Wednesday 4 June 2014

ಮನದ ಮಾತು

ಮೌನ,,,,,,,,,,,,,



ಯಾವುದೇ ಒಂದು ವಿಚಾರವನ್ನು, ಭಾವವನ್ನು ತೀರ ಹತ್ತಿರಾಗಿ ಅನುಭಾವಿಸುವಾಗ ನಮ್ಮಲ್ಲಿ ಮಾತುಗಳಿರದು. ಮೌನದ ಆಹ್ವಾನೆಯಾಗಿಬಿಟ್ಟಿರುತ್ತದೆ. ಆದರೆ ಈ ಮೌನವೂ ಅಷ್ಟೇ ಭಯಾನಕ. ಮೌನವು ಭಾವತೀವ್ರತೆಯಲಿ ಎತ್ತ ಬೇಕಿದ್ದರೂ ನಮ್ಮನು ಸಾಗಿಸಿಬಿಡಬಹುದು; ಸಾಧಿಸೊ ಛಲದೆಡೆಗೋ, ಇಲ್ಲವೇ ತ್ಯಜಿಸೋ ಸೊತ ಭಾವದೆಡೆಗೋ. ಇಂತಹ ಸಂದರ್ಭಗಳಲ್ಲಿ ಮೌನವನ್ನು ಒಡೆದು ನಿಲ್ಲುವ ಪ್ರಯತ್ನ ಜಾಗೃತವಾಗಿದ್ದರೆ ಆ ಸಮಯವನ್ನು ಸಾಧಿಸಿ ಅದರಿಂದ ಹೊರಬರಬಹುದೇನೋ,,

ಮೌನವು ಒಂದು ಧ್ಯಾನ ಎಂಬುದು ಸರಿಯೇ, ಆದರೆ ಎಂತಹ? ಯಾವುದರ ಧ್ಯಾನವಾಗಿದ್ದರೆ ಮೌನಕ್ಕೆ ತಕ್ಕ ಬೆಲೆ? ಎಂಬುದೂ ಅಷ್ಟೇ ಮುಖ್ಯ.

ಕೆಲವೊಮ್ಮೆ ತೀವ್ರ ಮನದ ಆಘಾತಗಳಲ್ಲಿಯೂ ಮೌನ ಅನಿವಾರ್ಯ. ಈ ಸಮಯದಿ ಮೌನ ಒಂದು ಪ್ರಕಾರದ  ಮನದ ವಿಶ್ರಾಂತಿ ಆಗಿರುತ್ತದೆ. ಹಾಗೇಯೇ ಆದರೆ ಒಳಿತು,, :-)

ಈ ಮನಸು, ಈ ಬದುಕು ಎಷ್ಟೋ ಸೋಜಿಗ!, ಜಾರಿ ಪಾತಾಳಕ್ಕೆ ಬಿದ್ದಂತೆ ಬೆಚ್ಚುಬಿದ್ದಾಗ ಕನಸಾಗಿರುತ್ತೆ. ಅದೇ ಎಲ್ಲವೂ ಸರಿಯಾಗಿದೆ ಅನಿಸಿಕೊಂಡಿದ್ದರೂ ಮತ್ತೆಲ್ಲೋ ಜೀವನ ಚುಚ್ಚಿರುತ್ತದೆ. ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎನ್ನುವುದೇನೋ ಸರಿಯೇ. ಆದರೆ ನಮ್ಮ ಸಮಾಧಾನಕ್ಕೆ ಈ ಉತ್ತರ ಅಷ್ಟು ಸಮಾಧಾನಕರವೂ ಅಲ್ಲವೆನೋ. ಆದ್ದರಿಂದ ಚುಚ್ಚಿದ ಜೀವನಕ್ಕೆ ಜರೂರು ಮುಲಾಮಿನ ಅಗತ್ಯವಿದೆ ಅದೂ ನಮ್ಮ ಸಮಾಧಾನಕ್ಕೆ. ಆಗುವ ಎಲ್ಲಾ ಅನಾಹುತಗಳನ್ನೂ ನಾವು ತಡೆಯಲಾರೆವು ಆದರೂ ನಮ್ಮತನದ ಉಳಿವಿಗಾಗಿ ನಮಗಾಗಿ ನಾವು ಶ್ರಮಿಸಲೇ ಬೇಕು. ಬಹಳಷ್ಟು ಬಾರಿ ನನಗೆ 'ನಾನು' ಅನ್ನುವುದಕ್ಕಿಂತ 'ನಾವು' ಅನ್ನುವುದೇ ಪ್ರಿಯವೆನಿಸುತ್ತದೆ. ಇದು ಅಹಂಮ್ಮಿನ ಕುರಿತಾಗಲ್ಲ,, ನಾವು ಎನ್ನುವಾಗ ನನ್ನೊಳಗೆ 'ನಾನು ಮತ್ತು ನಾನು' ಎನ್ನುವ ಭಾವವಿರುತ್ತದೆ. ನನಗೆ ನಾನೇ ಸಮಾಧಾನ, ಔಷಧಿ, ರಕ್ಷಕ, ಪ್ರೀತಿ, ಸ್ನೇಹ,, ಎಲ್ಲವೂ. ಒಮ್ಮೊ ನೊಂದಕೊಂಡರೂ ನನ್ನನೇ ಸಮಾಧಾನಿಸಲು ಮಗುವಂತೆ ರಮಿಸಿಕೊಳ್ಳುವ ಮತ್ತೊಬ್ಬ 'ನಾನು' ಇರುತ್ತಾಳೆ. ಹೀಗೆಲ್ಲಾ ನಾನು ಯೋಚಿಸುವಾಗ ನನಗೇನೋ ನನಗೆಲ್ಲಿಂದಲೋ ಒಂದು ಅಭಯ ಹಸ್ತ ಬೇಕು ಎಂದು ಅನಿಸುವುದು ಈಗೀಗ ಕಡೆಮೆಯೇ. ಮೌನದಲ್ಲಿ ಕಂಡುಕೊಂಡ ನನ್ನವೇ ಈ 'ನಾನು'ಗಳು,, :-)

ಮೌನದಲಿ ಮನುಷ್ಯ ತನಗೆ ತಾನೇ ಮಾರ್ಗದರ್ಶಕ, ಗುರು, ಸ್ನೇಹಿತ, ಹಿತೈಶಿ,,,,,
ಮೌನಕ್ಕೇ ಅದರದೇ ಆದಾ ಪ್ರಾಮುಖ್ಯತೆ ಬಂದದ್ದು ಮುನುಷ್ಯನ ಈ ದಾರಿಗಳಲ್ಲಿನ ಶ್ರೇಷ್ಠ ಸಾಧನೆಗಳಲ್ಲಿ ಎಂದರೆ ತಪ್ಪಾಗಲಾರದು.
ಇನ್ನು ಮುಂದೆ 'ಮೌನಂ ಸಮ್ಮತಿ ಲಕ್ಷಣಂ' ಎನ್ನುವ ಮುನ್ನ ಇವಿಷ್ಟೂ ಕಾರ್ಯಗಳು ಆ ಮೌನದೊಳು ನಡೆದಿರಬಹುದೇ ಎಂಬ ಒಂದು ಸಣ್ಣ ಚಿಂತನೆ ನಮ್ಮೊಳಗೂ ಮೌನವಾಗೇ ಜರುಗಲಿ,,, :-)

04/06/2014

No comments:

Post a Comment