Thursday 10 October 2013

ಆರ್ಭಟಿಸುವ ಸುನಾಮಿಗೂ
ಕೊಳದ ತಿಳಿ ನೀರ ಮೇಲೆ
ಅಸೂಯೆಯಂತೆ 

**********

ಭರವಸೆ ಬೇಕಿರುವುದು
ಕುಳಿತು ಯೋಚಿಸುವವನಿಗೆ
ಗುರಿ ಹಿಡಿದು ಓಡುವವನಿಗಲ್ಲ

***************

ಕಾಯುವ ತಾಮಸ ಮನದಲಿ
ತಾಳ್ಮೆಯು ವಿಶಾಲಗೊಳ್ಳುತ
ಕಾಯುವಿಕೆಯೇ ಕರ್ಮವಾಗಿ
ಕಾದ ವಿಚಾರವೇ 
ಸ್ಮೃತಿ ಪಟದಿಂ ಜಾರಿದರೆ
ನೀನೇ ನೆನಪಿಸು; 
ನಿನ್ನನೇ ನಾ ಕಾದದ್ದು
ಅದ ನೋಡುತ 
ನೀ 'ನನ್ನ ನೆನಪು'ಗಳನು 
ಜಾರದಂತೆ ಕಾದದ್ದೆಂದು 

***************

ಹಾಗೇ ಸುಮ್ಮನೆ..... 

ಕಾಯುವ ಭರದಲ್ಲಿ ಇನಿಯನ ಮರೆತರೂ
ಇನಿಯನು ಕೊಟ್ಟ ಉಡುಗೊರೆಯ ಮರೆಯಬಾರದು
ಸಾಕ್ಷಿಗಾಗಿ ಕೇಳಿಬಿಟ್ಟರೆ ಶಕುಂತಲೆಯ ಕತೆಯಾದೀತು 

**************************************

ಕಾಡುವ ರಾಶಿ ನೆನಪುಗಳಿಂದ
ಹಿಡಿಯಷ್ಟು ತಂದು ಮುಂದಿಟ್ಟರೆ
ಅದರೋಳು ನೀನೇ ಆರಿಸುವ ನೆನಪೇ
ನಿನ್ನ ಗುರುತು!
ಇದು ಶಕುಂತಲೆಯ ಕನಸಲ್ಲ 

**********************

ಪ್ರೀತಿಯ ಹಿಂದೆ ಬಿದ್ದು
ಓದು ಹಾಳಾಗದಿರಲಿ
ಓದಿರಿ; 
ನಂತರ ಪ್ರೀತಿಯ ಬಗ್ಗೆ 
ಬರೆಯಿರಿ

*****************

ಧೂಳ್ಹಿಡಿದ ಪುಸ್ತಕದೊಳಗಣ ಸಾಲು;
"ಧೂಳ್ಹಿಡಿದು ಹೋಗಲಿ ನಿನ್ನ ವಸ್ತ್ರಗಳು,
ನಿನ್ನೊಳಗೊಂದು ಬೆಳಕು ಸದಾ ಬೆಳಗುತ್ತಿರಲಿ"

DA

10/10/2013

2 comments:

  1. ಶಕುಂತಲೆಯ ಪ್ರತಿಮೆ ಅತ್ಯುತ್ತಮವಾಗಿ ಒಡಮೂಡಿದೆ.

    ReplyDelete