Wednesday 11 March 2015

ಕವನ

ಮನದ ತುಣುಕು ಇಟ್ಟಿಗೆಗಳು


ಗೂಡು ಕಟ್ಟಿಕೊಂಡು
ತನ್ನೊಳಗೆ ಬೆಂದದ್ದಾದರೂ ಏಕೆ
ಕಂಬಳಿ ಹುಳುವು
ನಾಳೆಗೆ ರೆಕ್ಕೆ ಬಿಚ್ಚಿ ಹಾರಲೆಂದೆ

ಆಗಾಗ ಗೂಡಿಟ್ಟು
ಸುಟ್ಟಿಕೊಳ್ಳಬೇಕು 
ಮನದ ತುಣುಕು ಇಟ್ಟಿಗೆಗಳನು
ಮುಂದಣ
ವೈಭವದರಮನೆಯ ನಿರ್ಮಾಣಕ್ಕೆಂದು

ಅಮಾವಾಸ್ಯೆ ಪೌರ್ಣಮಿಗಳು
ಭಾವಗಳೇರಿಳಿತಗಳು
ಮುದುಡಬೇಕು ಮರುಗಬೇಕು
ತನ್ನೊಳಗೆ ತಾ ಬೆಳೆದು ಹೊಮ್ಮಬೇಕು

11/03/2015

No comments:

Post a Comment