Saturday 3 May 2014

ಕಮಲ ನಯನಕೆ
ಕಣ್ಣೀರ ಕೆಸರು!

______________________

ಮೆಚ್ಚಿಸಲು ನಾನ್ಯಾರೋ
ಮೆಚ್ಚಿಕೊಳ್ಳಲು ನೀನ್ಯಾರೋ
ಅಚ್ಚು ಮೆಚ್ಚು ದಿಟವಷ್ಟೇ ಸೇತುವೆ
ನನ್ನ ನೀನು, ನಿನ್ನ ನಾನು
ಹಚ್ಚಿಕೊಂಡಿರಲು ಗುರುವೇ,,,

________________________

ಆರಾಧನೆ ಒಂದು ಭಾವ
ಅವರವರ ಭಾವಕೆ
ಲಿಂಗವೂ ಅಹುದು, ಮುನೇಶ್ವರನೂ ಅಹುದು,
ಕಾಳಪ್ಪ, ಭೈರಪ್ಪನೂ ಅಹುದು
ಕಲೆಗೆ ನಟರಾಜನೂ ಅಹುದು,
ಸತ್ಯವಿರಬೇಕಷ್ಟೇ ಆತ್ಮದೊಳು
ಸುಂದರ ಶಿವನು
ಮನದಲಿ ನೆಲೆಗೊಳ್ಳಲು,,, 

02/05/2014

No comments:

Post a Comment