Friday 30 May 2014

ಮನದ ಮಾತು

''ಕೊನೆ ಪಕ್ಷ ಯಾರನ್ನು ನಿಂದಿಸೋ ಹಾಗಿಲ್ಲ, ನಮ್ಮನ್ನು ನಾವೇ ಹಳಿದುಕೊಂಡು ಜೀವಿಸಬೇಕು ಆದಂತಹ ಎಲ್ಲಾ ಎಡುವುಗಳಿಗೂ'' ಎಂದೆನಿಸಿದಾಗಲೆಲ್ಲಾ ತೀರ ಅಸಹನೀಯವಾಗಿಬಿಡುವುದು ಈ ಬದುಕು. ಹೌದು ಕೆಲವೊಮ್ಮೆ ಇಂತಹ ಹತಾಶೆಗಳಲ್ಲಿ ನಮ್ಮನ್ನು ನಾವೇ ಮುಳುಗಿಸಿಬಿಡುತ್ತೇವೆ. ಬಹಳಷ್ಟು ಬಾರಿ ನಮಗಾಗ ಆಘಾತಗಳನ್ನು ನಾವು ಒಪ್ಪಿಕೊಂಡಿರುವುದೇ ಇಲ್ಲ. ನಮ್ಮನ್ನು ನಾವು ಅಂತಹ ಸ್ಥಿತಿಯಲಿ ಕ್ಷಣ ಮಾತ್ರವೂ ಇಟ್ಟು ನೋಡಲಾರೆವು. ಕಾರಣ ಕರುಣೆ,,,!!
ನಮ್ಮನ್ನು ನಾವೇ ಆ ಕರುಣೆಯ ಕಣ್ಣುಗಳಲ್ಲಿ ನೋಡಲಿಚ್ಚಿಸೆವು; ಹಾಗಿರುವಾಗ ಇತರರು?!
ಹಾಗಾಗಿಯೇ ಏನೋ ನೋವುಗಳನ್ನು ಹಂಚಲಾರೆವುವು, ವಂಚಿಸುವ ತಂತ್ರವಲ್ಲ, ನಮ್ಮನ್ನು ನಾವು ಒಪ್ಪಿಕೊಂಡು ಅದರಾಚೆ ಜೀವಿಸೋ ಆತ್ಮಬಲ.

ನೋವುಗಳನ್ನು ಹಂಚಿಕೊಂಡವು, ಎಂದಾದರೆ ಅದರ ಹಿಂದೆಯೇ ನಮಗರಿವಿಲ್ಲದೇ ಬರುವಂತಹುದು ನಿರೀಕ್ಷೆ!, ನಮ್ಮನೊಮ್ಮೆ ಸಮಾಧಾನಿಸುವರೇ? ಎಂದು. ಎಲ್ಲರೆದುರು ದಿಟ್ಟರೆಂದೇ ಹೆಸರಿಸಿಕೊಂಡರು ತನ್ನವರಲ್ಲಿ(ಆತ್ಮೀಯರಲ್ಲಿ) ಮಾತ್ರ ನಮ್ಮ ಕೆಲ ನೋವು- ಸೋಲುಗಳನ್ನು ಹಂಚಿಕೊಳ್ಳುವಂತಾಗಿಬಿಡುತ್ತದೆ. ಯಾಕೋ ಗೊತ್ತಿಲ್ಲ, ಆದರೆ ಆ ಆತ್ಮೀಯರು ಸಮಾಧಾನದ ಮಾತುಗಳಾಡದಿದ್ದರೂ ಸರಿಯೇ ಕುಗ್ಗಿಸುವಂತೆ ನಮ್ಮೊಂದಿದೆ ನಡೆದುಕೊಳ್ಳದಿದ್ದರೆ ಅದೇ ನಮ್ಮ ಜಯ,, :-)

ಬದುಕು ಏನೆಲ್ಲಾ ಕಲಿಸುತ್ತದೆ ಎನ್ನುವಾಗ; ಮತ್ತೆ ಮತ್ತೆ ಸೋಲಿಸುತ್ತದೆ ಎನ್ನುವುದೂ ಅಷ್ಟೇ ನಿಜ. ಎಷ್ಟು ಬಾರಿ ಸೋತರೂ ಮತ್ತೂ ಕಣಕ್ಕಿಳಿಯೋ ಉತ್ಸಾಹ ಉಳಿಯುವುದು ಬದುಕಿರುವವರೆಗೂ. ಅದು ಜೀವನ!!. ಹಾಗಾಗಿ ಎಲ್ಲಾ ದುಃಖಗಳಾಚೆ, ನಿರಾಶೆಗಳಾಚೆ ನಾವೇ ನಮಗಾಗಿ ಕಟ್ಟಿಕೊಳ್ಳೋ ಸಂತಸದ ಮನೆಯ ಇಟ್ಟಿಗೆಗಳಿವೆ, ಆಯ್ದುಕೊಂಡು ಕಟ್ಟಿಕೊಳ್ಳೋ ನಿರಂತರ ಪ್ರಯತ್ನ ನಮ್ಮದಾಗಿರಬೇಕು. ಸೋಲು ಮುಖ್ಯವಲ್ಲ,, ಸೋತು ಉಳಿವುದು, ಮತ್ತೂ ಸಜ್ಜಾಗುವುದು ಮುಖ್ಯ,,,!

ಯಾರನ್ನೋ ನಿಂದಿಸುತ ಅಥವಾ ತಮ್ಮನ್ನೇ ಹೀಗಳೆಯುತ ನಿಲ್ಲುವ ಬದಲು, ಸೋಲುಗಳನ್ನೇ ಎದುರಿಸುತ ಮುನ್ನುಗ್ಗುವುದು ಹೆಚ್ಚು ಪ್ರಿಯವೆನಿಸುತ್ತದೆ. ನದಿಯ ತಿಳಿಗೊಳ್ಳುವಿಕೆಗೆ ಹರಿವು ಮುಖ್ಯ, ಎತ್ತ ಕಡೆಗೆ ಎನ್ನುವುದಕ್ಕಿಂತ; ಹಾಗೆಯೇ ಮನಸ್ಸು. ನೋವು-ಅಸಹನೆಗಳು ತುಂಬಿದ ಮನಸ ಹಗುರಾಗಿಸಲೆಂದು ಹರಿದು ನಿರೀಕ್ಷಿತ-ಅನಿರೀಕ್ಷಿತ ಅಡೆ-ತಡೆಗಳನೆಲ್ಲಾ ದಾಟಿ ಸಾಗೋ ಒತ್ತಡವಿರಲಿ ಮನದಲಿ. ಜೀವನ ಯಾನ ಸುಖಕರವಲ್ಲದಿದ್ದರೂ 'ಆಕ್ಶನ್ ಮೂವಿ' ಯಂತಾದರೂ ಒಂದು ರೋಮಾಂಚನವಿರುತ್ತದೆ. :-)



  

2 comments:

  1. ನಿಮ್ಮ ಬರಹ ಗಳಲ್ಲಿ ಆಳದಲ್ಲಿ ಗಹನ ವಸ್ತುವನ್ನ ಇಟ್ಟು ಆನ೦ತರ ಗದ್ಯ ಮತ್ತು ಪದ್ಯವನ್ನ ವಿಸ್ತರಿಸುತ್ತಿರಿ.....

    ReplyDelete
    Replies
    1. :-) ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು

      Delete