Wednesday 31 July 2013

ಕವನ

"ಆಲಾಪನೆ"

ಹೊಸದೊಂದು ಚಿಂತನೆ,
ಚಿತೆಗೇರುವ ಮುನ್ನ ಚಿಂತನಗಳಾಗಬೇಕೆಂದು.

ಹೊಸದೊಂದು ಕಲ್ಪನೆ,
ಭ್ರಮೆಯಾಗದ ಭವಿಷ್ಯವ ಕಲ್ಪಿಸಬೇಕೆಂದು.

ಹೊಸದೊಂದು ಭಾವನೆ,
ಅದರೊಳು ಖುಷಿಯನಷ್ಟೇ ಭಾವಿಸಬೇಕೆಂದು.

ಹೊಸದೊಂದು ಯಾತನೆ,
ಮನವೇಕೆ ನೋವು ನಿರೋಧಕವಾಯಿತೆಂದು.

ಹೊಸದೊಂದು ಕಾಮನೆ,
ಕಾಮವನೇ ಜೈಸಬೇಕೆಂದು.

ಹೀಗೊಂದು ನಮೂನೆ,
ಎಲ್ಲರ ಮನದೊಳು ತಣ್ಣನೇ ಉಳಿಯಲೆಂದು.

ಮತ್ತೊಂದು ಸಾಧನೆ,
ಬದುಕಲು ಬದುಕು ಸಾಧನವೆಂದು.

ಬದುಕಿಗೊಂದು ಸೂಚನೆ,
ಸೂಚ್ಯದಿ ಸುರ ಸೌಖ್ಯ ಸೂರೆಗೊಳ್ಳಲೆಂದು.

-ದಿವ್ಯ ಆಂಜನಪ್ಪ 
31/07/2013

No comments:

Post a Comment