Wednesday 23 July 2014

ಕವನ

ಕವನ,,



ಕಡಲ ಕಲಕಿದರೆ ಸುನಾಮಿ
ಭಾವ ಕದಲಿದರೆ ಬೇನಾಮಿ

ಅನಾಥವದೋ ಭಾವಗಳು,
ಕಡಲೊಡಲ ಮುತ್ತೆಲ್ಲಾ
ಅಲೆಯೊಡಪ್ಪಳಿಸೊ ಕಲ್ಗಳೊ
ಕಣ್, ಕಿವಿ, ಮೂಗ್ಗಳಿಗೆ ಘಾಸಿ,,

ಕಡೆ ಕೈ ತುದಿಯೊಳೇ ನಲಿದಿದ್ದರೂ
ಹೃದಯದಾಳದ ಮಧುರ ಗೀತೆ
ಅರಿತು ಅಂಗೈಲಾಡಿಸೋ ಪೋರ
ಅರಿಯದೇ ಕಂಗಾಲಾದ ಕವಿತೆ!

ಪುಟ್ಟಿಸಿದ ದೇವ ಹುಲ್ಲು ಮೇಯಿಸನೇ?!
ಕೈಯೊಳ ಕವನ ಆದರೂ ಆದೀತು ಮುಂದೊಮ್ಮೆ ದವನ!!

20/07/2014

No comments:

Post a Comment