Friday 30 August 2013

"ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ
ಗೆಳತೀ ಓ ನನ್ನ ಗೆಳತಿ......."

ಈ ಸಾಲಿನ ಕವಿಗಳು ಯಾರೆಂದ ಈ ಕ್ಷಣಕ್ಕೆ ನೆನಪಿಲ್ಲ. ಆದರೆ ತುಂಬಾ ಕಾಡುವ ಸಾಲುಗಳು... ಇತ್ತೀಚಿನ ದಿನಗಳಲ್ಲಿ. ಈ ಹಾಡು ನನ್ನ ಕಾಲೇಜು ದಿನಗಳಲ್ಲಿ ತುಂಬಾ ಫೇಮಸ್. ನಮ್ಮ ಟಿ.ಸಿ.ಹೆಚ್ ನಲ್ಲಿ ವಾರಕ್ಕೊಂದು ಪ್ರೊಗ್ರಾಮ್ ಕಂಪಲ್ಸರಿ. ಎಲ್ಲರೂ ಭಾಗವಹಿಸಲೇ ಬೇಕು ಇಂಟರ್ನಲ್ ಮಾರ್ಕ್ಸ್ ಉಂಟು. ಹಾಗಾಗಿ ಬರ್ದಿದ್ರೂ ಹಾಡ್ಬೇಕು ನೃತ್ಯ ಮಾಡ್ಬೇಕು ಮೋನೋ ಆಕ್ಟ್ ಮಾಡ್ಬೇಕು..... ಆಗಲ್ಲ ಬರಲ್ಲ ಅನ್ನಂಗಿಲ್ಲ. ಅಗ್ಲೇ ನಮಗೂ ಇವೆಲ್ಲಾ ಬರುತ್ತಾ ಅಂತ ಗೊತ್ತಾಗಿದ್ದು :-). ಈ ಸಂಬರ್ಭಗಳಲ್ಲಿ ಹುಡುಗರೆಲ್ಲಾ ಹೆಚ್ಚು ಈ ಹಾಡನ್ನೇ ಹಾಡ್ತಿದ್ರು ಯಾರ್ಯಾರ್ನೋ ಮನಸಲಿಟ್ಕೊಂಡು. ಕೇಳಿ ಕೇಳಿ ನಮಗೂ ಬಾಯ್ ಪಾಠ. ಪಾಪ ಅವರ ವೇದನೆ ಏನಿತ್ತೋ. ಅಗೆಲ್ಲಾ ನಾವು ಹಾಡಿನ ಧಾಟಿ, ರಾಗ ಏರಿಳಿತ ಅಷ್ಟನ್ನೇ ಗಮನಿಸುತ್ತಿದ್ದೆವೇನೋ ಅದರ ಭಾವಾರ್ಥದ ಗೋಜಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ. ಭಾವಗೀತೆಗೆ ಚಿತ್ರಗೀತೆಯಂತಹ ನೃತ್ಯ ಸಂಯೋಜನೆ. ಯಾವ್ದೋ ಚಿತ್ರಗೀತೆಗೆ ತಮಟೆ ಬಡಿದು ನೃತ್ಯ ಸಂಯೋಜನೆ ಹೀಗೆ ಹೊಸ ಹೊಸ ಪ್ರಯತ್ನ ನಮ್ಮದು. ಬಹಳ ಸ್ಟ್ರಿಕ್ಟ್ ನಮ್ ಕಾಲೇಜ್ ಬೇರೆ ಹೆಚ್ಚು ಕಡಿಮೆ ಆದ್ರೂ ಸರಿಯಾಗ್ ಬೈತಿದ್ರು. ತಂಡದ ಸಾಧನೆಯೇ ಒಂದು ಖುಶಿ. ಆಗಿನ ಹಾಡುಗಳೆಲ್ಲಾ ಈಗ ಅರ್ಥ ನೀಡುತ್ತಿವೆ ಅನಿಸುತ್ತಿದೆ ನನಗೆ. ಏಷ್ಟ್ ಲೇಟ್ ನಾನು ಅನ್ಸುತ್ತೆ :-)
ಈ ಮೇಲಿನ ಹಾಡು ಏಷ್ಟು ಭಾವಪೋರ್ಣ; ಹೌದಲ್ವಾ? ಯಾರನ್ನಾದರೂ ತುಂಬಾ ಕಾಡಿಸೋದು ತಪ್ಪು. ಆ ವೇದನೆಯನ್ನು ತಾಳಲಾರದೆ ಕವಿಗಳು ತನ್ನನ್ನು ಕೊಂದುಬಿಡು ಆದರೆ ಹೀಗೆ ಕಾಡಬೇಡವೆಂದು ಬೇಡುತ್ತಿದ್ದಾರೆ. ಜೀವನದಲ್ಲಿನ ಯಾವ ವಿಚಾರ ಕವಿಗೆ ವಸ್ತುವಾಗಲಾರದು ಹೇಳಿ? ಎಲ್ಲವೂ ಸಾಧ್ಯ. ಅದಕ್ಕಾಗಿಯೇ ಕವಿಗಿಲ್ಲ ಯಾವುದರ ಹಂಗು. ಭಾವಗಳ ಬಂಧಿಸುವ ಅನಿವಾರ್ಯತೆ. ನಿಜ ಸ್ವತಂತ್ರ್ಯ ಅಂದರೆ ಇದೇ ಅನಿಸುತ್ತೆ ನನಗೆ. ಮನಬಿಚ್ಚಿ ಹಾರುವ ಭಾವಗಳ ತಾರಾಟವ ಗಾಳಿಪಟವೆಂಬಂತೆ ನೋಡಿ ಆಡಿ ಆನಂದಿಸುವ ಸುವವಕಾಶ. ಸಿಕ್ಕರೆ ಬಿಡಬಾರದು ಇಂತಹ ಅವಕಾಶಗಳ....... :-)


ಧನ್ಯವಾದಗಳು
-ದಿವ್ಯ ಆಂಜನಪ್ಪ
30/08/2013

No comments:

Post a Comment