ಹೃದಯ ಮಿಡಿವುದೆಂದು 

-ದಿವ್ಯ ಆಂಜನಪ್ಪ
15/08/2013

Wednesday 14 August 2013

ಚುಟುಕು

ಕೈಗೆಟುಕದ 
ಕಾಮನಬಿಲ್ಲಿಗೂ
ಆಸರೆ 
ಆ ನೇಸರನು;
ನೇಸರನು 
ಸರಸದಿ ಬೆರೆಸಿದ 
ಬೆಳಕನು;
ಅಂತರಂಗದಿ ಮೂಡಿಸಿದೆ 
ಏಳು ನೆರಗನು;
ಹೆತ್ತ ತಾಯಂತೆ 
ಮೋಡಗಟ್ಟಿದ ಮುಗಿಲು.

-ದಿವ್ಯ ಆಂಜನಪ್ಪ
14/08/2013

ಚುಟುಕು

ಮಳೆ 
ನಿಂತ ಮೇಲೂ,
ಉದುರುವ 
ಮರದೆಲೆ 
ಹನಿಗಳಂತೆ;
ನಿನ್ನ ನೆನಪಿನ

ಹನಿಗಳು... 

-ದಿವ್ಯ ಆಂಜನಪ್ಪ
14/08/2013

ಹನಿಗವನ

ಪರಿತಪಿಸುವ ಮನ
ಹತಪತ ಸುತ್ತುವ ವ್ಯಸನ
ಇಲ್ಲದ ಆಸೆಗಳ ತನನ
ಎಲ್ಲೆಲ್ಲೋ ತೃಪ್ತಿ ಕಾಣುವ ಜತನ
ಮನವೇ ತಾಳು ನೀ ನಿಧಾನ
ನೀಯತ್ತಿನ ಪಾಯವಿಲ್ಲದ ನಿನ್ನ ಸದನ
ಹರಕು-ಮುರುಕು ಜೋಪಡಿಗೆ ಸಮಾನ.

-ದಿವ್ಯ ಆಂಜನಪ್ಪ



೧೪/೦೮/೨೦೧೩

Tuesday 13 August 2013

ಚುಟುಕು

ಹಾಗೇ ಸುಮ್ಮನೆ...

ಮಂಜು ಕರಗಿತು
ಕಲ್ಲು ಕರಗಿತು 
ವಜ್ರದಂತಹ ವಜ್ರವೇ ಕರಗಿತು
ಪ್ರೀತಿಯ ರೀತಿಗೆ;
ಮಾನವನೆದೆಯ 
ಅಹಂ ಕರಗದು 
ಪ್ರೀತಿ ನಿರೋಧಕ ಶಕ್ತಿ 
ಅದೊಂದಕಷ್ಟೇ ಇದೆ....... :-)

-ದಿವ್ಯ ಆಂಜನಪ್ಪ
13/08/2013 :-)

ಚುಟುಕು

ಸೊಬಗನರಿತ ಜನ 
ಕಾಡುಮಲ್ಲಿಗೆ ಎಂದರು
ಇದ್ಯಾವ ಪರಿವೆಯಿಲ್ಲದ ಮಲ್ಲೆ 
ದಿನವೂ ಬಿರಿವುದು ತನ್ನ ಸಹಜತೆಯಂತೆ 


-ದಿವ್ಯ ಆಂಜನಪ್ಪ
13/08/2013