Sunday 18 May 2014

ಇಟ್ಟ ಚುಕ್ಕಿಗಳೆಲ್ಲಾ
ರಂಗೋಲಿಯಾಗದು
ಈ ಮನದ ರಂಗದಲಿ
ಚುಕ್ಕಿ ಇಡದೆ ಹಬ್ಬಿದಂತೆ
ವಲ್ಲಿ(ಬಳ್ಳಿ);
ನಿನ್ನ ಕಣ್ಣ ಕನಸುಗಳ
ಬಣ್ಣ ತುಂಬಿಕೊಂಡು
ರಂಗು ರಂಗಾದ ರಂಗೋಲಿ!

__________________________

ಕಳೆದವು ಎಲ್ಲಾ ದುರಂತಗಳು
ಉಳಿದಿಲ್ಲ ಒಂದು ಮಾತ್ರ ನೋವು
ಎನುವಾಗ ಎಚ್ಚರಿಸಿದ್ದವು
ಹಣೆಯ ಮೇಲಿನ ಮೊಡವೆಯ ಕಲೆಗಳಂತೆ
ತಮ್ಮ ಮನದ ಕಣ್ಣುಗಳಲಿ ಉಳಿಯದ್ದು
ಎದುರುಗೊಂಡ ಎಲ್ಲರಿಗೂ ಎದ್ದು ಕಾಣುವಂತದ್ದು
ಅವರ ಕಣ್ಣ ಪ್ರತಿಬಿಂಬಕೆ ಬೆದರಿ
ಸೇರಿದಂತೆ ಮತ್ತದೇ ನೋವ ಕೂಪಕೆ,,,

18/05/2014

No comments:

Post a Comment