Sunday 8 June 2014

ಮನದ ಮಾತು

ಉಪನ್ಯಾಸಕರ ಮಾತುಗಳನ್ನು ಓದುವಾಗ ಅನಂತಮೂರ್ತಿರವರ ಭಾರತೀಪುರದಲ್ಲಿನ ಈ ಮಾತು ನೆನಪಾಯ್ತು, "ಕೆಳ ವರ್ಗದ ಪ್ರತೀ ಗಂಡು ಮೇಲ್ವರ್ಗದ ಹೆಣ್ಣನ್ನು ಬಯಸುವಂತಾಗಬೇಕು, ಹಾಗೆಯೇ,,,,,,,,,,,,". ಕಾದಂಬರಿಯಲ್ಲಿನ ಮಾತಿನ ಅರ್ಥವು ಲೇಖನದ ಉಪನ್ಯಾಸಕರ ಮಾತಿನ ಅರ್ಥಕ್ಕೆ ತಾಳಿಕೆಯಾದರೂ ಕಾದಂಬರಿಯಲ್ಲಿನ ಮಾತು ತುಸು ನಯವಾಗಿ ಕಾಣಬಹುದೇನೋ,,,,,,

ಪ್ರತೀ ಅಪರಾಧಕ್ಕೂ ಜಾತಿಯನ್ನು ಅಂಟಿಸಬೇಡಿ ಅನ್ನುವ ಲೇಖನದ ತಾತ್ಪರ್ಯವಿದೆ. ಹಾಗೆಯೇ ಜೀವವಿದ್ದು ಪ್ರತಿಭಟಿಸದೇ ಸಹಿಸುವುದು ಸಾಧ್ಯವೇ? ಎನ್ನುವ ಪ್ರಶ್ನೆ.
ಜಾತಿಯಿಂದ ದೌರ್ಜನ್ಯವೋ?, ದೌರ್ಜನ್ಯದಿಂದ ಜಾತಿಯೋ? ಎಂಬಂತೆ,,
ಸಾಮಾನ್ಯವಾಗಿ ಅಸಹಾಯಕತೆಯಿದ್ದಲ್ಲಿಯೇ ದೌರ್ಜನ್ಯ ಹೆಚ್ಚು. ಕೆಳಜಾತಿ ಎನ್ನುವುದು ಅವಮಾನ, ಅಸ್ಪೃಶ್ಯತೆಯಿಂದಾಗಿ ಕೀಳರಿಮೆ; ಸಹಿಸೋ ಅಸಹಾಯಕತೆಯನ್ನುಂಟುಮಾಡಿರುವುದು ಗೊತ್ತಿರುವ ವಿಚಾರ. ಹೀಗಿರುವಾಗ ಅವರು ಸುಲಭಕೆ ಲಭಿಸುವ ಪೀಡಿತರು. ಇದು ಒಂದಾದರೆ; ಮತ್ತೊಂದು ಪ್ರತೀ ದೌರ್ಜನ್ಯಕೂ ನಂತರ ಏಳುವ ಪ್ರಶ್ನೆ ಜಾತಿಯದು. ದೌರ್ಜನ್ಯಕೆ ಪರಿಹಾರ ಜಾತಿ ಎಂಬ ಹೆಡ್ ಲೈಟಿನಿಂದ,, !! ಏಕೆ? ಅವರನ್ನು ಸಾಮಾನ್ಯವಾಗಿ ಒಬ್ಬ ಮನುಷ್ಯನಂತೆ ಕಂಡು ನ್ಯಾಯ ಒದಗಿಸಲು ಅಸಾಧ್ಯವೇ? ಹೌದು, ಒಂದು ಪ್ರಕರಣವನ್ನು ಗಮನಿಸುವುದಾದರೆ ಅದರಲ್ಲಿ ಹೆಸರು, ಲಿಂಗದಷ್ಟೇ ಪ್ರಾಶಸ್ತ್ಯ ಬಂದುಬಿಡುತ್ತದೆ ಜಾತಿಗೆ ಈ ಸಮಾಜದಲ್ಲಿ. ಇಡೀ ವೃತ್ತಾಂತದಲ್ಲಿ ಲಿಂಗ ಮತ್ತು ಜಾತಿ ಮುಖ್ಯವಾಗಿರುತ್ತದೆ ಅಪರಾಧ ಅಪರಾಧಿಗಳಿಗಿಂತ,,!! ಹಾಸ್ಯಾಸ್ಪದವೆನಿಸಿದರೂ ನಾವು ನೋಡಿದ್ದು, ನೋಡುತ್ತಿರುವುದು. ಜಾತಿ ಹೆಸರಿನ ತೂಗುಗತ್ತಿ ಬಹುಶಃ ಮನುಷ್ಯ-ಮನುಷ್ಯನ ನಡುವಿನ ಸಂಬಂಧಗಳ ತಲೆಗಳನ್ನುರುಳಿಸೋ ನಿರ್ಭಾವುಕ ಕ್ರೂರತೆ ಎಂದರೆ ತಪ್ಪಾಗಲಾರದೇನೋ?,,,,

ದೌರ್ಜನ್ಯಕ್ಕೊಳಗಾದವರಿಗಿಂತ ಅದರ ಹೆಸರಲಿ ಹೆಸರು ಸಾಧಿಸಿಕೊಳ್ಳೊ ಜನರ ಕೃತ್ಯವಿದು ಅಷ್ಟೇ (ದೌರ್ಜನ್ಯಕೆ ಜಾತಿಯ ಹಣೆಪಟ್ಟಿ). ಹಾಗಾಗಿ ಜಾತಿ ಅನ್ನುವುದು ಗಾಳಿಪಟವೂ, ಬಾವುಟವೂ ಆಗುತ್ತಿದೆ. ಹಿಡಿದವನಿಗಷ್ಟೇ ಲಾಭ. ಅದು ರಂಜನೆಯೋ? ಸಾಧನೆಯೋ?. ಹಾಗಾಗಿ ಜಾತಿ ಅಪರಾಧಗಳಿಗೆ ಅಂಟಿಕೊಳ್ಳುತ್ತಿದೆ ನಿರಪರಾಧಿಯಾಗಿ,,!

ದೌರ್ಜನ್ಯಕ್ಕೊಳಗಾದವರಿಗೇ ಹೇಸಿಗೆಯಾಗಿ ತಮಗ್ಯಾವ ನ್ಯಾಯವೂ ಬೇಡವೆಂದು ದೂರ ಸರಿದುಬಿಡುತ್ತಾರೆ ಮಧ್ಯವರ್ತಿಗಳ ಈ ಬಾವುಟ ಹಾರಾಟಗಳ ನೋಡಿ, ಇದರಿಂದ ಮತ್ತಷ್ಟೂ ಅಪರಾಧಗಳು ಮುಚ್ಚಿಹೋಗಿ,, ಹೊಸ ಹೊಸ ಅಪರಾಧಗಳಿಗೆ ಅಭಯಾಸ್ತವಾಗಿಬಿಡುತ್ತವೇನೋ ಎಂದೆನಿಸುತ್ತದೆ.
ದೌರ್ಜನ್ಯಗಳನು ಸಹಿಸುವುದರಿಂದ ಅದು ಮತ್ತಷ್ಟು ಬಲಿಷ್ಟವಾಗಿ ಬೆಳೆಯಲು ಪ್ರೇರೇಪಿಸಿದಂತಂತಾಗುತ್ತದೆ. ಅದು ಎಂತಹುದೇ ದೌರ್ಜನ್ಯವಾಗಲೀ, ಪ್ರತಿಭಟಿಸೋ ದನಿಗಾದರೂ ಹೆದರುಸುವ ಶಕ್ತಿಯಿರಲಿ, ಅಲ್ಲಿಗೆ ಅರ್ಧ ದೌರ್ಜನ್ಯದ ಮನರಂಜನೆ ಕುಸಿಯುವುದು.

ಹೆಣ್ಣಿನ ಕಣ್ಣೀರು ಸಂವೇದನೆಯನ್ನು ಹುಟ್ಟುಹಾಕುತ್ತದೆ ಎನ್ನುವುದು ತಿಳಿದಿತ್ತು, ಆದರೆ ಗಂಡಿನ ಕಣ್ಣೀರು ವಿನಾಶವನ್ನು ಸೂಚಿಸೋ ವಿಚಾರ ತಿಳಿದಿರಲಿಲ್ಲ ನನಗೆ. ನನ್ನಜ್ಜಿ ಈ ಸಮಯದವರೆಗೂ ಇರಬೇಕ್ಕಿತ್ತು ಅನಿಸಿತು,,,,,,

ಸದಾ ಚಿಂತನೆಗಳಿಗೊಳಪಡಿಸೋ ಲೇಖನವನ್ನು ನೀಡುತ್ತಿರುವ ನಿಮಗೆ ವಂದನೆಗಳು Anjali ಮೇಡಂ,,

http://www.vijaykarnatakaepaper.com/Details.aspx?id=13817&boxid=5436324

08/06/2014

No comments:

Post a Comment