Friday 2 August 2013

ಹನಿಗವನ

ಹಾಗೇ ಸುಮ್ಮನೇ.......

ಕೆಲಮಂದಿ ಕಾಯ್ವರು 
ಪರರ ನಡೆ-ಫಲಕ್ಕಾಗಿ,
ಅದನ್ನೆತ್ತಾಡಿ; ಧೂಳಾಗಿ 
ಕೇರ್ವರು,
ಮತ್ತೆ ಕೆಲವ ತಿರುಚಿ
ಹೇಳ್ವರು,
ಪರ ನಿಂದೆಯೇ
ಪರಮೋಚ್ಚಗುರಿಯಾಗಿ
ಜೀವಿಸುವರು,
ಸತತ ಪರರ ಸವಿಜೇನಿನಲ್ಲಿ
ತಾ ಕೀಟವಾಗಿ.
ಏನ ಹೇಳಲಿ ತಂದೆ?
ಕಾಯಕವೇ ಕೈಲಾಸ.

-ದಿವ್ಯ ಆಂಜನಪ್ಪ
02/08/2013

No comments:

Post a Comment