Monday 28 July 2014

ಮನದ ಮಾತು

ಙ್ಞಾನೋದಯ,,,, ;-) 



ಇಂದು ಬೆಳಗ್ಗೆ ಎಚ್ಚರವಾಗಿ ಕಣ್ಬಿಟ್ಟಾಗ, ಏಕೋ ಏನೋ ಗೊತ್ತಿಲ್ಲ ಅಳು ಉಮ್ಮಳಿಸಿ ಬಂತು. ನನಗೇಕೆ ಅಳು ಬರ್ತಾ ಇದೆ ಅದೂ ಬೆಳಬೆಳಗ್ಗೆ?! ನನಗೇ ಗೊಂದಲ, ಕಾರಣವೂ ತಿಳಿಯುತ್ತಿಲ್ಲ.

ಹೌದು, ಮನಸ್ಸು ತೀರ ನೋವಿನಲ್ಲಿತ್ತು. ಆದರೆ ನಿದ್ದೆಯಿಂದೆದ್ದ ಮನಕ್ಕೆ ಯಾವುದಾ ನೋವು ಎಂದೂ ತಿಳಿಯಲಿಲ್ಲ. ಸುಮ್ಮನೆ ಹಾಗೆಯೇ ಮಲಗಿ ಹಿಂದಿನ ದಿನದ ವಿಚಾರಗಳನ್ನೆಲ್ಲಾ ನೆನಪು ಮಾಡಿಕೊಳ್ಳ ತೊಡಗಿದೆ. ದಿನವೆಲ್ಲಾ ಚೆನ್ನಾಗಿಯೇ ಇತ್ತು, ಯಾರೂ ನನ್ನ ಬೈದಿರಲಿಲ್ಲ, ನಾನೂ ಯಾರಿಗೂ ಬೈದಿರಲಿಲ್ಲ, ಯಾವ ಜಗಳವೂ ಇರ್ಲಿಲ್ಲ. ಹೀಗಿದ್ದೂ ಯಾಕೆ ಈ ದುಃಖ?! ಎಂದು ಯೋಚನೆಯಾಯ್ತು,, ಹಾ,, ದಿನದ ಕೊನೆಯಲ್ಲಿ ಮಲಗುವ ಮುನ್ನ ನಾನೊಂದು ಸಿನೆಮಾವನ್ನು ಅರ್ಧ ನೋಡಿ ಮಲಗಿದ್ದೆ. ಮಿಕ್ಕದ್ದು ನಾಳೆ ನೋಡಿದರಾಯ್ತು ಎಂದು. ಸಿನೆಮಾ ''ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ". ಸಿನೆಮಾ 'ಸೂಪರ್' ಅಂತ ಎರಡನೇ ಬಾರಿ ನೋಡೋ ಆಸೆಯಾಗಿತ್ತು. ಎಲ್ಲಾ ಡೈಲಾಗ್ನೂ ಸಕ್ಕತ್ ಎಂಜಾಯ್ ಮಾಡ್ತಾ ಇದ್ದೆ. ನನ್ನದು ಮೊದಲೇ ಆಳವಾದ 'ಇನ್ವಾಲ್ಮೆಂಟ್!' ಬೇರೆ ;-) . ಹಾಗಾಗಿ ಹೀಗಾಗಿರಬಹುದೇನೋ ಅಂತ ಅಂದ್ಕೊಂಡೆ.

ಸಿನೆಮಾ ನಿಲ್ಲಿಸಿದಾಗ ಹೀರೋ ತನ್ನ ನೊಂದ ಲವ್ ಸ್ಟೋರಿಯನ್ನು ಹಿರೋಯಿನ್ಗೆ ಹೇಳ್ತಾ ಇದ್ದ,,, ''ಒಗ್ಗರಣೆಗೆ ಕರಿಬೇವ್ನ ಹಾಕಿದ ಸೌಂಡಂತೆ ಅವಳು ಬಂದ್ಲು'' ಎನ್ನುವಲ್ಲಿಗೆ ನಿಲ್ಲಿಸಿ ಮಲಗಿದ್ದೆ. ಅದೇ ಫೀಲ್ನಲ್ಲಿ ಮಲಗಿದ್ದು ಹೀಗೆ ದುಃಖ ಆಗಿದೆ ಅಂತ ಬೆಳ್ಳಂಬೆಳಗ್ಗೆ ಙ್ಜಾನೋದಯವಾಯ್ತು.

''ಕಾರಣ ಗೂತ್ತಾದ ಮೇಲೆ ಪರಿಹಾರ ಹುಡುಕಲ್ವಾ ನಾನು?!'', ಅಂದ್ಕೊಂಡು ಸರಿ ಇವತ್ ರಾತ್ರಿ ಪೂರ್ತಿ ಸಿನೆಮಾ ನೋಡಿ ಖುಷ್ಯಾಗ್ ಮಲಗೋಣ ಎಲ್ಲಾ ಸರಿ ಹೋಗುತ್ತೆ ಅಂದ್ಕೊಂಡು ಕೆಲಸಕ್ಕೆ ರೆಡಿಯಾದೆ.. ಈ ದಿನ ನಿಜವಾಗ್ಲೂ ಫುಲ್ ಖುಷ್ಯಾಗೇ ಇತ್ತು...

ಇದನ್ನೆಲ್ಲಾ ಯಾಕೆ ಹೇಳೋ ಪ್ರಯತ್ನ ಅಂತ ಅನಿಸ್ಬೋದು ನಿಮಗೆ. ''ನಮ್ಮ ಮನಸ್ಸನ್ನು ನಾವು ನಡೆಸಬಹುದು, ದುಃಖದಿಂದ ಸಂತಸದೆಡೆಗೆ''. ಇದು ಸಾಧ್ಯವೆಂದು ಹೇಳಲು 'ಒಂದು ಫ್ರೆಶ್' ಉದಾಹರಣೆ!!,,,,,,,

ಇದೊಂದು ಸಣ್ಣ ನೋವೇ ಇರಬಹುದು,, ಅದರ ಅನ್ವಯ ದೊಡ್ಡ ಆಘಾತಗಳಿಗೂ ತರಬಹುದು,, ಆದರಲ್ಲಿ ಮನಸ್ಸನ್ನು ನಡೆಸುವ ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕು, ಈ ಕ್ರಿಯೆಯಲ್ಲಿ ಸೋತಾಗ, ಆ ಸೋಲನ್ನೇ ಸೋಮಾರಿತನವಾಗಿ ಮುಂದುವರೆಸದೆ ಕಾರ್ಯಪ್ರವೃತ್ತರಾದರೆ ಖಂಡಿತ ಎಲ್ಲವೂ ಸಾಧ್ಯ.

ಮನವು ಒಮ್ಮೊಮ್ಮೆ ಅಸಾಧ್ಯ!

.......... ಎನ್ನುವುದು ನನ್ನ ಮಾತು,,, :-)

28/07/2014

No comments:

Post a Comment