Wednesday 23 July 2014

ದೇವ ಲೋಕದಿಂದ ವಿಶೇಷ ಸೂಚನೆ
ದೇವೇಂದ್ರ;
ಭೂಲೋಕ ಕವಿ ಜನರ ಹೊರತು
ಮಿಕ್ಕೆಲ್ಲಾ ಕವಿಯ ನಕಲುಗಳು
ಸ್ವರ್ಗಕ್ಕೆ ಅಡಿಯಿಡಲನುಮತಿ ಇಲ್ಲ
ಕಾರಣ,
ನಕಲಿ ಕವಿಗಳು
ಸುಳ್ಳಾಡೋ ಕವಿಗಳ ಮೀರಿ
ಸುಳ್ಳುಲಿವ ಪೈಪೋಟಿಯಲ್ಲಿದ್ದಾರೆ,, !
ಕಂಗಾಲಾದ ಕವಿಗಳು
ನರಕವನ್ನು ಸ್ವರ್ಗವೆಂದರೆ,
ನಕಲಿ ಕವಿಗಳು ದೇವೇಂದ್ರನನ್ನೇ ಯಮನೆಂದು ಹೇಳಿ
ಯಮನನ್ನು ಅಲ್ಲಿ ಖುಷಿಪಡಿಸುತ್ತಿದ್ದಾರೆ!!

(ಅದರಲ್ಲೂ ಆ ದಿವ್ಯ! ;-) :-)  )

22/07/2014

_____________

ಮನಸ್ಸು
ಪ್ರೀತಿಸುವವರೆಗೂ
ಮುನಿಸುತ್ತದೆ,
ಪ್ರೀತಿಸಿದ ಮೇಲೆ
ಕೊಸರುತ್ತದೆ!
ಅದು ಅವನದು,
ಮುನಿಸಿ,ಕೊಸರಿ
ಮತ್ತೂ ಉಸಿರಾಡಿದೆ
ಈ ಎದೆಯೊಳು,, !

22/07/2014

______________

ತಡವಿದ್ದಷ್ಟೇ ಹೃದಯ
ಎಂಬ ಭ್ರಮೆಯಾಯ್ತು,

ಪ್ರೀತಿ ನೀನದೋ ವಿಶಾಲ
ನಿನ್ನ ಕಿರು ಬೆರಳಿನುಗುರಷ್ಟೇ
ತರಚಿದ್ದು ಇನ್ನೂ!

ಬಿಡು, ನೀ
ಸನಿಹವಿರುವೆ
ಎಂಬ ಖಾತ್ರಿಯಾಯ್ತು!

21/07/2014

No comments:

Post a Comment