Thursday 15 May 2014



ಯಾರದೋ ವಿರಹ ಗೀತೆ
ಮತ್ತಿನ್ಯಾರಿಗೋ ವೇದನೆ
ಅತ್ತೊಬ್ಬರಿಗೆ ಕೀಟಲೆ
ಮಿಕ್ಕವರಿಗೆ ಶೋಷಣೆ..
ಅರ್ಥವಾಗದ ಮನಗಳ 
ಸಂವೇದನೆ 
ಈ ಕವಿತೆ,, 

________________

ಹೇಳಿ ಹೋಗು ಕಾರಣ..
ಹಳೆಯದಾಯ್ತು..
ಹೇಳದೇ ಹೋಗು,,
ಬೇಸರವಿಲ್ಲ,
ನೀನಿನ್ನೂ ನನ್ನೊಡನಿರುವೆನೆಂಬ 
ಭ್ರಮೆ
ಅಷ್ಟೇನು ಗಾಬರಿಗೊಳಿಸದು,
ಕಲ್ಲೆದೆ; ಕೆತ್ತಬಹುದು ನೀನೂನು
ಉಳಿ ಬಳಗ 
ಇನ್ನೂ ಅಷ್ಟು ದೂರದಿ ನಡೆದಾರೊ,,
ಒಬ್ಬೊಬ್ಬರದೂ ಒಂದೊಂದು ನುಣುಪು ಉಳಿ,
ಮಾಗಿಲ್ಲ ಹಸಿತನ..
ಕೊನೆಯಿಲ್ಲ ಘಾಟಿತನ..

________________

ತೇಲೋ ಮೋಡ,, 
ಹರಿಯೋ ನೀರು
ಬೀಸೋ ಗಾಳಿ 
ಮತ್ತೂ 
ಈ ಮೌನ,,
ಮರು ಘಳಿಗೆ
ಪುಟಿವ ಹರಳು
ಬಿರಿವ ಹೂ ಮನ
ನಿರಂತರ,,
ನಿರಂಕುಶ,,,

15/05/2014

No comments:

Post a Comment