Sunday 21 July 2013

ಕವನ

"ಅವನಾಟ"

ಸಮುದ್ರದಂಚಿನಲಿ ನಿಂತವನು
ಅದರ ಮೊರೆತವನು ಆನಂದಿಸುವನು,

ಕಾಣಲಾರನು ಆ ಒಡಲ ತುಮುಲ-ತಳಮಳವಾ
ಸತಾಯಿಸುವನು ಸ್ಪರ್ಶಿಸಲು ಬಿಡದಂತೆ;
ತನ್ನೆಡೆಗೆ ಮಿಡಿವ ತೆರೆಗಳನು.
ಸುಖಿಸುವನು ಮತ್ತೂ ಸಾಗರವು ಮೊರೆದಷ್ಟು,

ತನಗಾಗಿ ತುಡಿಯುವ ಅಲೆಗಳ ಅಲ್ಲಗೆಳೆಯುತಾ....
ಅಬ್ಧಿಯು ಶಾಂತವಾದರೂ ಸಹಿಸಲಾರದ ಮನ;
ಸೆಳೆವೆಂಬ ಕಲ್ಲೆಸೆವುದು ನೀರ ಮೇಲೆ ನರ್ತಿಸುವಂತೆ,
ಮತ್ತೆ ತನ್ನೆಡೆಗೆ ಮೊರೆವಂತೆ.

ಸುಮ್ಮನೆ ದಡದೊಳು ನಿಲ್ಲಲಾರ,
ಸನಿಹ ಬಿಟ್ಟು ನಡೆಯಲಾರ.
ಬೆಸೆದುಕೊಂಡಾನು ಚಂದಿರ, ಸಾಗರಕೆ
ಪೂರ್ಣನಾಗಿ ಒಮ್ಮೊಮ್ಮೆ ಶೂನ್ಯನಾಗಿ.

-ದಿವ್ಯ ಆಂಜನಪ್ಪ

೨೧/೦೭/೨೦೧೩

2 comments:

  1. ಕಡಲಿನ ಅಂತರಂಗವ ಹೊಕ್ಕು ಅರ್ಥೈಸಿಕೊಂಡವರಿಲ್ಲ ಗೆಳತಿ, ಅಂತೆಯೇ ಒಲುಮೆಯ ಮಾತೂ...

    ReplyDelete
  2. ಧನ್ಯವಾದಗಳು ಸರ್ :-)

    ReplyDelete