Sunday 28 July 2013

ಕವನ

ಈ ಮನ

ಬಿಡಿಸಿಕೊಂಡಷ್ಟು 
ಸಂಕೋಲೆಗಳ ಬಂಧನ,
ಅವಿರತ ಪ್ರಯತ್ನಗಳಿಂದ 
ಜರ್ಜರಿತ ಮನ,
ಓಡಿದಷ್ಟೂ ಕಾಲ್ಕೆಳಗೇ ಇರುವ
ಭೂಕಂಪನ.

ನಾ ಮರೆತ ದುರಂತವ, 
ಮತ್ತೇ ಹೆಗಲೇರಿಸುವ ಜನಮನ.
ಹಟಬಿದ್ದು ಕೊಡವಿ ತೂರುವ
ಈ ಮನ,
ಉಲಿದಿದೆ; ತನ್ನದಲ್ಲದ ತಪ್ಪಿಗೆ ತಲೆಬಾಗದೆ
ಎದುರಿಸಿ ಸಾಗುವುದೇ ದಿಟ್ಟ ಜೀವನ.

-ದಿವ್ಯ ಆಂಜನಪ್ಪ
28/07/2013

No comments:

Post a Comment