Sunday 27 July 2014

ಕವನ

ಇವನು ಕೃಷ್ಣನಲ್ಲ,,,

ನಿನ್ನದು ಚೆಂದವಾದರೆ
ನನ್ನದು ಸೊಬಗು
ನಿನ್ನದು ಮುಗುಳ್ನಗೆಯಾದರೆ
ನನ್ನದು ಮುಕ್ತ ನಗು

ನೀನು ಕಂಡು ಬಿಟ್ಟು ಹೋದೆ
ನಾನು ಕಾಣದೆ ಕಾದು ನಿಂತೆ
ನೀನ್ಯಾರಿಗೊ ರುಕ್ಮಿಣಿ
ನಾನೋ ನೊಂದ ರಾಧೆ
ಇವನೊಬ್ಬ ಬೇಟದ ಜೀವ

ನಿನ್ನ ಹೋಗಬಿಟ್ಟು, ನನ್ನ ಕಾಯಬಿಟ್ಟ
ಮಧ್ಯೆ ಮೌನವಹಿಸಿದ್ದಾನೆ
ಸುಮ್ಮನಿರು ಗೆಳತಿ,
ನಿನಗೊಬ್ಬ ಶ್ರೀ ಕೃಷ್ಣ ರಾಜನ
ನನಗೊಬ್ಬ ಕಳ್ಳ ಕೃಷ್ಣನ
ಹುಡುಕಿ ಕೊಡುವನೇನೋ ಇವನು

ಬಿಂಕವೆಂಬ ಮಡಿಕೆಯ ಒಡೆದು
ಸಲುಗೆಯೆಂಬ ಭಾವ ಸುಲಿದು
ಸುಲಭಕೆ ಎನ್ನ ಮನವ
ಇವನೆಡೆಗೆ ಹರಿಸಿಕೊಂಡ
ಈ ಕಲಿಯ ಪಶ್ಚಾತ್ತಾಪಕೆ!
ಗಳಿಸಿ ಅಳಿಸಿದ ಖುಷಿಯ ಕಾಲಕೆ!

26/07/2014

No comments:

Post a Comment