Monday 9 June 2014

ಮನದ ಮಾತು

ಮನುಷ್ಯ ಎಷ್ಟೇ ಬುದ್ಧಿವಂತನಾದರೂ ಅವನಿಗೂ ನಿದ್ದೆ, ಹಸಿವು, ಮರೆವು, ದಣಿವು ಅನ್ನುವುದೆಲ್ಲಾವೂ ಇರುವುದರಿಂದಲೋ ಏನೋ ತಾನು ಪ್ರತೀ ಕ್ಷಣವೂ ಅತೀ ಜಾಗರೂಕನಾಗಿದ್ದರೂ ಈ ಯಾವುದೋ ಒಂದು ಸ್ಥಿತಿಯಲ್ಲಿ ತನ್ನನ್ನು(ಕಪಟತನವನ್ನು) ರಕ್ಷಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಸುಳ್ಳು ಕಪಟ ತುಂಬಾ ದಿನಗಳ ಕಾಲ ನಿಲ್ಲದು. ಹಾಗೆಯೆ ಸತ್ಯವಲ್ಲದೆ ಮತ್ತಿನ್ಯಾವುದೂ ನಮ್ಮನು ಕಾಯದು,, !! ಇದು ಗೊತ್ತಿದ್ದೂ ಕ್ಷಣಿಕ ಬಯಕೆಗಳಿಗೆ ಸೋಗುಗಳನ್ನು ಹಾಕಿಕೊಂಡು ಜೀವಿಸುತ್ತೇವೆ.. ಯಾರಿಗೋ ವಂಚಿಸಿರುತ್ತೇವೆ ಎಂದುಕೊಂಡು ಖುಷಿಪಡುವಾಗ ಮರೆತಿರುತ್ತೇವೆ ನಾವೇ ನಮ್ಮವರಿಗೆ ವಂಚಿಸಿ ಅವರಿಂದ ಅವರ ಪ್ರೀತಿಯಿಂದ ದೂರಾಗಿರುತ್ತೇವೆ,,,,,,,,

ಹಾಗಾಗಿ ಸಣ್ಣದೊಂದು ಅಪರಾಧ ಪ್ರಜ್ಞೆ ಕಾಡಿದರೂ ಜೀವನ ದುಸ್ತರವೆನಿಸಿಬಿಡುವುದು,,,

09/06/2014

No comments:

Post a Comment