Sunday 8 June 2014


ಈ ಲೌಕಿಕ ಕಣ್ಣುಗಳ ತಣಿಸಲಾರೆ
ನನ್ನೊಂದಿಗೆ ಪಾಂಡವರೂ ಇಲ್ಲ
ದೇವೇಂದ್ರನೂ ಬಂದು ಹೋಗಿಲ್ಲ
ಆದರೂ ಪಾಂಚಾಲಿ ಅಹಲ್ಯೆಯ ಮನವಿನ್ನೂ
ಕಾದಿದೆ ಶಾಪ ವಿಮೋಚನೆಗೋ
ಅವಮಾನಗಳಿಗೆ ಉತ್ತರಗಳಾಗಲೋ,,

07/06/2014

________________________

ಒಮ್ಮೆ ಮುದುಡುತ ಒಮ್ಮೆ ಕೆರಳುತ
ಮತ್ತೊಮ್ಮೆ ಅರಳುತ ಸಾಗುವಾಗ
ಬಣ್ಣದ ಚಿಟ್ಟೆ ಎನಿಸಿಕೊಂಡರೂ
ಅದಕೆ ಅದರ ಬಣ್ಣದ ಗರ್ವವಿಲ್ಲ
ಎದುರಾದ ಕಣ್ಣುಗಳಲಿ ಕನ್ನಡಿಯಿಲ್ಲ!!

06/06/2014

No comments:

Post a Comment