Wednesday 9 October 2013

ಬಾಯಿ ಸುಮ್ಮನಿರಲು
ಕಣ್ಣು ನೋಯಬೇಕೇನೋ 
ಅಕ್ಷರಗಳಿಂದ!
ಮನಸ್ಸು ತುಂಬಬೇಕೇನೋ 
ಚಿಂತನೆಗಳಿಂದ!


************
ನಗುವೆಷ್ಟೋ ಅಳುವೆಷ್ಟೋ
ಮೃದುವೆಷ್ಟೋ ಕಠೋರಗಳೆಷ್ಟೋ
ಮುಖವಾಡಗಳ ಹಿಂದಷ್ಟೋ
ಅದಲು ಬದಲು

ಎಷ್ಟೋ ಎಷ್ಟೋ!!? 

*******************

ತೆರೆ ಎಳೆಯುವ ಮುನ್ನ
ನಾಟಕವೂ ವಾಸ್ತವ;
ತೆರೆ ಬಿದ್ದ ನಂತರ
ವಾಸ್ತವವೂ ಒಂದು ನಾಟಕ
ಕಲೆಗಾರರು ಧರೆಯೊಳು ನರರು
ಭೂರಂಗ ಮಂದಿರದ ನಾಯಕರು 


**************************


ವಾಸ್ತವ...

ಪ್ರೀತಿಯಿರುವುದು
ಅವನೆದುರು ಅವಳು
ಅವಳೆದುರು ಅವನು
ಇರವವರೆಗೆ ಮಾತ್ರ! 

*************

09/10/2013

No comments:

Post a Comment