Monday 15 July 2013

ಮನದ ಮಾತು

ಒಮ್ಮೊಮ್ಮೆ ತೀರ ಹತ್ತಿರದವರು ಎನಿಸಿಕೊಂಡವರು ಹಟಾತ್ತನೆ ಸರಿದು ದೂರಾಗಿಬಿಡುತ್ತಾರೆ. ಕಾರಣವೆನೇ ಇರಲಿ. ಆ ಕಾರಣಕ್ಕೆ ಹೊಣೆಗಾರರು ಇಬ್ಬರೂ ಸರಿಯೇ. ನೆಡೆದು ಬಂದ ಅಷ್ಟೂ ಹೆಜ್ಜೆ ಗುರುತುಗಳು ಆಗಾಗ ನೆನಪಿನಲೆಯಾಗಿ ಮನವ ರಾಡಿಗೊಳಿಸಿದರೂ ಮತ್ತದೇ ಶಾಂತತೆಯನು ಕಾಯ್ದುಕೊಳ್ಳುವಂತೆ ಸಹಕರಿಸಿ, ಆ ನೆನಪಿನಂಗಳದಲಿ ತಾನಿಟ್ಟ ದಿಟ್ಟ ಹೆಜ್ಜೆಗಳ ಪ್ರಾಮಾಣಿಕತೆಯ ಗುರುತು, "ನೀ ಮುನ್ನೆಡೆ ನಾನಿದ್ದೇನೆ ನಿನ್ನ ನೀಯತ್ತು" ಎಂದು ಭಾವುಟವಾರಿಸಿದಂತೆ ತಾ ಮುನ್ನೆಡೆವ ಹಾದಿ ಹಸಿರಾದಂತೆ ಭಾಸವಾಗಿಬಿಡುತ್ತದೆ. ನಮ್ಮ ಮನದ ದೃಢತೆ; ನಮ್ಮ ಪ್ರಾಮಾಣಿಕತೆಯಷ್ಟೇ. ಆತ್ಮವಿಶ್ವಾಸದ ಕೊರತೆಯಿದ್ದರೆ, ಅದರ ಹಿಂದೆ ನಮ್ಮದೇ ಯಾವುದೋ ಒಂದು ಅಪ್ರಾಮಾಣಿಕತೆಯ ಛಾಯೆಯಷ್ಟೇ ಅಲ್ಲವೇ ಸ್ನೇಹಿತರೆ?? :-)

16/07/2013

No comments:

Post a Comment