Thursday 1 May 2014

ಗೋಪುರವ ಕಟ್ಟಲೇಬೇಕೆಂದಿಲ್ಲ
ಒಬ್ಬರ ಆಶಾಗೋಪುರವ
ಉರುಳಿಸದಿರೋಣ,,
ಭ್ರಮೆಗಾದರೂ ಸಂಭ್ರಮಿಸಲಿ ಜೀವ
ನಮ್ಮದೇನಿದೆ ಅದರೊಳ ನಷ್ಟ

__________________________

ಬರೆಯದ ಪದಗಳಲ್ಲಿ ಎಷ್ಟೋ ನಿರಾಶೆಗಳು
ನುಂಗಿಕೊಂಡು ನಲಿವ ಉರಿಸಿದ್ದೇ ನೋಡು
ಬಯಲು ಬಾನು ಎಂದೆನ್ನದೇ
ಎಲ್ಲೆಲ್ಲೂ ನಿನ್ನದೇ ಶಾಂತ ಮುಖದ 
ಉರಿದೆದೆಯ ಬಣ್ಣ ಬಣ್ಣದ ಚಿತ್ತಾರ, 
ಅದು ನಿನ್ನದಲ್ಲ,
ನಿನ್ನ ದಹಿಸಿದ ಆ ಬೆಂಕಿಯ ಬಯಕೆಯ ಫಲ!
ನಕ್ಕರೂ ಸ್ಫೂರ್ತಿಯಾಗಬೇಕು 
ಅವರೆದೆಗಳಲಿ ಪ್ರತಿಫಲಿಸುವಂತೆ
ಅಳುವ ಮುನ್ನ ಯೋಚಿಸುವಂತೆ..... !!

22/04/2014

No comments:

Post a Comment