Friday 17 October 2014

"ವಿಪರ್ಯಾಸ"


ಕತ್ತಲ ಪೂರ್ಣ ಅನುಭವವಾಗದ ಹೊರತು
ಜಡ ಮನವು
ಬೆಳಕಿಗೆ ಎಂದೂ ಹಾತೊರೆಯದು!

17/10/2014

%%%%%%%%%%%%

ಯಾನ..


ಹಿತವಾದ ಈ ಸಂಜೆ
ಸೂರ್ಯ ಕಿರಣ ಬಿಸಿ ಹದವು
ನೇರ ಹಸಿರ ಹಳ್ಳಿ ಸೊಗಡಿಗೆ
ಮಾತು ಮೌನಗಳ ಮೆಲುಕು
ಮಳ್ಳ ನೀ ಮನದೊಳಗೆ,,
ಹೀಗೊಂದು ಸುಂದರ ಯಾನ,,
ಕೇಳಿದೆಲ್ಲಾ ಸುಮಧುರ ಸಂಗೀತ,,  



%%%%%%%%%%


ಹುಡುಗ,

ನೀ ಹೀಗೆ ಮೌನವಾದರೆ
ನನ್ನ ಪದಗಳಿಗೆ
ದನಿ ಇಲ್ಲ..

17/10/2014

No comments:

Post a Comment