Wednesday, 8 October 2014





''ಬೆಟ್ಟದ ದನಿ'',,

'ದೂರದ ಬೆಟ್ಟ ನುಣ್ಣಗೆ',
ಎಂದು ಅವರೆಲ್ಲಾ ನನ್ನ ನೋಡಿ ಹೇಳುವರು
ನಾನಿಂದು ಬೆಟ್ಟವಾಗಿ ಒರಟಾದದ್ದೇ ಅವರಿಂದ
ಅವರ ಮೊನಚು ಮಾತುಗಳಿಗೆ ಕತ್ತರಿಸಿದ ಕಿವಿಯಾಗಿ
ಗೋರ್ಕಲ್ಲ ರಾಶಿಯಾಗಿ, ಮೊಳೆ ಮುಳ್ಳುಗಳ ಆಗರವಾಗಿ
ನಾಲಿಗೆ ಇಲ್ಲದ ಬಾಯ್ಬಿಟ್ಟ ಬಿರುಕಾಗಿ, ಕಣ್ಣಿಲ್ಲದ ಶಿಲೆಯಾಗಿ
ಹೌದು ನಾ ಕಗ್ಗಲ್ಗಳ ಬೆಟ್ಟವೇ, ದೂರವಿರಿ ನೀವು ನುಣ್ಣಗೆ,,!

&&&

ಖುಷಿಗಳಿಗಿರುವಷ್ಟು ಕಾರಣಗಳು
ದುಃಖಕ್ಕೆ ಇಲ್ಲ ಬಿಡು ಗೆಳೆಯ,,
ಅನುಮಾನ, ಅವಮಾನ, ಬಿಗುಮಾನ
ಇಲ್ಲವೇ ಸುಮ್ಮನಷ್ಟು ಕಳೆದೆವು ಎನ್ನೋ ಭಾವ!
ಖುಷಿಗೋ,, ನಿಂತರೂ ಕೂತರೂ ನಡೆದು ಬಿದ್ದರೂ ಹಾಸ್ಯ ಕಾರಣ
ಒಳಗೊಂದು ಮನಸ್ಸು ಮಗುವಿನಂತಿರಲು
ಮುದ್ದು ಮುದ್ದಾಗಿ ತಪ್ಪು ಮಾಡಿ ನಕ್ಕುಬಿಡಲು!


&&&

ಸಧ್ಯ ಭಾವನೆಗಳಿಗೆ
ಮದುವೆ ಇಲ್ಲ;
ಹಾಗೆಯೇ ವಿಚ್ಛೇದನ,,! 

&&&

ಎನ್ನಂಗಳದೊಳು ನಾನಿಟ್ಟರೆ ರಂಗವಲ್ಲಿ
ಅವನೊಬ್ಬ ಕುಮಾರ ಇಡುತಾನೆ ಪ್ರೀತಿ ಬಳ್ಳಿ
ನನ್ನ ಮನೆಯ ಕಿಟಕಿಯಲಿ!!


06/10/2014

Monday, 6 October 2014

ಚಿತ್ರ


04/10/2014

ಚಿತ್ರ


01/10/2014


ಮನದ ಮಾತು

Life is beautiful  :-)



ಎಲ್ಲೋ ಲೀನವಾಗಿ ಹೋಗಬೇಕಿದ್ದ ನೀರ ಹನಿಯೊಂದು ಇನ್ನೂ ಗಾಳಿಯಲ್ಲಿಯೇ ತೇಲಾಡುತ್ತಿರುವ ಹಾಗೆ,, ನದಿಯ ಹರಿವ 

ಸೆಳವಿಗೆ ನಿಲುಕದೆ ದಡದಲ್ಲೆ ಉಳಿದ ಮಣ್ಣ ಕಣದ ಹಾಗೆ ಉಳಿದುಬಿಟ್ಟಿರುವಂತೆ ಅನಿಸುವುದು ನಾನು ಈ ಜೀವನಕೆ. ಹೌದು 

ನಾನಿನ್ನೂ ಈ ಜೀವನದ ಆಳಕ್ಕೆ ಇಳಿಯಲೇ ಇಲ್ಲ, ಇನ್ನೂ ಪ್ರಾರಂಭದಲ್ಲೇ ಇದ್ದೇನೆ ಎಂದು ಬಹಳಷ್ಟು ಬಾರಿ ನನಗನಿಸುವುದು. 

ಈಗೀಗ ಹೆಚ್ಚೇ ಎನ್ನಬಹುದು. ನನಗೇಕೋ ಗುರಿಗಳು ಇಲ್ಲ. ಸಾಧು ಸಂತರಂತೆ ನಡೆಯೋ ಹೊಸ ವ್ಯಾಮೋಹ!. ದೂಷಿಸಿದ 

ದೂರಿದ, ಕಷ್ಟ ಕೊಟ್ಟ ನೋವನಿಟ್ಟ ಎಲ್ಲರನ್ನೂ ಕ್ಷಮಿಸಿಬಿಡಲು ಮೊದಲು. ಖುಷಿಯೆನಿಸಿದರೂ ನನಗೇನು ಬೇಕು ಎಂಬುವುದೇ 

ಒಮ್ಮೊಮ್ಮೆ ತಿಳಿಯಲೊಲ್ಲದು. ಎಲ್ಲಿ ವೈಯಾಗ್ಯ ಮೂಡಿಬಿಡುವುದೋ ಎಂಬ ಆತಂಕವೂ ಸಹ. ಆದರೂ ಆಗಾಗ ನಾ ಕಲ್ಪಿಸೊ 

ಕವನಗಳು ನನ್ನೊಳ ಶೃಂಗಾರವನ್ನು ಪ್ರದರ್ಶಿಸಿ ನಾಚಿಸುತ್ತವೆ. ಹೀಗೆ ನಾನು ಎಂಬ ನಾನು ಎಷ್ಟೇಲ್ಲಾ ಗೊಂದಲಗಳ ನಡುವೆ 

ಇನ್ನೂ ತೊರೆಯುಕ್ಕೊ ಜೀವನಕೆ ಹೊಂದಿಕೊಳ್ಳಲು ಸೆಣೆಸಾಡುತ್ತಲೇ ಇದ್ದೇನೆ. ಆಸೆಗಳು ಎಂಬ ಮಾಯಾಲೋಕ ಒಮ್ಮೆ 

ಬಾನೆತ್ತರಕ್ಕೆ ಹಾರಲುಬಿಟ್ಟರೆ, ಕೈಸುಟ್ಟ ಅನುಭವಗಳು ಕನಸುಗಳನ್ನು ರಪ್ಪನೆ ನೆಲಕಚ್ಚಿಸಿಬಿಡುತ್ತದೆ. ಕಣ್ಣೀರಿಗೆ ನಾನೀಗ 

ಹೆದರದ ಬಂಟ!!. ಕಣ್ಣೀರು; ನೋಡುವ ಮನವ ಕರಗಿಸಬಹುದಷ್ಟೇ,, ನಮ್ಮ ಸಾಂತ್ವನವಲ್ಲ, ನಮ್ಮ ಪರಿಹಾರವೂ ಅಲ್ಲ,,!. 

ಮೊದಲಾಗಿ ಕನಿಕರಕ್ಕೆ ಬೆಚ್ಚಿಬೀಳೋ ನಾನು ಎಂದಿಗೂ ಜಂಭದ ಹುಡುಗಿಯೇ,, 

ಕಣ್ಣ ಮುಂದಿನ ಅಸ್ಪಷ್ಟ ದಿಕ್ಕುಗಳು, ಅರೆ ಬರೆ ಅನುಭವಗಳು, ಕೈಹಿಡಿದು ನಡೆಸೋ ಹಿರಿತನದ ಕೊರತೆ, ಅನಿಸಿದ್ದು ಸರಿಯೋ 

ತಪ್ಪೋ ಎಂದಷ್ಟೇ ಆ ಕಾಲದ ನನ್ನ ತರ್ಕ,, ಓದಿ ಕಲಿತ, ಗುರು-ಹಿರಿಯರು ಹೇಳಿದ ಮಾತುಗಳಷ್ಟೇ ಒಮ್ಮೊಮ್ಮೆ ನನ್ನ 

ಅನಿವಾರ್ಯ ದಾರಿಗಳು,,! ತಪ್ಪೆನ್ನಲು ನನ್ನಲ್ಲಿ ಆ ಹಂತದ ಅನುಭವಗಳಿಲ್ಲ,, !! ಹೀಗೂ ಇರಬಹುದೇ ಒಂದು ಮನಸ್ಸು 

ಎಂಬಂತೆ ನಾನು ನನ್ನ ನೋಡಿಯೇ ನನಗೊಂದು ಸೋಜಿಗ! 


ಸುಮ್ಮನೆ ಅಲೆಯುತ್ತಿದ್ದೆ ಮನಸ್ಸು ನೊಂದರೆ ಆಗ ಕಾಣದ ದಾರಿಗಳಲ್ಲಿ. ಒಂದಷ್ಟು ನಿರಾಳವನಿಸುವವರೆಗೂ ಕಾಲ ನಡಿಗೆ. 

ಈಗ 

ಸಮಯದ ಅಭಾವದ ಕಾರಣ ಮನಸ್ಸು ಮಾತ್ರ ಅಲೆಯುತ್ತದೆ. ಕಂಡು ತಿಳಿಯದ ವಿಚಾರಗಳ ಸುತ್ತ. ದಿನವೂ ಎರೆಡೆರಡು 

ಗಂಟೆಗಳ ನನ್ನ ಕರ್ತವ್ಯದ ಪ್ರಯಾಣವು ಆರೋಗ್ಯದ ಮೇಲೆ ಪ್ರಭಾವ ಬೀರಿದ್ದರೂ ಮನಸ್ಸಿಗೆ ನಾ ಕೊಡುವ ಒಂದು 

ಸಮಯವಾಗಿದೆ. ಬಸ್ಸಿನಲ್ಲಿ ಒಂದು ಕಿಟಕಿಯ ಪಕ್ಕದ ಸೀಟು ಸಿಕ್ಕರಷ್ಟೆ ಸ್ವರ್ಗ ಸಿಕ್ಕ ಅನುಭವ!. ಹಾಡುಗಳನ್ನು ಕೇಳುವ 

ಅಭ್ಯಾಸ,, ಜೊತೆಗೆ ದಿನದಲ್ಲಿ ನಾ ಸಮಯವಿಲ್ಲವೆಂದು ಬದಿಗೊತ್ತಿದ್ದ ಚಿಂತನೆಗಳಿಗೆಲ್ಲಾ ಒಂದು ವೇದಿಕೆ. ನಾನು ನನ್ನ ನಾಟಕ 

ರಂಗಭೂಮಿಯೊಳಗೆ. ಗತಿಸಿದ ಸುಖ-ದುಃಖಗಳು ಅದೊರೊಳ ನನ್ನಯ ಸರಿ-ತಪ್ಪುಗಳ ಅವಲೋಕನ, ಸಮಸ್ಯೆಗಳ 

ಪರಿಹಾರ, ಕಾಡೋ ಸಾಲುಗಳು, ನನ್ನೆಡೆಗಿನ ಅವರುಗಳು ಎಂಬ 'ಅವರ' ಮಾತುಗಳು, ನನ್ನ ಪರಿಧಿಯೊಳು ನನ್ನ ನಿಲುವು 

ಮತ್ತು ಅದರ ಸರಿ ತಪ್ಪುಗಳು,, ಹೀಗೆಯೇ,, ನನ್ನ ಬಸ್ ಪ್ರಯಾಣ ನನಗೊಂದು ವರದಾನ. ಹಾಗೆಯೇ ಕಲ್ಪಿಸೊ ಮನಕಷ್ಟು 

ಸನ್ನಿವೇಶ ಸಂಭಾಷಣೆಯ ಕಸರತ್ತು,, ಇದು ತುಂಬಾ ಖುಷಿ ಕೊಡುತ್ತದೆ. ಕೆಲ ಸಮಯದ ನನ್ನ ಕಲ್ಪನೆಗಳಿಗೆ ನನಗೇ 

ಸಿಕ್ಕಾಪಟ್ಟೆ ನಗು ಬಂದು ''ಅಯ್ಯೋ ಇದು ಬಸ್ಸು!!!'' ಎಂದು ನೆನಪಾಗಿ ಸುಮ್ಮಾನಾಗುವುದಿದೆ. ಆಗೆಲ್ಲಾ ,, ''Life is 

beautiful" ಎನ್ನೊ ಉದ್ಗಾರ ನನ್ನೊಳಗೆ. ಜೀವನವೆಂದರೆ ಏನೇನೋ ಆಗಿಬಿಡುವುದಲ್ಲ; ಜೀವನವೆಂದರೆ ನಾವು 

ನಾವಾಗಿರುವುದು. ಕಪಟವಿಲ್ಲದೆ, ವಂಚನೆಯಿಲ್ಲದೆ!. ಒಂದಷ್ಟು ನಗುವ ಕಂಡು, ನಮ್ಮೊಡನಿರುವ ಮನಕಷ್ಟು ನಗುವ 

ತುಂಬಿಬಿಡುವುದೇ ಜೀವನ! ,, ಎಂದೆಲ್ಲಾ ಬಡಬಡಾಯಿಸಿಕೊಂಡು ಬಸ್ಗಳನ್ನು ಬದಲಿಸಿಕೊಂಡು ಮನೆಗೆ ಬಂದುಬಿಡುವ 

ಮನಸ್ಸು,, ಕಲ್ಪನೆಗಳಿಂದ ವಾಸ್ತವಕ್ಕೆ ಬಂದಿಳಿಯುತ್ತದೆ.



ಬದುಕು ಎನೆಲ್ಲಾ ಕಲಿಸುತ್ತದೆ! ಎಂಬುದೊಂದು ಸದಾ ಕಾಡೋ ಒಂದು ಸೋಜಿಗ. ಮೌನವನ್ನು, ಮಾತನ್ನು, ಮರೆವನ್ನು, 

ಪ್ರೀತಿಯನ್ನು, ತಪ್ಪನ್ನು, ಗೆಲುವನ್ನು, ಹೀಗೆ,, ಆಗಾಗ ಹೀಗೊಂದು ವಿಚಾರ; ಹುಟ್ಟಿದ ಎಲ್ಲಾ ಜೀವಿಗಳೂ ಜೀವಿಸುತ್ತವೆ, ಕೆಲವು 

ಮಾತ್ರ ಬದುಕುತ್ತವೆ. ಕೆಲವು ಅಳಿದ ಮೇಲೂ ಉಳಿದುಕೊಂಡಿರುತ್ತವೆ. ಈ ಮೂರು ಹಂತಗಳಲ್ಲಿ ''ನಾನು ಎಲ್ಲಿ?'' ಎಂದು 

ನನ್ನೇ ನಾ ಕಾಡಿಕೊಳ್ಳುವುದಿದೆ. ಮೊದಮೊದಲು ಜೀವಿಸಿದರೆ ಸಾಕು ಎನ್ನುವುದಾದರೆ ನಾ ಹೇಳುವುದು,, ''ಆತ್ಮಹತ್ಯೆಯ 

ಮೊರೆ ಹೋಗೋ ಮನಸ್ಸುಗಳಿಗೆ. ಇನ್ನು ಜೀವಿಸಿದ್ದೆ ಆದಲ್ಲಿ ನಾಲ್ಕು ಜನ ಒಪ್ಪೋ ಹಾಗೆ,, ಇಲ್ಲ ತನಗೆ ತಾನು ಸರಿ ಎನಿಸೋ 

ಹಾಗೆ,, ಜನರೊಟ್ಟಿಗೆ ಪ್ರೀತಿ-ವಿಶ್ವಾಸಗಳೊಂದಿಗೆ ಬದುಕುವುದು. ಈ ಎರಡೂ ಹಂತಗಳು ವಿಕೃತಿಗಳಿಂದ ಹೊರತುಪಟ್ಟಿದ್ದೇ 

ಆದಲ್ಲಿ ಜೀವಿಯು ಅಳಿದು ಉಳಿದುಕೊಳ್ಳಬಹುದು. ಎಂಬುದು ನಾನೆ ಕಂಡುಕೊಂಡ ನನ್ನ ಹೊಸ ಚಿಂತನೆಗಳು.



Life is all about hugs and kisses!!


ಇದು ಬಹಳಷ್ಟು ಬಾರಿ ನಾ ಹೇಳಿಕೊಳ್ಳೋ ಒಂದು ಸೂಕ್ತಿ,, ವಾಸ್ತವದಲ್ಲಿ, ''ಲವ್ ಇಸ್ ಆಲ್ ಎಬೌಟ್ ಹಗ್ಸ್ ಅಂಡ್ ಕಿಸ್ಸೆಸ್'' 

ಎಂಬ ಮಾತಿದೆ. ಹಿಂದೆ ನನಗೊಬ್ಬ ಆರ್ಟಿಸ್ಟ್ ಆಂಕಲ್ (  ) ಪ್ರಪೋಸ್ ಮಾಡುವ ಸಮಯದಲ್ಲಿ ಹೇಳಿದ್ದರು,, ನನಗೆ ಇಂಗ್ಲೀಷ್ 

ಅಷ್ಟು ಚೆನ್ನಾಗಿ ಬರುವುದಿಲ್ಲ ಎಂದಿದ್ದೆ. ಇನ್ನೇನ್ ಮಾಡೋದು ಹೇಗಾದ್ರೂ ಕಳೆಚಿಕೊಳ್ಳಬೇಕಿತ್ತಲ್ಲ,,  ಸರಿ ನನ್ನ ನಮಸ್ಸನ್ನು 

ಅರಿತಂತೆ ಹಾರೈಸಿ 'ಒಳ್ಳೆ ಹುಡುಗ ಸಿಗಲಿ ನಿಮಗೆ' ಎಂದು ಹೇಳಿದ್ದರು. ಅವರು ಹೇಳಿದ'' Love is all about hugs and 

kisses'' ಎಂಬ ಮಾತು ಒಂದು ಆಶ್ಚರ್ಯವಂತೆ ಆಗ ಅನಿಸಿದ್ದರೂ ನಂತರದ ದಿನಗಳಲ್ಲಿ ನಾನದನ್ನು ''ಲೈಫ್'' ಅಂತ 

ಮಾಡಿಕೊಂಡೆ. ''Life is all about hugs and kisses!!!!''. ಜೀವನವೆಂಬುದು ಅಪ್ಪಿಕೊಳ್ಳುವುದು ಮತ್ತು 

ಮುತ್ತಿಡುವುದು.. ಎಂದು ಕನ್ನಡದಲ್ಲಿ ಹೇಳುವುದಾದರೆ.. ಇದಕ್ಕೆ ನನ್ನ ಅರ್ಥ ಹೀಗಿದೆ; ಜೀವನದಲ್ಲಿ ಬರುವ ಸೋಲು-

ಗೆಲುವುಗಳನ್ನು ಪ್ರೀತಿಯಿಂದಲೇ ಅಪ್ಪಿಕೊಳ್ಳುವುದು.. ಹೆದರಿ ಓದುವುದು ಬೇಡ. ಹಾಗೆಯೇ ಆಸೆ- ಆಕಾಂಕ್ಷೆಗಳನ್ನು ಕೈಚಾಚಿ 

ಪಡೆದು ಮುತ್ತಿಟ್ಟುಕೊಳ್ಳುವುದು. ಎಂದರೆ ಆಕಾಂಕ್ಷೆಗಳನ್ನು ಆ ಮಟ್ಟಕ್ಕೆ ನಾವು ಪ್ರೀತಿಸುವುದು. ನಾವು ನೋಡುವ ಹಾಗೆ, 

ರಾಷ್ಟ್ರೀಯ- ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಪಟುಗಳು ತಮ್ಮ ಪುರಸ್ಕಾರವನ್ನು ಮುತ್ತಿಟ್ಟುಕೊಳ್ಳುವಂತೆ 



ನಾವು ನಮ್ಮ ಬದುಕಿನ ಸೋಲನ್ನು ಒಪ್ಪಿ, ಅಪ್ಪಿಕೊಂಡ ಮೇಲೂ ಆಕಾಂಕ್ಷೆಗಳನ್ನೂ ಮುತ್ತಬೇಕು!.

ಬದುಕು ಏನೆಲ್ಲಾ ಕಲಿಸುತ್ತದೆ?!,, ಜಿಗಿಯುವುದು,, ಬೀಳುವುದು, ಏಳುವುದು,, ಮತ್ತೂ ಜಿಗಿಯುವುದು,, 

ಇಷ್ಟೇಲ್ಲಾ ಚಿಂತನೆಗಳಲ್ಲಿ ನನಗೆ ''ನಾನು ಎಲ್ಲೋ ಉಳಿದ ಮಣ್ಣ ಕಣ ಈ ಜೀವನ ಯಾತ್ರೆಯಲಿ'' ಎಂದು ತುಂಬಾ 

ಕಾಡುತ್ತದೆ,,,,,, 

೦೬/೧೦/೨೦೧೪


ಮಾಟ ಮಾಡಿಸಿ, ಸಂಮೋಹನಗೊಳಿಸಿ
ಒಲಿಸಿಕೊಂಡೆಯೋ ನೀ ನನ್ನ,
ಹಗಲು ರಾತ್ರಿ, ಎಚ್ಚರ ನಿದಿರೆಯಲೂ
ಕಣ್ಣ ಮುಂದೆ ನಿನ್ನದೇ ಚಿತ್ರ,
ನಂಬದಿರೆ ಹೋಗು, ಅಂಜನ ಹಾಕಿಸಿ ನೋಡು!
(ಮೂಢನಂಬಿಕೆ ಆರೋಗ್ಯಕ್ಕೆ ಹಾನಿಕಾರಕ  )

04/10/2014

&&&

ಅವನಿಲ್ಲದ ಹೊತ್ತೇ
ಅವನೆಡೆಗೆ ಮತ್ತೂ ಮಿಡಿವಂತೆ 
ಅವನಿದ್ದರೆ ಹತ್ತಿರ
ದೂರಿ ದೂರ ತಳ್ಳೋ
ಏನೋ ವೈಯ್ಯಾರ
ನಿಜವೇನೆಂದೂ ನಾನಿನ್ನೂ ತಿಳಿಯೆ
ಭಾವಕೆ ಬೇಕಿರುವುದು ಪ್ರೇಮವೋ ವಿರಹವೋ!


&&&

ಕಲ್ಪನೆಯಲ್ಲೇ ನಿನ್ನ ಕಂಡು ಭೇಟಿಯಾಗಿ ಪ್ರೇಮಿಸಿ
ಕಲ್ಪನೆಗಳೇ ಹಬ್ಬವಾಗಿ ಹಗಲುಗನಸು ನೀನಾಗಿ
ಎರಡು ದಿನದ ಈ ಬದುಕು, ಸುಮ್ಮನಷ್ಟು ಕಲಬೆರಕೆ ಪ್ರತಿಷ್ಠೆಗಳು
ಎಲ್ಲಾ ಬಿಟ್ಟು ಇದ್ದುಬಿಡುವೆ ನಿನ್ನೊಂದಿಗೆ ಕೈಹಿಡಿದು
ಬಿಟ್ಟುಕೊಡುವೆಯಾ ನಿನ್ನ ಕಣ್ಣಗಲ ಕನಸುಗಳ
ತುಂಬಿಬಿಡುವ ಕಾತುರ ಎನ್ನೊಳಗೆ
ಹೇಳಿಬಿಡು ನೀನಿಂದು
ಗೆಳೆಯನಂತಾ
ಓ ನನ್ನ ಕನಸೇ!


03/10/2014

ಕವನ

ನನ್ನ ಹೆಂಡತಿ,, 


ಹೆಂಡತಿ ತಲೆಗೆ ಹರಳೆಣ್ಣೆಯನ್ನು ಉಜ್ಜುತ್ತಿದ್ದಾಳೆ,,
ಮದುವೆಯ ಹೊಸ ದಿನಗಳ ನೆನಪು
ಆಗೆಲ್ಲಾ ಅವಳು ನಾಚಿ ನೀರಾಗಿ ನನಗೆ ನೀರೆರೆಯುತ್ತಿದ್ದಳು
ನನಗೋ ಗಂಡನೆಂಬ ಅಹಂ, ''ಬಿಸಿ ನೀರು ಹಾಕೇ'', ''ತಣ್ಣೀರು ಸಾಕೇ"
''ಸೀಗೆ ಬೇಡವೇ, ಬೆನ್ನು ಸರಿಯಾಗಿ ಉಜ್ಜು'',
,,,,, ಅವುಗಳೆಲ್ಲವೀಗ ನನ್ನ ಸುಂದರ ಗತ,,
ಈಗ ನಾ ತುಂಬಾ ಜಾಣ,,
ಹದವಾದ ನೀರಿಡುವೆ, ಹರಳಣ್ಣೆಯನೂ ತಲೆಗಿಡುವೆ,,
ಕಣ್ಣಿಗೆ ಸೀಗೆ ಬೀಳಬಾರದೆಂದು ಶಾಂಪೂ ತಂದಿರುವೆ,,
ಇಷ್ಟೇಲ್ಲಾ ನನ್ನ ಆಸ್ತೆಗೆ ಇಂದು ಮರುಗಿ
ಆ ದಿನಗಳ ನೆನಪು ತಂದಿದ್ದಾಳೆ,,
ತಲೆಗೆ ಹರಳೆಣ್ಣೆ ಉಜ್ಜುತ್ತಿದ್ದಾಳೆ,,
ಅದೇನೋ ಅಸ್ಪಷ್ಟ ಗೊಣಗಾಟದಲಿ,, ನನ್ನ ಹೆಂಡತಿ,,

02/10/2014




ಹುಟ್ಟು ನಗು ಮುಖದರಸಿ ಅವಳು
ಅತ್ತಾಳಾದರೂ ಕಣ್ಣೀರ ಕಾಣೆ ಅವಳೆದೆಯೊಳು
ಸುತ್ತಲ ಗಾಳಿ ಎಲ್ಲಿ ಕರಗುವುದೋ ಎಂಬಂತೆ
ಸದಾ ಸುಖಿ ಈ ಚಂದ್ರಮುಖಿ
ಕಣ್ ಕವಡೆ ಮಿಟುಕದ ಅದಮ್ಯ ಚೇತನ ಸಿರಿ
ನಗುತಾ ನಗಿಸುತಲಿರುವ ಅವಳು ಎನ್ನೆದೆಯ ''ಕಾವ್ಯ''

&&&

ನಲಿವಿದ್ದಾಗಲೂ ನೋವ ಮರೆಯದ ಮನ!

&&&

ಬರೆದು ಅಳಿಸಿದ್ದೇ ಹೆಚ್ಚು
ಮನಸ್ಸು ಬರಿದಾಗಿ!
02/10/2014

&&&

ವಿದಾಯವ ನಾನೆಂದೂ ಹೇಳಲೇ ಇಲ್ಲ
ನೀನೆ ರಭಸದಿ ನಡೆದಿರುವೆ
ಅಡಿಯಿಡಲಾರದ ನನ್ನನು
ಏನೆಂದು ಒಂದು ಮಾತೂ ಕೇಳದೆ,
ಮೌನದಿ ಬಿಕ್ಕಿದೆ ಮನವು,,
ಮುನ್ನ ದಾರಿ ಕಾಣದೆ,,,
ಒಂಟಿ ಹೆಜ್ಜೆಗಳನ್ನೂರುತ,,
ಕನಸುಗಳ ಕೋಟೆಯೊಡೆಯುತ,,

&&&

ಬೆನ್ನು ಹಾಕಿ ಹೋದವನ
ಬೆನ್ನ ಮೇಲೆ 
ನನ್ನ ಸಾವಿರ ಕವಿತೆಗಳು
ಅವನೆಂದೂ ಓದಲಾರ!

&&&

ಮನಸ್ಸು ಮಾತನಾಡದ 
ಈ ಹೊತ್ತು
ಚಂದ್ರನಲ್ಲಿ ನಿದಿರೆಗೆ,
ಕನಸು ಖಾಲಿ ಖಾಲಿ
ನನಗೋ ಈ ಪದಗಳ ಖಯಾಲಿ! 
 01/10/2014

&&&

ಪಡೆಯದೇ ಕಳೆದುಕೊಳ್ಳುವುದು
ಒಂದು ಹೇಳಲಾರದ ಸಂಕಟ!

30/09/2014

Tuesday, 30 September 2014

ಮಳೆಗಾಲದಲಿ ಮಳೆಹನಿಗೂ
ಕವಿತೆಗಳಿಗೂ ಸ್ಪರ್ಧೆಯಂತೆ!
ಕವಿಯೊಬ್ಬ ಮೌನವಾದರೆ
ಕೋಗಿಲೆಗೆ ದನಿಯಿಲ್ಲವಂತೆ!
ಕಲೆಗಾರ ಕವಿ ಕೊರೆದರೆ ಕೋಗಿಲೆಯ ಹೃದಯ
ಕಂಠ ಶುದ್ಧ, ದನಿ ಮಧುರ!
ಕವಿತೆಗಳು ಪ್ರೇಮ ಕೊಂಡಿಗಳು
ಕವಿಗೂ ಕಿವಿಗೂ ನಡುವಿನ ಕೋಗಿಲೆಗೂ!!
DA

%%%%%%%%%%%%%

ಒಂದೇ ಸಮನೇ ಸುರಿದು
ಮರೆಯಾದ ಮಳೆಯಂತೆ
ಅವನ ಪ್ರೇಮ!
ನೆನಪಿರುವುದು ಸದಾ
ನೆನೆದ ಕಾರಣಕೆ,,

30/09/2014


ಕೋಪವು ಬಹಳ ನನಗೆ
ಅದಕೆ ಎಲ್ಲವೂ ಒಮ್ಮೆಲೆ ದೂರ!
ದೂರಲಾರೆ ಯಾರನೂ,
ಎನ್ನನೇ ಬಿಂಬಿಸಿಕೊಂಡೆನು ಗಡುಸೆಂದು!
ಪಡೆಯಲಾರೆ, ಬೇಡಲಾರೆ ಕೆಟ್ಟ ಸ್ವಾಭಿಮಾನ ನನ್ನದು!
ನಿಮ್ಮ ಭಾಷೆಯ ಅಹಂ!

%%%%%%%%%%%%%%%%%

ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆ
ಯಾರೋ ಹೇಳಿದ ಮಾತ ಕೇಳಿ
ಸಜ್ಜಾದ ಗಾಳದಲಿ ಮೀನು ಹಿಡಿಯ ಹೊರಟೆ,
ಮೀನನ್ನೇನೋ ಹಿಡಿದೆ, ಆದರೆ ಅದರ ಹೆಜ್ಜೆಯನ್ನಲ್ಲ
ಹೆಣ್ಣನ್ನೇನೋ ಒಲಿಸಿಕೊಂಡೆ ಆದರೆ ಅವಳ ಮನೋಭಿಲಾಶೆಯನ್ನಲ್ಲ!
ನಾನೊಬ್ಬ ಮೀನುಗಾರ, ಮೀನ ಹಿಡಿದು ತರುವೆ!!

%%%%%%%%%%%%

ಪ್ರೀತಿ ಕಾಡಿದಷ್ಟು
ಶೃಂಗಾರ ಕಾಡಲೇ ಇಲ್ಲ
ಆಗಾಗ ಕೆಣಕಬಹುದಷ್ಟೇ
ಹೆಣ್ಣು ಸೋಲುವಳು ಪ್ರೀತಿಗೆ
ಕುರುಡು ಕಾಮನೆಗಳಿಗಲ್ಲ,
ಇದೇ ನನ್ನ ಉತ್ತರ
ರಸ ಸಮಯವ ಸಾಧಿಸಲು
ಹೆಣಗುವ ತಂಗಾಳಿಗೆ, ಚಂದ್ರಮನಿಗೆ,
ವಿರಹದುರಿಯ ಸೂರ್ಯನಿಗೆ!,,

30/09/2014


ಕವಿತೆಗಳು ಮನಸ್ಸನ್ನು ತೆರೆದಿಟ್ಟರೆ
ಮನಸ್ಸು ವಾಸ್ತವದಲ್ಲೇ ಹುದುಗಿದೆ
ಒಮ್ಮೆ ನಗು ಒಮ್ಮೆ ಅಳು
ಅದುವೇ ಜೀವನ, ನಿತ್ಯವೂ ರಸ ಕಾವ್ಯ !!

%%%%%%%%%%%%%%%%%

ಚಂದ್ರಮಾ,
ನಿನ್ನ ಆಗಮನದ ಸಮಯವ ಬದಲಿಸಿಕೋ
ನೀ ಬರುವ ಹೊತ್ತಿಗೆ
ಉಂಡು ಮಲಗೋ ನಾನೂ ಇನ್ನೂ ದೂರ!
ತುಸು ಬೇಗ ಬಂದುಬಿಡು ಸಂಜೆಗೆ,,
ಒಟ್ಟಿಗೆ ಊಟ ಮಾಡೋಣ,, ಕತೆ ಕೇಳೋಣ
ನೀ ಹಾಡಿಗೆ ನಾ ನಿದಿರೆಗೆ ಹೊಂದಿಕೊಳ್ಳೋಣ!!

%%%%%%%%%%%%%

ಈ ಕವಿತೆಗಳಲ್ಲೇ ನಾ ಕಳೆದು ಹೋಗೋ ಭಯವಿದೆ!,
ಬಯಸಿದ್ದೆಲ್ಲವೂ ಸಿಕ್ಕಿಬಿಡೋ ಖುಷಿ,,
ವಾಸ್ತವೆಲ್ಲಾ ಊದಿ ಬಿಟ್ಟ ಬೂದಿ!
ಈ ಕವಿತೆಗಳಲ್ಲೇ ಕಳೆದು ಹೋಗೋ ಭಯವಿದೆ
ಆದರೂ ಜೊತೆಗೊಬ್ಬ ಗೆಳೆಯನ ಕವನ
ಕಳೆದು ಹೋದ ನನ್ನ ಹುಡುಕಿಕೊಡುವುದೆಂದೇ
ಸುಳ್ಳೇ ನನ್ನ ಆಶಯ!!

29/09/2014

ಕವನ

ಪ್ರೀತಿ,,,,,


ಪ್ರೀತಿ, ಏನೆಲ್ಲಾ ಮಾಡುತ್ತದೆ?!
ಸುಳ್ಳೇ ಆದರೂ
ಕನಸುಗಳ ಹುಟ್ಟಿಸುತ್ತದೆ,,
ಹಿತವಾದ ಭ್ರಮೆಗಳಲಿ,, !!
ದೆಗೆಯಲೂ ತಂಗಾಳಿಯ ಅನುಭವ
ಅಮಾವಾಸ್ಯೆಯಲ್ಲೂ ಚಂದ್ರೋದಯದ ಉನ್ಮಾದ
ಶೀತಲ ಭಾವವೂ ಹೊತ್ತಿ ಉರಿವ ದೇದೀಪ್ಯಮಾನ
ತಾನಿಂತ ನೆಲೆವೇ ತೇಲೊ ಸ್ವರ್ಗ
ಈ ಕನಸುಗಳಿಗೆ ಹೇಗೆ ಗೊತ್ತೊ ಪ್ರೇಮ ಪರಿಪಾಠ
ಹುಚ್ಚು ಕಾಮನೆಗಳಲಿ ಹರಿದು ಭೋರ್ಗರೆತ
ಸುಂದರ-ಸುಮಧುರುಗಳೆಲ್ಲವೂ ಸುತ್ತಲ ನಿರ್ವಾತ
ಧ್ಯಾನಸ್ಥಿತಿಯಿಂದೆದ್ದ ಮಾನಸ ರುದ್ರ
ಪ್ರೀತಿ ಏನೆಲ್ಲಾ ಮಾಡುತ್ತದೆ
ಪಾಮರನೂ ಲಯದಲಿ ಹಾಡುವಂತೆ
ವಿರಹಿಗಳೂ ಪ್ರಣಯಿಗಳಾಗುವಂತೆ
ಮೋಡ ಮಳೆಗರೆವಂತೆ,
ಕಾಮನಬಿಲ್ಲು ಜಗದಗಲ ಹಬ್ಬುವಂತೆ
ಜೀವನ ಭಗ್ನಶಿಲೆಗಳೂ
ವಿಭಿನ್ನ ಕಲಾಕೃತಿಗಳಾಗಿ ನಿಲ್ಲುವಂತೆ
ನನ್ನಂತೆ,, ಈ ಜಗದಂತೆ,
ಒಳಿತನ್ನಷ್ಟೇ ಪ್ರೀತಿಸುವ
ಸಕಲ ಚೇತನಗಳಂತೆ

29/09/2014
ಎನ್ನ ಕುರಿತು ಕವನ ಬರೆಯೆಂದ
ಪೋರರೆಲ್ಲಾ ಸೋತು ಹೋದರು
ತಲೆಯಾಡಿಸಿ ಕೂತ ನನ್ನೆದುರು,
ಹೀಗೊಂದು ಸುಳಿ ಗಾಳಿ ಗೆಳೆಯ
ಕವಿತೆ ಕಟ್ಟಿ ಕಟ್ಟಿಸುತ್ತಿದ್ದಾನೆ
ಗಾಳಿಯಿದ್ದಷ್ಟು ಕಾಲ ನಾನೂ ಹಾಡುವೆ
ಹಾಡಿಸೊ ಜಾಣತನ ಅವನದಷ್ಟೇ,,

29/09/2014

^^^^^^^^^^^^^^^^^^^^^^^^^^^^

ಪ್ರೀತಿಸುವೆ ನಿನ್ನ ನಾ ಎನಲು
ಅಡ್ಡವಾದದ್ದಾದರೂ ಎನ್ನ ಅಹಂ ಎನ್ನದಿರು
ಏನು ಮಾಡಲಿ, ನಾನೂ ಅಂತೆಯೇ ಭಗ್ನಗೊಂಡ ಕನಸಿನವಳು
ಭಯವಿರುವುದಾದರೂ ಎದುರಾಗೋ ತಿರಸ್ಕಾರಗಳದ್ದು,,,
,,,,,, ನಿನಗೂ ಹಾಗೆಯೇ?!

28/09/2014

^^^^^^^^^^^^^^^^^^^^^

ಮನಸಿಗಿಳಿಯಲು
ಹುಲುಸು ಸಮಯವ
ಕಾಯಲೇ ಬೇಡ ನೀ
ಮರಿ ಜಿಂಕೆ ಜಿಗಿವಂತೆ
ಜಗಿದು ಸೇರಿಕೊ
ಕಸಿವಿಸಿಯ ಬಿಸಿಯುಸಿರ
ಈ ಎದೆಯೊಳಗೆ
ಕಣ್ಣೆವೆಗಳಪ್ಪವ ಮುನ್ನ
ನಶೆಯ ಕಣ್ಣೊಳಗೆ
ನನ್ನಯ ಕನಸೊಳಗೆ

27/09/2014

Sunday, 28 September 2014

ಚಿತ್ರಗಳು


28/09/2014



^^^^^^^^^^^^^^^^^^^^^^^^^

ನನ್ನ ಪ್ರತೀ ಹುಮ್ಮಸ್ಸಿಗೂ
ವ್ಯಂಗ್ಯವಾಡುವ ಅವಳು
ಕಾರಣ ಹೇಳದೆ ದೂರಾಗಿದ್ದು
ಒಂದು ದಿವ್ಯ ವಿದಾಯ;
ಈ ನನ್ನ ಪ್ರತೀ ಹುಂಬತನಕ್ಕೂ
ಗರಿಕೆದರಿ ಬಣ್ಣ ತುಂಬಿಸೊ ಇವಳು
ಹತ್ತಿರಾದಾಗಿನಿಂದ ಹೊಸ ಸುಪ್ರಭಾತ!

^^^^^^^^^^^^^^^^^^^^^

ಕಾಲದೊಳೆಲ್ಲೋ ಕಳೆದು
ಮತ್ತೆಲ್ಲೊ ಸಿಲುಕಿಕೊಂಡೆವು
ಎನ್ನುವುದೆಲ್ಲವೂ ಸುಳ್ಳೇ
ನಾವಿದ್ದ ತಾಣದಲ್ಲೇ ನಾವಿದ್ದೇವೆ,
ಮುಂದಣ ಹಜಾರವಷ್ಟೇ
ಮಾರ್ಪಟ್ಟಿದೆ
ಆಸೆಗಳು ನಮ್ಮ ಕಲ್ಪನೆಗಳನು
ಓಡಿಸಿದಂತೆ,,
ಎಂತಹ ದುರಂತ?!
ನಿಲ್ದಾಣದಲ್ಲೇ ನಿಂತು ಮುಂದಲೂರಿನ
ಕನಸು ಕಂಡಂತೆ...

27/09/2014
^

ಕಾಲದೊಳೆಲ್ಲೋ ಕಳೆದು
ಮತ್ತೆಲ್ಲೊ ಸಿಲುಕಿಕೊಂಡೆವು
ಎನ್ನುವುದೆಲ್ಲವೂ ಸುಳ್ಳೇ
ನಾವಿದ್ದ ತಾಣದಲ್ಲೇ ನಾವಿದ್ದೇವೆ,
ಮುಂದಣ ಹಜಾರವಷ್ಟೇ
ಮಾರ್ಪಟ್ಟಿದೆ
ಆಸೆಗಳು ನಮ್ಮ ಕಲ್ಪನೆಗಳನು
ಓಡಿಸಿದಂತೆ,,
ಎಂತಹ ದುರಂತ?!
ನಿಲ್ದಾಣದಲ್ಲೇ ನಿಂತು ಮುಂದಲೂರಿನ
ಕನಸು ಕಂಡಂತೆ...

28/09/2014

ಚಿತ್ರಗಳು


26/09/2014


ಚಿತ್ರಗಳು


24/09/2014



ಒಂದೇ ಸಮನೆ ಮಳೆಯಲಿ
ತೊಯ್ದ ಇಳೆ
ಅಲ್ಲೆಲ್ಲೋ
ಹಕ್ಕಿಗಳ ಚೀವ್ ಚೀವ್
ನಿಂತ ಮಳೆಗೆ ಗುಡುಗು ಹಿಮ್ಮೇಳ
ಕಾವಿಟ್ಟ ಹಬೆ
ರಸ ನಿಮಿಷವೀ ಘಳಿಗೆ
ಸ್ವರ್ಗಕ್ಕೇ ಕಿಚ್ಚು ಹೊತ್ತಿಸೊ
ಕಾವ್ಯ ಹುಟ್ಟೊ ಸಮಯ,,,,,,
ಕೆಹು ಕೆಹು......
ಛೇ,,,
ಈ ಹಾಳಾದ ಕೆಮ್ಮು
ಧರಗಿಳಿಸಿ ಬಿಸಿ ನೀರ ಕುಡಿಸಿದೆ...

24/09/2014
^^^^^^^^^^^^^^^^^^^

ಕೆಮ್ಮಿರಲಿ ಜ್ವರವಿರಲಿ
ಜೊತೆಯಲಿ ನೀನೆಂಬ
ನಾಮವಿರಲಿ ಸಾಕೆನಗೆ;
ಜ್ವರದಲೂ ಕನವರಿಸುವೆ ನಿನ್ನೊಲವ,
ಕೆಮ್ಮಿನಲೂ ಕಲ್ಪಿಸಿರುವೆ
ಕೈಹಿಡಿದು ರಮಿಸುವ ನಿನ್ನ,,
ನೀನು ಎನ್ನುವ ಕಲ್ಪನೆಯೇ ಚೆಂದ
ನೀನು,,,
ನೀನು,,,
ಎನ್ನ ಕಣ್ಣೋಳ ಮೀನು!

23/09/2014

^^^^^^^^^^^^^^^^^^^^^^^^^^^^

ಗೆಳೆಯನಾಗದ ಗೆಳೆಯ,,
ಅವನೊಮ್ಮೆ ನಿಟ್ಟುಸಿರನಿಡಲು
ಒಳಗೊಳಗೇ ಬೇಯ್ವ ಹೃದಯ
ಬದುಕ್ಕಿದ್ದಾದರೂ ಏಕೊ
ಆಯುಷ್ಯವಿದೆ ಎಂಬ ಕಾರಣಕೊ
ನಿರ್ಲಿಪ್ತವಾದ ಭಾವಗಳ ಕೊಲ್ಲಲೊ
ಕೊನೆಗೂ ಜೀವಿಸಿ ಸಾಧಿಸುವುದಾದರೂ ಏನನೊ
ಗೆಳೆಯನಾಗದ ಗೆಳೆಯನ ನೆನಪುಗಳಿಗೆ ಸಾಕ್ಷಿಯಾಗಲೋ,,,,,

^^^^^^^^^^^^^^^^^^^

ಮಳೆಯ ಹೊಡೆತಕೆ
ಕನಸು ಸಡಿಲ, ಎಚ್ಚೆತ್ತ ನಿದಿರೆ
ಇದಕೆ ಯಾರೂ ಹೊರತಲ್ಲ
ಮನಸು ತುಂಬಿದವರು
ತುಂಬಿಕೊಳ್ಳೊ ಕಾತುರದವರು

23/09/2014

^^^^^^^^^^^^^^^^^

ಬೆರೆಯದೆ
ಬೆಸೆದುಕೊಳ್ಳುವುದಾದರೂ ಹೇಗೆ
ಹೇಳೇ ಪ್ರೀತಿ?!

22/09/2014

ಚಿತ್ರಗಳು


21/09/2014

ಚಿತ್ರಗಳು


14/09/2014

ಚಿತ್ರಗಳು



07/09/2014

ಕವನ

ಎನ್ನ ನಂಬಿ,,,



ಎನ್ನ ನಂಬಿ''
ಎನ್ನುವುದು ಎಷ್ಟು ಕಷ್ಟವೋ!!
ಅವರಿವರು ಕೆಸರು ಕದ್ದಾರು,
ಎನ್ನ ಗದ್ದೆಯಲ್ಲೀಗ ಪೈರಿಲ್ಲ
ಅವರೆಲ್ಲಾ ದನಗಳ ಬಿಟ್ಟಾರು
ಪೈರಿಲ್ಲದ ಗದ್ದೆಯೆಲ್ಲಾ ದನದ ಹೆಜ್ಜೆ,
ಎನ್ನ ನಂಬಿ,,
ಕಾಲುವೆಯ ನೀರು ತಿರುಗಿಸ್ಯಾರು
ಅವರಿವರ ಹೊಲ-ಗದ್ದೆಗಳಿಗೆ,
ಎನ್ನ ಶ್ರಮಕ್ಕೆಲ್ಲಾ ಅವರ ಹೊಲ ಹಸನು
ನಂಬಿ ನನ್ನ,
ನಾ ಬೆಳೆದ ಫಲ ಎನಗಿಲ್ಲ,,
ಕದ್ದರು ಒಯ್ದರು ಬೆಳೆದಂತೆ ಅವರೇ,,
ಈಗೀಗ ನಾ ಬೆಳೆಬಾರದೆಂದು ರಾತ್ರೋ ರಾತ್ರಿ
ಕದ್ದಾರೋ ಆ ಸೂರ್ಯನ,
ನಾ ಹೇಗೆ ಬೆಳೆಯಲಿ ಎನ್ನ ಗದ್ದೆಯಲಿ ಏನನ್ನಾದರೂ
ನಂಬಿ ಎನ್ನ,
ಎನ್ನುವುದು ಎಷ್ಟು ಕಷ್ಟವೋ
ಅವನ ಸೂರ್ಯನ್ನನ್ನೇ ಅವರಿವರು ಕದ್ದರು
ಕತ್ತಲ ತುಂಬಿಸಿಹರಂತೆ
ಅವನ ಗದ್ದೆಯೊಳು ಬಿತ್ತಿ ಬೆಳೆಬೆಳೆವನೆಂದು
ಅವನ ಹೆಸರು ಹಾಳು ಮಾಡಿಹರು
ನಂಬಿ ಬಿಡೋಣ ಬಿಡಿ ನಾವು ನೀವು!!
ನಂಬಿ ಎನ್ನ,
ಎನ್ನುವುದು ಎಷ್ಟು ಕಷ್ಟವೋ?!!

21/09/2014
ನವಿಲು ಕುಣಿವುದು ಅದರಂತೆ
ನಮ್ಮ ನಿಮ್ಮ ಅಭಿಮಾನದಾಶಯವಿಲ್ಲದೆ
ಹಾಗೆಯೇ ಒಬ್ಬ ಸಜ್ಜನ ನಡೆವನು ಅವನಂತೆ
ತನ್ನ ಬಣ್ಣಿಸದೇ, ಅವರಿವರ ಜರಿಯದೇ

^^^^^^^^^^^^^^^^^^^^^^^^^^^^^

ಮನುಷ್ಯ ತನಗೆ ಬೆನ್ನೇ ಇಲ್ಲದಂತೆ
ಮುನ್ನೆಡೆದ ಹಿಂದಾಕಿದ ದಾರಿಗಳ ದೂರಿ
ತಾನು ಮಾಡಿದ್ದೇ ಸರಿಯೆಂದು ಘೋಷಿಸಿಕೊಂಡ
ತನ್ನ ಬೆನ್ನಿಗೆ ಕಣ್ಣೇ ಇಲ್ಲದಂತೆ,
ತನ್ನೇದುರಿನ ರೂಪವನ್ನೇ ಬಿಗಿದಪ್ಪಿದ
ಕನ್ನಡಿಯೊಳ ಮೋಹವನ್ನೇ ಮರೆಮಾಚಿ
ಕಟು ಸತ್ಯಗಳ ಕೊಲೆಗೈದ
ಸಾಕ್ಷಿಯಾಗೊ ತನ್ನ ಕಣ್ಣುಗಳೇ ಇಲ್ಲದಂತೆ!!

21/09/201

^^^^^^^^^^^^^^^^^^^^^

ಕೆಲವೊಮ್ಮೆ 'ಕಳೆದೇ ಬಿಟ್ಟೆವು'
ಎಂದೆನಿಸುವಾಗ
ಮತ್ತೊಮ್ಮೆ ಸಿಕ್ಕದ್ದೇ ಆದಲ್ಲಿ
ಅದುವೇ ಸ್ನೇಹ ವಿಶ್ವಾಸಗಳು
ಪ್ರಾಮಾಣಿಕ ಮನಗಳದು!

15/09/2014

Monday, 22 September 2014



ಬಿಟ್ಟು ನಡೆಯುವರೆಲ್ಲಾ ನಡೆದುಬಿಡಲಿ,
ಜೊತೆಯಿದ್ದು ಕಸಿವಿಸಿಕೊಳ್ಳುವುದು ಬೇಡ!

**********************

ಓಡಿದಷ್ಟೂ ಹಿಂಬಾಲಿಸೊ
ಸೋಲುಗಳು;
ಗೆಲುವುಗಳಿಗೇ
ನಾವು
ಅನಿವಾರ್ಯವಾಗಿಸಿಬಿಡುವವು!

***********************

ಗುಂಪಿನಿಂದ ಓಡಿದ್ದು
ಇನ್ನು ಸಾಕು,,
ಗುಂಪಿಗೊಂದು ಒಳ ಕೊಂಡಿಯಾದರೂ
ಆಗೋ ಆಲೋಚನೆಯಿದೆ,,
ಮನಸಿಗಷ್ಟು ಕಸರತ್ತು, ...
ಚಿಂತನೆ
ಅರಳೊ ಹೊಂಬಣ್ಣಗಳ ತುಂಬಿಕೊಳ್ಳ
ಹೊಸ ಹೊಸ ಕಾಮನೆಗಳು ಮೇಳೈಸಿ
ಮೆರೆದಿದೆ ಮತ್ತೆ ಮತ್ತೆ ಮನವು
ಹೊರಳಿ ಬೆಳಕಿನೆಡೆಗೆ,,,


13/09/2014

*********************************

ಬಾಳೊಂದು ಭಾವಗೀತೆ, ಭರವಸೆಯೆ ಪಲ್ಲವಿ,,,, :-)

************************

ಎನ್ನ ಕನ್ನಡಿ
ಎನಗೇ
ಸೊಗಸೆನಿಸಿದಾಗ
ಜಗದ ಮಸುಕೆಲ್ಲಾ
ಸಹ್ಯ!

10/09/2014
*******************************

ಪ್ರಜ್ವಲಿಸೊ ಬೆಂಕಿ ಒಳಗೊಳಗೇ ಸುಟ್ಟಿದ್ದು
ಅರಿವಾಗುವುದು ಬೆಳಕು ನಂದಿದ ನಂತರವೇ,,!!

07/09/2014
**********************

ಮೆಚ್ಚಲು
ಮನಸ್ಸಿರಬೇಕು
ಕಣ್ಣೆದುರಿಗಿನ
ಸೊಗಸಿಗಿಂತ!!
ಮೊಸರೊಳ ಕಲ್ಲಾಗ...
ಇದ್ದರೂ ಮಾಯ!!!


06/09/2014

Saturday, 6 September 2014

ಗುರು,,


ಅಕ್ಷರಕೂ ಶಿಕ್ಷಕನಿಗೂ
ಅದೇನು ನಂಟೊ
ಒಂದಕ್ಷರವ ಕಲಿಸಿ
ಎರಡನೇಯದನ್ನು ನೀನೇ
ತಿದ್ದೆಂದ ಜೀವನವೂ
ಮಹಾ ಗುರುವೇ ಸರಿ,,

05/09/2014


'ವಿಚಿತ್ರ'ವೆಂದರೂ ಸರಿಯೆ
'ವಿಚಿತ್ರ'ದೊಳೊಂದು 'ಚಿತ್ರ'ವಿಹುದು
ಮುಂದೊಮ್ಮೆ ಚಿತ್ರವೆನಿಕೊಳ್ಳಲೂಬಹುದು
ವಿಚಿತ್ರವೂ ಹಲವು ತರತರ ಗೆರೆಗಳ ಹಾವಳಿಗೆ
ಬಣ್ಣಗಳು ತುಂಬಿ ಕಳೆಯುವ
ಲೆಕ್ಕಾಚಾರಗಳಿಗೆ,,

************************

ಅವರ ಗೆಲುವ ಸಹಿಸಲಾಗದವರು
ದೂರಿ ದೂರ ಸರಿಯುವರು
ಉದಯಿಸೊ ಸೂರ್ಯನೆದುರು
ರವರವ ಬೆಳಕ ದೊಡೆತಕೆ
ಕಣ್ಣು ತೆರೆಯದ ಅಸಹಾಯಕತೆಗೆ
ಬಿಸಿಲನೇ ದೂರಿ ಕಣ್ಣ ಮುಚ್ಚುವರು
ಕೈ ನೆರಳ ಆಸರೆ ಬಯಸಿ!

******************

ಆಸೆಗಳ ಮೀರುತ
ವೈರಾಗ್ಯ ಹತ್ತಿರಾಗಿ
ಬದುಕು ಮುಗಿವ ಮುನ್ನ
ಬದುಕಿಬಿಡುವ ಆಸೆಯು
ಭಗ್ನಗೊಂಡ ತಪ
ಮರುಭೂಮಿಯಿಂದ ಹೊರಟ
ಒಂದು ಪರಿಮಳ!

04/09/2014

ಕವನ

ಕನಸ ಬಲೆ,,,


ಕನಸ ಬಲೆಯ ಹೆಣೆಯುತ್ತಿದ್ದೆ
ಬಂಧಿಯಾಗುವ ಭಯವಾಗಿ
ನಡುವೆಯೇ ಕಣ್ಮರೆಯಾದ
ಈ ನಡುವೆ ಕನಸಿನ ಮಹಲು ನನ್ನದು
ರೂಪುಗೊಳ್ಳುತ್ತಿದೆ ಸುಂದರ
ಸಿಂಹಾಸನವೊಂದು ಖಾಲಿ
ಅದು ಅವನಿಗಾಗಿ ಕಾತರಿಸಲು,,
ಅವನಿಗಿನ್ನೂ ಭಯವಂತೆ
ಕಾರಣ
ಅವ ಬರುವ ಮುನ್ನ, ಬಂದ ನಂತರವೂ
ನನ್ನದೇ ಹೃದಯ ರಾಜ್ಯಭಾರ
ಅವನನೂ ಸೇರಿಸಿ... ;-)

04/09/2014

ಕವನ

ಆ ಮನ,,,


ಆ ಮನಕೆ
ಜೀವನದ ಸೌಂದರ್ಯವನ್ನು
ನಂಬಿಸುತ್ತಿದ್ದಳು
ಕರಿ ನೆರಳು,
ಕಳೆದ ಭಾವ
ಹೊಸಕಿದ ಕನಸಿನ ಪರಿವೆ
ಅವಳಿಗೂ ಇದ್ದ ಕಾಲ,

ಬೆಳಕು ಉರಿಯುತ್ತಿರಲು
ಕಣ್ಣಿಗೆ ಕಾಣದ ಗಾಳಿ
ಬೇಕಿದ್ದ ನೆಪವಿದೆ,,
ಬದುಕಲು ಒಳ ಒತ್ತಡವಿರಬೇಕು
ಪ್ರೀತಿಯಲಿ ತೇಲೊ ಹುಮ್ಮಸ್ಸಿರಬೇಕು
ಹುಟ್ಟು ಹಾಕಿ ದುಃಖಗಳನು
ಹಿಂದಾಕುತಾ ಮುಂದೆ ಸಾಗಬೇಕು..
ಆ ತೀರವ ಸೇರಲೆಂದು,, ಇಲ್ಲವೇ
ಮುಳುಗದೇ ಸಾಗಲೆಂದು,,
ಕರಿ ನೆರಳ ಹೀಗೊಂದು ನಿರೂಪಣೆ,,

02/09/2014


ನೀನೆಷ್ಟು ಬಚ್ಚಿಟ್ಟುಕೊಂಡರೇನು
ಮರದ ಮರೆಯಲಿ,
ನೀ ಹಿಂದಿರುಗಿ ನೋಡಿಯೇ ಇಲ್ಲ
ನಿನ್ನ ಬೆನ್ನಿಗೆ ನಾನೂ ಬಚ್ಚಿಟ್ಟುಕೊಂಡಿರುವೆ!

ಅವರ್ಯಾರು ನೋಡಿಲ್ಲ,,

***********************

"ಅವನು ಮತ್ತು ಕನಸು"

ನನ್ನ ಕನಸುಗಳನು ಪೋಣಿಸಿಕೊಳ್ಳಲು ಅವನಿಲ್ಲ,
ಆದರೂ ನನ್ನ ಕನಸುಗಳಿಗೆ ಕೊನೆಯೇ ಇಲ್ಲ
ಅವನೇ ಬಂದು ಪೋಣಿಸಿ ಎಣಿಸಿ ಮಾಲೆಯಾಗುವನು
ಎಂಬುದೇ ನನ್ನ ದೊಡ್ಡ ಕನಸು
ಕನಸುಗಳಿಗೀಗ ಬರವಿಲ್ಲ
ಎಲ್ಲಾ ಕನಸುಗಳಲೂ ಅವನೇ ಇರುವನಲ್ಲ
ಇದು ಮಾತ್ರ ಕನಸಲ್ಲ!

****************

ಪ್ರೀತಿಯಲಿ ಮುನಿದವರು
ಗಮನ ಸೆಳೆಯಲು ಜರಿದವರೇ
ಒಮ್ಮೊಮ್ಮೆ ಬಹುವಾಗಿ
ಇಷ್ಟವಾಗಿಬಿಡುವರು,,!

02/09/2014

***************

ನಡು ರಾತ್ರಿ ಕನಸಲಿ
ಹಸಿರು ತಂದವನೇ
ಕತ್ತಲೆಯ ಕಪ್ಪೊಳು
ನಿನ್ನ ನಿಶಾನೆಯ
ಗುರುತು ಹಚ್ಚಲಾಗಲಿಲ್ಲ
ಜತನದಿ ಹಗಲಾಗಿ ಬಾ
ನಾ ಹಗಲುಗನಸಿನವಳು!

01/09/2014

ಕವನ

ಕ್ಷಮೆ,,,,,


ಕ್ಷಮಿಸಿಬಿಡಬೇಕು ಅವರೆಲ್ಲರನೂ
ಚೂರಿ ಹಾಕದೆ ಕತ್ತು ಹಿಸುಕದೆ
ಜೀವವಿದ್ದೂ ಇಲ್ಲವಾಗಿಸಿ
ಒಳಗೊಳಗೇ ಒಸರೋ ರಕ್ತಕೆ
ಮದ್ದು ಮಾಡಿಕೊಳ್ಳಲಾಗದೆ 
ಕಂಬಗಳಂತೆ ನಮ್ಮ ನಿಲ್ಲಿಸಿದ 
ಆ ಅಷ್ಟೂ ಜನರನ್ನು,,
ಕ್ಷಮಿಸಿಬಿಡಬೇಕು,,

ಹೌದು ಕ್ಷಮಿಸಿಬಿಡಬೇಕು
ನಮ್ಮೊಳಗಿನ ಮೃದುತ್ವ ಕಳೆದು
ಕಲ್ಲೊಂದು ಜೀವ ತಳೆದು
ದಿನ ಬೆಳಗಾಗುತ್ತಲೆ
ಕಣ್ಣೀರ ಇಂಗಿಸಿ ನಿಂತ
ನಮ್ಮದೇ ಮುಖವು 
ಭಾವಗಳ ಗೆರೆಗಳಳಿಸಿ
ನಗುವನ್ನೊಂದು ಚಿನ್ಹೆ ಮಾಡಲು
ಕಲಿಸಿದ ಆ ಎಲ್ಲಾ ಜನರನೂ
ಕ್ಷಮಿಸಿಬಿಡಬೇಕು,,,

ಕ್ಷಮಿಸಿಬಿಡಬೇಕು
ಹೆಜ್ಜೆ ಹೆಜ್ಜೆಗೂ ಕಾಲೆಳೆದ
ಇದ್ದ ಇರದ ಸುಳ್ಳ ಸೃಷ್ಠಿ ಮಾಡಿ
ಹೊರಗೆಳೆದ ನಮ್ಮ ವಿನೂತನ ಶಕ್ತಿಗಾಗಿ
ನಮ್ಮ ನಾವೇ ಹೆಮ್ಮೆಯ ಸವಾಲುಗಾರರಾಗಿ
ಕಾಣೊ ಅವಕಾಶಗಳ ನೀಡಿದ ಜನರನು
ಕ್ಷಮಿಸಿ ಹಾರೈಸಿ ಬಿಟ್ಟುಬಿಡಬೇಕು,,
ಬೇಕೆಂದರೂ ಸುಳಿವು ಸಿಗದಂತೆ
ಪ್ರೀತಿಯನು ದ್ವೇಷಿಸಿದ ಅವರಿಂದ
ದೂರ ದೂರ ನೆಡೆದು,,,

01/09/2014


ಜೀವನದ ದುರಂತಗಳನ್ನೆಲ್ಲಾ ಬಿಚ್ಚಿಡಬೇಕಿರಲಿಲ್ಲ
ಸೋಗಸೇನಿಲ್ಲ ನಿನ್ನಲಿ ಎನ್ನುವೆಯೇನೋ
ಎಂದಷ್ಟೇ ಹರಿದುಬಿಟ್ಟೆ ಅಂದು ಪದಗಳಲಿ

***********************

ಚಿಕ್ಕ ಮಗುವು ಕೈಯೊಳಿಂದ
ನವಿಲು ಗರಿಯ
ಕಿತ್ತುಕೊಂಡು ಓಡುವಂತೆ
ನೀ ನನ್ನಿಂದ ಮಾತುಗಳ
ಸೆಳೆದುಕೊಂಡು ಹೋದೆ,
ಮರಳಿಸುವುದಾದರೂ ಎಂದು?
ಹೇಳಿ ಹೋಗಬಾರದಿತ್ತೆ?!,,,,

**************************

ಚಿಗುರೋ ಹೃದಯಕೆ
ಏನೇನೋ ಆಸೆಗಳು ಕನಸುಗಳು,
ಪ್ರೀತಿ ಪ್ರೇಮ ಕನವರಿಕೆಗಳು,
ಅನಿರೀಕ್ಷಿತ ಹೊಡೆತಕೆ
ಜೀವನ ರಾಗ ಏರುಪೇರು,,
ದುಃಖ ಉಮ್ಮಳಿಸಲು
ಕಣ್ಣೀರ ಸುರಿಸಲಾರದ ಮೂಕ,,
ಕಣ್ಣಿರಿಗೆ ಮುತ್ತೋ ಧೂಳುಗಳ ಕಾರಣ
ಬತ್ತಿಸಿಕೊಳ್ಳೊ ಕೊಳಗಳ ಮಾಲೀಕರು!!
ಜೀವನವೊಂದು ನಾಟಕ,,
ನಗುವೊಂದು ಸಾಧನವದದ್ದು ವಿಪರ್ಯಾಸ,,

31/08/2014

************************************

ಬೆನ್ನ ಹಿಂದೆ ನಿಂತು ಎಷ್ಟು ಆಟವಾಡುವೆಯೋ ಕೃಷ್ಣ
ನವಿಲು ಗರಿಗಳೆಲ್ಲಾ ಚೆಲ್ಲಾಪಿಲ್ಲಿ ನೋಡು
ಮಡಿಕೆ ಬೆಣ್ಣೆಯೂ, ದೇವಕಿಗೆ ಮೊದಲೇ ತಿಳಿದಿತ್ತೋ ಏನೋ
ನಿನ್ನ ತುಂಟತನ ಅದಕೆ ನನಗೆ ವಹಿಸಿದಳು ನಿನ್ನ,,

*****************

ಇಲ್ಲ ಇಲ್ಲವೆಂದೇ ಕಳೆದೆ
ನಿನ್ನ ಇರುವಿಕೆಯ ಲೆಕ್ಕಿಸದೆ,
ಹೃದಯವಿರುವುರಾದರೂ ಹೇಗೆ
ಮಿಡಿಯುತ ನೀ ನಿಲ್ಲದೆ,,

30/08/2014

Saturday, 30 August 2014

ಕವನ

ಆ ದೂರದ ತೀರವ ಸೇರುವ ಹವಣಿಕೆಯಲಿ
ಪಯಣಿಸಿರುವೆ ತೋಚಿದ ದಿಕ್ಕಿನಲಿ
ಸಿಕ್ಕರೆ ಸಿಗಲಿ ದಡವೊಂದು,
ಇಲ್ಲದೆ ಇರಲಿ ಕೊನೆಯೊಂದು

ನಡು ನೀರ ಈ ಪಯಣ ನಿರಂತರ
ನಿಂತು ನೀರೊಳು ಮುಳುಗಲಾರೆ,,
ತೇಲುತ ಸಾಗುತ ಉಳಿದರಷ್ಟೇ ಸಾಕು
ಉಸಿರಡಗಿ ತಳ ನೀರ ಸೇರದಂತೆ,,

29/08/2014


ದೇವನೊಬ್ಬ ನಾಮ ಹಲವು
ತತ್ವವೊಂದೆ ಧರ್ಮ ಹಲವು
ನೀತಿಯೊಂದೆ ಆಚರಣೆ ಹಲವು
ಹಲವು ರೀತಿಯ ನೀತಿಗಳ ನಡುವೆ
ಮನದ ಕ್ಷೋಬೆ ಅಳಿದು
ಬೆಳಕೇ ಬೆಳಕು ತುಂಬಿ ನಗಲಿ
ಜೀವನಗಳೆಲ್ಲಾ ಜೀವನ್ಮುಖಿ ತೇಜದಲಿ.

____________________

ದೇವ ಗಣ, ಭೂತ ಗಣ
ಅಧಿದೇವ ಶ್ರೀಗಣನಾಥ
ಮನ್ನಿಸೆಮ್ಮ ದೂರ್ತ ನಡೆಯ
ಕನಿಕರಿಸಿ ಹರಸು ದೇವ
ಭಕ್ತರು ನಾವೇ ನಿನ್ನ ಬಣದವರು!

29/08/2014
ಇಲ್ಲಿ ಎಲ್ಲಾ ನವಿಲುಗಳೇ 
ಗೊತ್ತೆನಗೇ;
ನಾನೂ ಕೆಂಬೂತವೇ 
ಆದರೂ ಸರಿಯೆ
ಪುಕ್ಕವ ತರಿದು 
ಕುಂಚವಾಗಿಸಿಹೆನು,,
ತುಸು ಗೀಚಿ 
ಮಗುವಾಗಿ ನಲಿದಾಡೋ 
ಹೊಸ ಹುಮ್ಮಸ್ಸಿನ ಬಯಕೆಯಲಿ,,,,


ಚಿತ್ರ ಕಲೆ; ದಿವ್ಯ ಆಂಜನಪ್ಪ

ದಿವ್ಯ ಆಂಜನಪ್ಪ
28/08/2014


"ಚಿತ್ರ"

ಚಿತ್ರ ಬಿಡಿಸಿದ್ದೆ
ನಿನ್ನ ದುಂಡಗೆ ಮಾಡಿ
ಅದೇನು ಓರೆಕೋರೆಗಳು
ನೆರಳು ಕಪ್ಪುಗಳು
ಕುದಿವ ಬಿಸಿಲು ಗೆರೆಗಳು.
ನನ್ನ ನಿಟ್ಟುಸಿರಿಗೆ
ಎಲ್ಲಿ ಬೆಂದುಬಿಡುವೆಯೋ
ಚಿತ್ರದೊಳು ನೀನೆಂದು
ನೀರಿಗೆಸೆದುಬಿಟ್ಟೆ,,
ಹಾಯಿ ದೋಣಿ ನೀ
ಹಾಯಾಗಿರಲೆಂದು,,

28/08/2014

________________

ನೀರಿನ
ಕೊಳಕ್ಕೆ
ಹೆಚ್ಚು ಹೆಚ್ಚು
ಕಲ್ಲುಗಳು
ಬಿದ್ದಂತೆ,
ಕೊನೆಗೊಂದು ದಿನ
ಕೊಳವು
ಕಲ್ಲೇ ಆಗುವುದು
ತನ್ನೆಲ್ಲಾ
ನೀರ ಬಸಿದುಕೊಂಡು,,!

27/08/2014

Thursday, 28 August 2014

ಕವನ

"ತಾವರೆ ಮತ್ತು ನೀರ ಹನಿ"


ಪ್ರೀತಿಯಲಿ ಅವ ತಾವರೆಯಾದ
ನನ್ನನ್ನೊಂದು ಮುತ್ತು ಮಾಡಿ
ನೋಡುವ ನೋಟಕೆ ಸಾಟಿಯೇ ಇಲ್ಲ
ನಮ್ಮಿಬ್ಬರ ಜೋಡಿ ನೋಡಿ,

ಎತ್ತ ವಾಲಿದರೂ ಸುಧಾರಿಸೊ ಅವನು,
ತುಳುಕುತ ಹೊಮ್ಮೊ ನೀರ ಹನಿ ನಾನು,
ಸೊಗಸೇ ಸೊಗಸು ಎನ್ನಲು ಜಗವು,
ಅಂಟಿಯೂ ಅಂಟದಂತೆ ನೀರ ಹನಿಯು
ಒಳಗೊಳಗೇ ಬಿಕ್ಕು ಅಳುವು,

ನೀರ ಹನಿಗೆಲ್ಲಿಯ ಕಣ್ಣೀರು,
ಮುಂದಾಗಿ ದುಂಡಗೆ ಮಿಂಚಿದೆ ಅಂದು,,
ನಾನೊಂದು ತಾವರೆಯ ಬಿಂದು,,
ಇಂದಿಗೂ ಹೊಳೆಯೊ ಹೂ ಮುತ್ತು
ಹೊನ್ನಂತ ಮನಸ ತಾವರೆಯ ಸೋಕಲು,,,, !

27/08/2014
ನೀರಿನ
ಕೊಳಕ್ಕೆ
ಹೆಚ್ಚು ಹೆಚ್ಚು
ಕಲ್ಲುಗಳು
ಬಿದ್ದಂತೆ,
ಕೊನೆಗೊಂದು ದಿನ
ಕೊಳವು
ಕಲ್ಲೇ ಆಗುವುದು
ತನ್ನೆಲ್ಲಾ
ನೀರ ಬಸಿದುಕೊಂಡು,,!

_____________________

ಎಲ್ಲರೂ ಕಸದಂತೆ ಗುಡಿಸಿ
ಮೂಲೆಗೆ ತಳ್ಳಲು
ಅಲ್ಲೇ ಬೇರು ಬಿಟ್ಟು ನಿಂತದ್ದು
ಕಸದಲ್ಲೊಂದು ಜೀವ ಕಳೆಯ
ಪಳೆಯುಳಿಕೆ ಕುರುಹು!!

27/08/2014
____________________

ಸಕ್ಕರೆಗೊಂಬೆಗೆ
ಇರುವೆಯ ಭಯವೇ?!
ಇದ್ದರಷ್ಟೇ ಕ್ಷಣಾರ್ಧದಲಿ
ಕರಗಿಸೋ
ಸುರಿವ ಮಳೆಯದು,,

______________________

ಲೇಖನಿಯ ತುದಿಗೆ ತಾಗಿದ ಜೀವ
ಬಹುಶಃ ಎಲ್ಲೋ ಎಂದೋ
ಮನಸ ನಾಟಿರಲೂಬಹುದು..

26/08/2014

ಕವನ

ಕೆಲ ಜೀವನಗಳು...

ಒಂದು ಕಡೆಯಿಂದ
ಜೀವನದ ಎಲ್ಲಾ ಲಯವೂ
ಏರುಪೇರಾಗಲು
ಉತ್ಸಾಹವು ಬತ್ತಿ
ಎಲ್ಲೋ ಕಳೆದು ಹೋಗುವ
ಚೈತನ್ಯ
ಮತ್ತೆ ಸಂಪಾದಿಸಲಾಗದೇನೋ,,
ಸಂಪಾದಿಸಿದರೂ
ಉರುಳೋ ಭರವಸೆಗಳು
ಎಂತಹ ಬಂಡೆಯನ್ನೂ
ಉರುಳಿಸಿಬಿಡುವುದೇನೋ,,,
ಮತ್ತೆ ಮತ್ತೆ ಕುಂದೊ ಚಂದ್ರ
ಎಂದಿಗೂ ಪೂರ್ಣನಾಗದ
ಭೀಕರ ಭಾವ
ಒಮ್ಮೊಮ್ಮೆ ಕೆಲ ಜೀವನಗಳು,,,

26/08/2014


ಗೌಪ್ಯತೆ ಕಳೆದುಕೊಂಡ ಮೇಲೆ
ವಜ್ರಕೂ ಗಾಜು ಚೂರಿನ ಬೆಲೆ!!
 
_______________________

ಭಾಷೆಯು 
ಅರ್ಥವಾದರೂ 
ಇಲ್ಲದಿದ್ದರೂ
ಸರಿಯೇ,
ಭಾವ 
ಅಪಾರ್ಥವಾಗಬಾರದಿತ್ತು,,
ತೋಚಿದಂತೆ 

ಓದಿಕೊಂಡು!!

________________________

''ಹೆಜ್ಜೆ,,,,''

ಪಂದ್ಯ ಸೋತ ಮೇಲೂ 
ಒಂದಷ್ಟು ದಾರಿ 
ಮುಂದಡಿ ಇಡಲೇಬೇಕು 
ನಿಧಾನಗತಿಯ ಅನುದ್ವಿಗ್ನ ಹೆಜ್ಜೆಗಳಾದರೂ,,
________________________

ನನಗೊದಗಿದ ವಿರಹವೋ
ನಾನೇ ಅಪ್ಪಿಕೊಂಡ ವಿರಹವೋ
ಪ್ರಶ್ನಿಸಲು ನೀವ್ಯಾರು
ಕುಹುಕವಾಡದಿರಿ ಅರಿಯದೆ ಭೇದವ
ಯಾರ ಇದಿರೂ ನಾ ನಿಂತಿಲ್ಲ,
ಕಂಡಲ್ಲೆಲ್ಲ ಸಲುಗೆಗಿಳಿವ ಗೀಳು ನನಗಿಲ್ಲ,,
ಹೌದು ನಾ ಕಠೋರವೇ,
ಅಂದಿಗೂ ಇಂದಿಗೂ
ಮುಂದಿನ ದಿನಗಳಿಗೂ,,,
ಕಠೋರತೆಯೇ ಅಸ್ತ್ರ ಎನಗೆ,,

ನಿಮ್ಮೆದುರು,,

________________

ಪ್ರತೀ ಕ್ಷಣವನೂ 
ಸಂಭ್ರಮಿಸಬೇಕು
ಎನ್ನುವ ನಾನು,
ನಿನ್ನ ವಿರಹಕೂ ಹೊರತಲ್ಲ!
ತಡವಾದರೂ ಚಿಂತಿಸಬೇಡ
ನೀ ಎಂದಿಗಾದರೂ 
ಬಂದಬಿಟ್ಟರೂ
ನಾ ನಗುತ್ತಲೇ ಸ್ವಾಗತಿಸುವೆ 
ಓ,, ಪ್ರೀತಿಯೇ...!!!

25/08/2014

_______________________

ನಿಜ ಪ್ರೀತಿ ಅರಿವಿಗೆ ಬರುವುದು
ನಿಶ್ಶಕ್ತಿಯಿಂದ ನಿಲ್ಲಲಾಗದೆ
ಆಸರೆಯೊಂದು ಕೈ ತಡವಿದಾಗ,
ತಾಜಾ ಸ್ನೊ ಪೌಡರ್ನಲ್ಲಿದ್ದಾಗ
ತಂಗಾಳಿಯ ಕನಸು ತೂರೋ
ಹಾಯ್ ಹಲೋ ಲವ್ ಯೂಗಳಿಂದಲ್ಲ,,

24/08/2014

________________

ಸುಮ್ಮನೆ ಸುಳ್ಳು
ಏಕೆ ಹೇಳಲಿ?!,
ನಾ ನಿನಗೆ ಕಾಯುತ್ತಿಲ್ಲ,
ಬದಲಿಗೆ
ನೀ ಸಿಗುತ್ತಿಲ್ಲವಷ್ಟೇ!

24/08/2014

___________________

ಇನ್ನಷ್ಟು ವರುಷಗಳು
ನೀ ನನ್ನ ನೋಡಬೇಕಿತ್ತು,
ಸ್ನೇಹದಲಿ ಮೋಹದಲಿ ಹೇಗಿರುವಳೊ,
ಅಕ್ಕಳಾಗಿ ತಂಗಿಯಾಗಿ,
ಅಮ್ಮಳಾಗಿ ಅಜ್ಜಿಯಾಗಿ,,
ಕೊನೆಗೊಮ್ಮೆ ನಿರ್ಧರಿಸಿಬಿಡು
ಜೊತೆಯಾಗೊ ಹದವಿದೆಯೇ ಎಂದು!
ಬೇಸರವೇನಿಲ್ಲ ನಿನ್ನ ಕುತೂಹಲವ ಸ್ವಾಗತಿಸುವೆ,
ತಡವೇನಲ್ಲಬಿಡು ಮುಂದಿನ ಜನ್ಮಕೆ,,

24/08/2014

____________

ಮಣ್ಣ ಕಣ್ಣಿಗಷ್ಟೇ
ಅಳಿವು
ಕಣ್ಣ ಬೆಳಕಿಗಲ್ಲ!,,

22/08/2014

ಕವನ

ಚೆಂದ,,


ಅವಳು ಚೆಂದವಿದ್ದಳು
ನನ್ನೊಳಗೆ ಪ್ರೀತಿ ಮೊರೆತ
ಈಗವಳ ಚೆಂದ ಏಕೋ
ಚೆಂದವೇ ಅನಿಸುತ್ತಿಲ್ಲ
ನನಗೆ ಪ್ರೀತಿಯು ಕೊರೆತ,,

ಮನಸ ಕಾಣಲಾರದ
ಈ ಕಣ್ಗಳು
ಆ ಸುಂದರಿ ಎಂಬ
ಹೂವ ಹೊಸಕಿ ಹಾಕಿದ್ದೆ
ಮೋಹದ ಕುರುಡಲಿ,,

ಈಗವಳು ನಗುವಳು ನನ್ನೊಳಗೆ
ಆ ಅದೇ ದಣಿದ ಎಣ್ಣೆ ಮುಖದಲಿ
ಸಂಜೆಗೆಂಪ ಸೂರ್ಯನಂತೆ
ಬಾಳ ಈ ಇಳಿ ಸಂಜೆಯಲಿ
ಹೀಗೆ ನೆನಪಾಗಿ
ಒಲವಾಗಿಳಿವಳು ಪುಳಕದಲಿ,,,

(ವೃದ್ಧನಾಗೊಮ್ಮೆ.... :-) )

21/08/2014




ನಮ್ಮನ್ನು ಕಂಡರಾಗದ ಅವರೇ
ನಮ್ಮ ಕಾಳಜಿವಹಿಸುವರು
ಬಹಳೆ,
ಒಳ್ಳೆತನವೆಂದೇ ಭಾವಿಸಿ
ಬರಸೆಳೆದರೂ
ಅವರ ಅತೀ ಪ್ರೀತಿ
ತಲೆ ಕೆಡಿಸದೇ ಇರದು,
ನನಗೆ ದ್ಷೇಷವಿಲ್ಲ,
ಆದರೆ ನಮ್ಮ ದ್ವೇಷಿಸೋ ಅವರು
ನಮ್ಮನ್ನು ಬಿಟ್ಟು ಬದುಕಲಾರರು,,
ಪ್ರೀತಿಯಲಿ ಸಿಲುಕಿಸಿ ಹಿಂಸಿಸುವರು
ಹೀಗೂ ಆಗುವುದು
ಪ್ರೀತಿಯ ಮರೆಯ ಅಸೂಯೆ,,,!!

21/08/2014

________________________

ಕೆಂಬೂತಗಳ ಹಾವಳಿ ಹೆಚ್ಚಾಗಿ
ನವಿಲಿಗೆ ಮತ್ತೂ ಭಾರವಂತೆ ಗರಿಗಳು
ನವಿಲಿಗೆ ಅನಿವಾರ್ಯವಾದ ತಟಸ್ಥ್ಯ!

17/08/2014

_____________________

ಕೈಗೆ ಸಿಗದ ಕಾಮನಬಿಲ್ಲಿಗೆ
ಆಸೆಪಟ್ಟು ಕೊರಗುವ ಬದಲು
ಕೈಗೆಟುಕೊ ಬಣ್ಣದ ಗಾಳಿಪಟ ಹಿಡಿದು
ಆಗಸಕೆ ಹಾರಿಸಿ ನೋಡುವ ಚಂದ
ಒಪ್ಪಬಹುದೇನೋ; ಸೂತ್ರವೂ ಕೈಲಿರಲು
ಮಾಯವಾಗೋ ಗೊಂದಲವಿಲ್ಲ,,
ಆದರೂ ಸೂತ್ರ ಗಟ್ಟಿ ಇರಬೇಕಷ್ಟೆ
ತುಂಡಾಗಿಸೋ ಹುನ್ನಾರಗಳೆದುರು...

15/08/2014

____________________

ನಾವು ಹುಚ್ಚರಾಗುತ್ತಿದ್ದೇವೆ
ಎನಿಸುವಾಗ, ಸುತ್ತಲ ಜಗತ್ತು
ಸಿಕ್ಕಾಪಟ್ಟೆ ಸುಸ್ಥಿತಿಯಾಗಿ ಕಾಣುವುದು!

13/08/2014

Thursday, 14 August 2014

ಕವನ

ಕಲೆ,,,, :-)


ಯಾರೂ ಇಲ್ಲವೆನ್ನುವ ಈ ಹೊತ್ತು
ಹೊರೆಗೆ ಧೋ ಎಂದು ಸುರಿವ ಮಳೆ
ಎನ್ನ ಎನ್ನೊಂದಿಗೇ ಬೆಸೆಯೋ ಹುನ್ನಾರ

ಮರೆತು ಸೋಲು, ಕಲಿತು ಗೆಲವು
ಮನದಂಗಳವ ಗುಡಿಸಿ ತಣಿಸಿ
ಹದವಾದ ಹಬೆ,,!

ನೀನಿದ್ದರೂ ಇಲ್ಲದಿದ್ದರೂ
ಸದಾ ರಂಗೋಲೆಯ ಕಲೆ,
ಈ ಚಂಚಲೆ,,!!

14/08/2014
ರಾಧೆ ಚಿರವಿರಹಿಯಾದಳು
ಕೃಷ್ಣನ ಗೆಲುವ ಮೆರೆಸಲು!

___________________________________


ಸತ್ಯಗಳು ಅವರವರ ಮೂಗಿನ ನೇರಕ್ಕೇ ಇರುವುದಲ್ಲಾ
ಆ ಸತ್ಯವು ಈ ಮೂಗಿಗೂ,
ಈ ಸತ್ಯವು ಆ ಮೂಗಿಗೂ ಪರಸ್ಪರ ವಿರುದ್ಧವೇ,,
ಆದರೂ ಅವುಗಳೂ ಸತ್ಯಗಳೇ,,
ಇದು ಹಾಸ್ಯವೋ ವಿಡಂಬನೆಯೋ ಅಲ್ಲ
ಇದೂ ಒಂದು ಸತ್ಯ,,
ನನ್ನ ಈ ಮೂಗಿನ ನೇರದ್ದು,,,

12/08/2014

Monday, 11 August 2014

ಕವನ

ಜ್ವಾಲೆ,,!


ನೀ ಎನ್ನ ಹಿಡಿದಿದ್ದರೆ ಅಂಗೈಯ್ಯಲಿ
ದೀಪವಾಗುತ್ತಿದ್ದೆನೋ ಭರವಸೆಗೆ

ಜ್ವಾಲೆ ಚದುರಿ ಮಿಂಚು ಹುಳುವಾದೆ
ಹಾದಿ ಬದಿಯ ಗಿಡಗೆಂಟೆಗಳಲಿ

ಎಲ್ಲರಿಗೂ ಮನರಂಜನೆಯೇ ನಾನೀಗ
ಸಾರ್ಥಕ ನೆಲೆ ಕಾಣದ ನಿಟ್ಟುಸಿರು,

ನಿಂದೆಸೆನು ನಾ ನಿನ್ನನು
ನೊಂದಿಪೆನು ನಾ; ಜ್ವಾಲೆಯು
ಚದುರಿದ ಕಾರಣಕೆ,, !

11/08/2014

ಮನದ ಮಾತು

ಯಾರೊಬ್ಬರ ಮನಸ್ಸು ಅಷ್ಟು ಸುಲಭವಲ್ಲ ಅರ್ಥ ಮಾಡಿಕೊಳ್ಳಲು. ಮುಖವನ್ನು ನೋಡಿ ಮಣೆ ಹಾಕಬಾರದು (ನನ್ನನ್ನೂ ಸೇರಿಸಿಯೇ :-)  ), ಆದರೆ ಅಷ್ಟೆ ಸುಲಭಕ್ಕೆ ಅವರನ್ನು ಹೀಗೆಯೇ ಎಂದೂ ಸಹ ನಿರ್ಧರಿಸಲೂ ಆಗದು.

ನಿರ್ಭಾವುಕತೆಗೆ ನಿರಪೇಕ್ಷೆಯೇ ಸರಿಯಾದ ಉತ್ತರವೇ ಹೊರತು ತಿರಸ್ಕಾರವಲ್ಲ,,!

ಪ್ರತೀ ತಪ್ಪಿಗೂ ಅದರ ನೆರಳಂತೆ ಕಲಿಕೆಯಿದೆ, ಹಾಗೆಯೇ ಪ್ರತೀ ಜಡ್ಡುತನಕ್ಕೂ ಅದರದೇ ಆದ ನೋವುಗಳಿವೆ. ನೋವನ್ನರಿತು ನಡೆಯಲು ನಾವ್ಯಾರೂ ಬ್ರಹ್ಮರಲ್ಲ; ಮಾನವರು. ಆ ಕಾರಣಕ್ಕಾದರೂ ಮಾನವೀಯತೆಯಿರಲಿ. ತಿಳಿಯದೇ ನುಡಿವ, ತಿಳಿದು ಕೊಂಕಾಡುವ ಮನೋಸ್ಥಿತಿಯನ್ನು ಇನ್ನಾದರೂ ತೂರಿಬಿಡೋಣ. ಪ್ರತೀ ಜೀವಕೂ ಅದರದೇ ಆದ ತಪ್ಪು -ಜಡ್ಡುತನಗಳಿವೆ. ನಂತರ ಕಲಿಕೆಯ ಆಸರೆ ಮತ್ತು ಅದರ ನೋವಿಗೆ ಸ್ಪಂದಿಸೋ ಅದರದೇ ನೋವುಗಳಿವೆ, ಮತ್ತೂ ತಾನೇ ಕಂಡುಕೊಳ್ಳೋ ಸಾಂತ್ವನಗಳೂ. :-)

ಬೆರೆತು ಬಾಳೋ ಉದ್ದೇಶವೇ ಆಗಿದ್ದರೆ ನಮ್ಮಲ್ಲಿ ಸಹಿಸೋ ಗುಣ ಇನ್ನಷ್ಟು ಹೆಚ್ಚಲಿ. ಪ್ರೀತಿಸೋ ಹೃದಯಕೆ ಇನ್ನಷ್ಟು ಪ್ರೀತಿಯೇ ಸಿಗಲಿ.

ಶುಭದಿನ ಫ್ರೆಂಡ್ಸ್,,,, :-)

10/08/2014

ಕವನ

ಗುದ್ದಾಟ,,,,,, 


ಅದ್ಭುತಗಳೆಲ್ಲಾ
ನಿನ್ನ ವಿರಹದಲೇ
ಅಡಗಿದೆಯಲ್ಲ
ಓ ಚೋರ!

ನೀನಿದ್ದ ಹೊತ್ತು
ಆಡುವ ಮಾತೆಲ್ಲಾ
ಒಂದೇ ಸಮನೆ
ಮಳೆ ಬಂದಂತೆ

ಗೊತ್ತಿದ್ದು ಸುಮ್ಮನೆ ಹರಟೆ
ಜೊತೆ ಕಳೆವ ಕಾಲವಷ್ಟೆ ಮುಖ್ಯ!
ಏನೇನೋ ನಿನ್ನ ಲೆಕ್ಕಚಾರ,
ಗಾಬರಿಯಾದರೂ ಖುಷಿಯಿತ್ತು
ನಿನ್ನ ಹೊಸದೀ ರೀತಿಗೆ,

ನೀ ನೆನಪಾಗದ ಹೊತ್ತಿಲ್ಲ
ನನ್ನೊಂದಿಗೆ ನಾನಿರಲು,
ಬೇಸರವಿಲ್ಲ ನೀನಿಲ್ಲವೆಂದು

ಈ ಅಲ್ಪ
ವಿರಾಮದಲಿ
ಅರಿತೆ ನಾ
ಒಂದಷ್ಟು ನಿನ್ನನು!

ಇದು ಕವಿತೆ
ಅಲ್ಲವೇ ಅಲ್ಲ ಗೆಳೆಯ
ಗಾಳಿಯೊಡನೆ
ನನ್ನದೂ ಒಂದು ಗುದ್ದಾಟ!

09/08/2014

ಎಲ್ಲರ ಗಮನವೆಲ್ಲಾ ಬೇಕಿರಲಿಲ್ಲ ನನಗೆ
ಬೇಕಿದ್ದ ನೀನು ನಿನ್ನ ಲಕ್ಷ್ಯ
ಕತ್ತಲ ಮರೆಗೆ
ಬೆಳಕಿಲ್ಲದ ಮಾತ್ರಕೆ ನೀನೂ ಇಲ್ಲ
ಎನ್ನಲಾರೆ ದೊರೆಯೆ
ಕಣ್ಣು ಮುಚ್ಚಿ ಕನಸು ಕಂಡವಳು ನಾನು!
_______________________

ತನ್ನ ತೋರುವ ಕನ್ನಡಿ
ತುಸು ಓರೆ ಎನಿಸಿ
ಬೇಸರ ಮೂಡಿದರೆ
ಚಿಂತೆಯಿಲ್ಲ,
ಎಷ್ಟೋ ಸಿರಿ ಕನ್ನಡಿಗಳಿವೆ
ತಿರುಗಿಸಿ ನೋಡಿದರಾಯ್ತು
ಚೆಂದದ ಬಿಂಬಗಳು,
ನೋಟದೊಂದಿಗೆ ನಮ್ಮ ಒಳಬಿಂಬವಾದರೂ
ಹೆಮ್ಮೆಯ ಆರಾಧಕನಾಗಬಹುದು!
ಸೌಂದರ್ಯಗಳೂ ನಮ್ಮೊಳಗನ್ನೇ ಮೆಚ್ಚುವಂತೆ!!

08/08/2014
__________________

ಕೆಲವು ಮನಗಳು
ತಮ್ಮ ಇರುವಿಕೆಯ
ಅರಿವು ನೀಡಲು
ಸೆಣಸಾಡುವವು
ಅತ್ತು, ನಕ್ಕು, ಕಾಳಜಿ ತೋರಿ
ಕೊನೆಗೆ ಎದುರು ಬಿದ್ದು
ಬೇಕಾದುದು ತಮ್ಮೆಡೆಗಿನ
ಅವರ ಲಕ್ಷ್ಯವೇ ಹೊರತು
ಕನಿಕರವೂ ಅಲ್ಲ, ಪ್ರತಿಷ್ಠೆಯೂ ಅಲ್ಲ
ಜಗಳವೂ ಅಲ್ಲ, ಆದರೂ
ಸುಮ್ಮನಿರರು ಇವರು ಮೌನಿಗಳು
ಸುಮ್ಮನೆ ಗಲಭೆ ಎಬ್ಬಿಸುವರು ಮನಗಳಲಿ,,,

07/08/2014

Sunday, 10 August 2014

ನನ್ನ ತಮ್ಮ; ರಾಖಿ ಹಬ್ಬ!

ಈ ದಿನ ಫೇಸ್ ಬುಕ್ನಲ್ಲಿ ಎಲ್ಲರೂ ತಮ್ ತಮ್ಮ ಅಣ್ಣತಮ್ಮಂದಿರ ಫೋಟೋಗಳನ್ನು ಹಾಕ್ತಾ ಇದ್ದಾರೆ, ನನಗೆ ಈಗ ಸುಮ್ನಿರೋಕ್ ಆಗ್ತಾ ಇಲ್ಲ,, 

ನನಗಿರುವ ಏಕೈಕ ತಮ್ಮನ ಫೋಟೋ (ಫೇಸ್ ಬುಕ್ಕಿನ ತಮ್ಮಂದಿರನ್ನು ಹೊರತುಪಡಿಸಿ  ) ಇಂದು ಹಾಕೋ ಮನಸ್ಸಾಗಿದೆ... 

ಇಷ್ಟು ದಿನಗಳು ನಾನು ಏನೊ ಒಂದಷ್ಟು ಬರೆದೋ, ಇಲ್ಲವೋ ಬೆರೆತೋ ನಿಮ್ಮನೆಲ್ಲಾ ಗಳಿಸಿದ್ದೇನೆ. ಇಷ್ಟು ದಾರಿಯನ್ನು ಸಾಗಿ ಬರಲು ಮೊದಲ ಹೆಜ್ಜೆ ಎಂದಿರುತ್ತದೆ ಅಲ್ಲವೇ? ಹಾಗೆಯೇ ಮೊದಲ ಹೆಜ್ಜೆಯಿಡಲು ಈ ನನ್ನ ತಮ್ಮನು ನನಗೆ ಸಹಕಾರಿಯಾಗಿದ್ದನು. ನಾನು, ಕಂಪ್ಯೂಟರ್ ಗಂಧ-ಗಾಳಿ ಗೊತ್ತಿಲ್ಲದವಳು. ಸುಮ್ಮನೆ ಕೇಳಿದೆ ಎಂದು ಫೇಸ್ ಬುಕ್ ಅಕೌಂಟನ್ನು ತೆರೆದು ಕೊಟ್ಟು, ಹೇಗೆ ನಿರ್ವಹಿಸಬೇಕು ಎಂದು ಹೇಳಿಕೊಟ್ಟವನು ಇವನೇ, ಈಗ ಫೇಸ್ ಬುಕ್ ವಿಚಾರದಲ್ಲಿ ಅವನನ್ನೇ ಮೀರಿಸುತ್ತೇನೆ, ಅದು ಬೇರೆ ವಿಚಾರ ಬಿಡಿ 

ಇಲ್ಲಿ ನೋಡುತ್ತಾ ನೋಡುತ್ತಾ ನಾನೂ ಬರೆಯಲು, ಸ್ವಂತದೊಂದು ಲಾಪ್ ಟಾಪ್ ತೆಗೆದುಕೊಳ್ಳೋ ಆಸೆಯಾಯಿತು. ಅದಕ್ಕೂ ಮಾರ್ಗದರ್ಶಕನು ಇವನೇ,, ತಂದ ಲಾಪ್ಟಾಪ್ನಿಂದ ಏನೂ ಕೆಲಸ ಮಾಡಲಾಗದೆ ಸುಮ್ಮನಿದ್ದೆ. ಕನ್ನಡವಷ್ಟೇ ನನಗೆ ಬೇಕಾದ್ದು,, ನನಗಾಗ ನುಡಿ, ಪದ ಇದ್ಯಾವುದರ ಪರಿಚಯವಿರಲಿಲ್ಲ, (ನುಡಿ ಈಗಲೂ ಕಲಿತಿಲ್ಲ). ಕನ್ನಡ ಟೈಪಿಂಗ್ ತಿಳಿಯದ ನಾನು ಸರಳವಾಗಿ ಕನ್ನಡವನ್ನು ಟೈಪ್ ಮಾಡಲು ಸಹಾಯವಾಗುವಂತೆ ಪೇಪರ್ನಲ್ಲಿ ಬಂದ ಮಾಹಿತಿ ಸಂಗ್ರಹಿಸಿ "ಪದ''ವನ್ನು ನನ್ನ ಲಾಪ್ಟಾಪಿಗೆ ಇನ್ಸ್ಟಾಲ್ ಮಾಡಿಕೊಟ್ಟ,, ನಾನು ಬರೆಯುವಂತೆ ಅನುಕೂಲವನ್ನು ಮಾಡಿಕೊಟ್ಟನು. ಅದೂ ನಾನೇನೂ ಕೇಳದೆ,,,  ನಾನೇನೂ ಹೇಳದೆ ನನ್ನ ಮನಸ್ಸನ್ನು ಹೀಗೆ ಅರ್ಥಮಾಡಿಕೊಂಡು ಬೇಕಿದ್ದನ್ನು ಮುಂದಿರಿಸಿದ್ದ ನನ್ನ ತಮ್ಮ,,!  ತುಂಬಾ ಖುಷಿಯಾಗಿತ್ತು ಅಂದು,,,, ಇಂದಿಗೂ,,,,,  

ಚಿಕ್ಕವನಿದ್ದಾಗಷ್ಟೇ ಇವನಿಗೆ ರಾಖಿಯನ್ನು ತಂದು ಕಟ್ಟುತ್ತಿದ್ದೆ. ಇವನು ಹುಟ್ಟೋ ಮೊದಲು ನನ್ನ ದೊಡ್ಡ ಅಕ್ಕಂದಿರಿಗೇ ಕಟ್ಟಿ ದುಡ್ಡು ವಸೂಲಿ ಮಾಡುತ್ತಿದ್ದೆ..  
ಪ್ರತೀ ವರ್ಷ ರಾಖಿ ಹಬ್ಬದಂದು ಇವನಿಗೆ ಮತ್ತೂ ಇವನಿಗಿಂತ ಚಿಕ್ಕವಳು ನನ್ನ ತಂಗಿಗೂ ರಾಖಿ ಕಟ್ಟಿ ಖುಷಿಪಡುತ್ತಿದ್ದೆ. ಹಾಗೆಯೇ ನನ್ನ ಬಾಲ್ಯ ಸ್ನೇಹಿತನೊಬ್ಬ 'ಸಾಧಿಕ್'ನಿಗೂ ಕಟ್ಟುವುದು ನನ್ನ ಬಾಲ್ಯದ ಸಂತಸಗಳು.. 

ಈ ಭಾವಚಿತ್ರವು ಎರಡು ಮೂರು ವರ್ಷದ ಹಿಂದಿನದ್ದು,, ಚೂರ್ ಮುದ್ಮುದ್ದಾಗಿದ್ದಾನೆ,, ಈಗಿನದ್ದು ಹಾಕಲು ದೃಷ್ಟಿಗಳ ಭಯ! 
''ಕೃಷ್ಣ''ನೆಂದು ಚಿಕ್ಕದಾಗಿ ಕರೆಯುತ್ತೇವೆ. ಪೂರ್ಣ ಹೆಸರು ತುಸು ಉದ್ದವೇ ನನ್ನ ತಮ್ಮನದು,, !! 

ದೊಡ್ಡವರಾದಂತೆ ವಿಚಾರಗಳೂ ತಿರುವುಗಳು ಯೋಚನಾಲಹರಿಗಳೂ ಹೊಸತನವನ್ನು ತಂದುಕೊಳ್ಳುತ್ತಾ ಹೋಯಿತು.. ಈಗ ಈ ಆಚರಣೆಗಳನ್ನು ಆಶಯಗಳಾಗಿ ಬದಲಿಸಿದ್ದೇನೆ. 
ಇಂದು ನನ್ನ ತಂಗಿ ಅಣ್ಣನಿಗೆ ರಾಖಿ ಕಟ್ಟಿದ್ದಾಳೆ, ಎಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುವೆ ಎಂದು ಹೇಳುತ್ತಿರುವ ತಮ್ಮನಿಗೆ ಈ ವರ್ಷ ಅವನ ಆಕಾಂಕ್ಷೆಯ ಕೆಲಸವೇ ಸಿಗಲೆಂದು ಹರಸಿದೆನು... :-)

10/08/2014

Thursday, 7 August 2014

ಕವನ

ಚಿತ್ರ,,,,,


ನಾ ದೂರಬಲ್ಲೆ ನಿನ್ನನು
ದ್ವೇಷಿಸಲಾರೆನೊ
ವಾದಿಸಲಾರೆ ನಿನ್ನೊಂದಿಗೆ
ಕೇಳಬಲ್ಲೆ ನಿನ್ನದಷ್ಟೆ,

ಕಾಡಬಲ್ಲೆ ಹಟ ಮಾಡಿ
ನಿನಗಿಂತ ಹೆಚ್ಚು
ನನ್ನನ್ನೇ ಕಾಡಿಕೊಂಡು

ನನಗೆ ಮಾತು ಹೆಚ್ಚು,
ಆತುರವೂ,,
ನಿನಗೆ ಮೌನ ಪ್ರಿಯ
ಪ್ರತಿಯಾಗಿ ನನ್ನ ಕಾಡಲು

ಹೀಗೆಲ್ಲೊ ಹೊರಟ ನಿನ್ನನು
ಇನ್ನೂ ಕಂಡಿರುವೆ ಜೊತೆಯಲಿ
ಕಳೆದ ಮಾತುಗಳಲಿ
ಕಾಳಜಿಯ ಕುರುಹುಗಳಲಿ
ಛೇಡಿಸಿ ನಕ್ಕ ಕ್ಷಣಗಳಲಿ,,
ನಿನ್ನ ಚಿತ್ರದೊಳ
ನನ್ನ ಚಿತ್ರದಲಿ!

07/08/2014

ಕೆಲವು ಮನಗಳು
ತಮ್ಮ ಇರುವಿಕೆಯ
ಅರಿವು ನೀಡಲು
ಸೆಣಸಾಡುವುದು
ಅತ್ತು, ನಕ್ಕು, ಕಾಳಜಿ ತೋರಿ
ಕೊನೆಗೆ ಎದುರು ಬಿದ್ದು
ಬೇಕಾದುದು ತಮ್ಮೆಡೆಗಿನ
ಅವರ ಲಕ್ಷ್ಯವೇ ಹೊರತು
ಕನಿಕರವೂ ಅಲ್ಲ, ಪ್ರತಿಷ್ಠೆಯೂ ಅಲ್ಲ
ಜಗಳವೂ ಅಲ್ಲ, ಆದರೂ
ಸುಮ್ಮನಿರರು ಇವರು ಮೌನಿಗಳು
ಸುಮ್ಮನೆ ಗಲಬೆ ಎಬ್ಬಿಸುವರು ಮನಗಳಲಿ,,,

______________

ಅವನಿಲ್ಲದ ಈ ಹೊತ್ತು
ಬರೀ ಕತ್ತಲೆ,
ಸುಮ್ಮನೆ ಚಂದ್ರ ಲಾಂದ್ರಗಳ
ಬಿಂಬಿಸಿದೆ
ಕೆಣಕಿದರೆ ಹುಟ್ಟಿ ಬರುವನೇ
ಎಂಬ ಭ್ರಾಂತಿಗೆ!

07/08/2014

Wednesday, 6 August 2014

ಕವನ

ನನ್ನೊಳ ಬೆಳಕು



ನೀ ಮೆಚ್ಚುವಂತೆ ನಡೆಯೋ
ತಂತ್ರ ನಾ ಕಾಣೆ,
ಹಚ್ಚಿಕೊಂಡಿದ್ದರೆ ನಿನ್ನ ಹೃದಯ
ಎಂದೋ ಹೇಗೋ ಮೆಚ್ಚಿರಲೂಬಹುದು
ನಾನದ ನೆಚ್ಚಿಕೊಂಡಿಲ್ಲವೋ ತಂದೆ,
ಮನ್ನಿಸೆನ್ನ ಮೀರಿದ ಮಾತುಗಳ
ಕನಿಕರಿಸು ಙ್ಞಾನದ ಕಂದೀಲನು
ಇನ್ನೆಷ್ಟು ದಿನವೋ ಈ ಅಂಧಕಾರ
ನಾನಲ್ಲವೋ ಇದು, ನೀನೇ ನನ್ನೊಳ ಬೆಳಕು
ಕುಂದರಿರು ದೂರದಿರು,
ಅನುದಿನವೂ ನಿನ್ನನೇ ದ್ಯಾನಿಪೆತು
ನಂಬು ನೀನೊಮ್ಮೆ ನನ್ನ ಹರನೇ,,,!

06/08/2014
ನನ್ನ ಸಾಲುಗಳು,,,



ಹಿಂದಿರುಗಲಾರದ ಅಹಂ ಬೆಳದ
ಈ ದಿನಗಳಲ್ಲಿ,
ಹೆಜ್ಜೆ ಗುರುತ ಅಗೆದು ತೋರಿಸೊ
ಒಂದು ಹಂತ,

ನಾನೇನಾ ಆ ಸಾಲುಗಳು 
ಎನಿಸುವಷ್ಟು ಮರೆವು,
ಹೀಗೆಲ್ಲಾ ಕನಸೇ? ಕನವರಿಕೆಯೇ?!

ಹೀಗೂ ಒಬ್ಬ ಚಂದಿರ ಮಾಧವನಾಗಿದ್ದ,
ರಾಧೆಗೂ ರಮಿಸೋ ಸ್ನೇಹವಾಗಿದ್ದ,
ಎಲ್ಲಿಯೋ ರಾಮ, ಮತ್ತೆಲ್ಲೋ ಮರೆಯ ರಾವಣ,

ಕಣ್ಣೀರ ಕಾರಣವಾಗಿದ್ದೂ, 
ನೋವ ಮರೆವ ಸಾಧನಕೂ ಮಾರ್ಗವಾದ
ನನ್ನವೇ ಸಾಲುಗಳು ನನ್ನಲೇ ಹಲವು ಪ್ರಶ್ನೆಗಳು,
ನಾನು ಬದಲಾದರೂ ಬದಲಾಗದ ಆ ಸಾಲುಗಳು,
ನೋವಿನೊಂದಿಗೆ ನನಗಿಲ್ಲದ ನಿಷ್ಠೆ,
ಸಾಲುಗಳಿಗೆ ಸೋಲಿಲ್ಲದ ಪ್ರತಿಷ್ಠೆ!

ನಾ ಸೋತೆನಾದರೂ, ಸಾಲುಗಳವು
ಎಂದಿಗೂ ಗೆದ್ದಿವೆ, ಗೆಲ್ಲಿಸುತ್ತಲಿವೆ,
ರಾಧೆಗೋ ರಾವಣನಿಗೋ
ಸೋಲು-ಗೆಲವುಗಳ ಹಂಚುತ!

06/08/2014


ಕಾಲಕ್ಕೆ ಸೆಡ್ಡು ಹೊಡೆದಂತೆ
ಬರದೆ ಹೋದೆ ನೀನು,
ಬಹುಶಃ ನೀ ಬಂದ ಕಾಲಕ್ಕೆ
ನಿಲ್ದಾಣವಿಲ್ಲ ಇಲ್ಲಿ,
ಎಲ್ಲವೂ ಗೋರಿಗಳೇ,,
ನಿಲ್ಲುವುದಾದರೂ ನಿಲ್ಲು
ಗೋರಿಯಿಂದೇಳದಿಲ್ಲಿ
ಯಾವ ಭಾವವೂ
ಸಮಯವ ಗೆದ್ದು,,,

_______________________

ನಂಬಿಕೆ ಗಳಿಸಿದವರು
ಗಾಳಿಯಲ್ಲಿ ತೇಲಿಹೋದರು
ನಂಬಿ ಎನ್ನಿದಿರೇ ನೋಡುವವರು
ಎನ್ನ ಗಾಳಿಯೆಂದು ಜರಿದರು,
ಉಸಿರಿಟ್ಟ ಗಾಳಿ, ಜೀವ ತೆಗೆಯುದೇ?!
ಗಾಳಿಯೇ ನಾ ನಿನ್ನೇ ನಂಬಿಹೆನು
ಹೊತ್ತು ತಂದುಬಿಡು
ನೀ ಇಲ್ಲಿಂದ ಹೋತ್ತು ಹೋದವರ,,!
ಕಣ್ಣಿಗಷ್ಟು ನಿದ್ದೆ, ಮನಕಷ್ಟು ಶಾಂತಿ
ಎದುರಿಗಿದ್ದವರನಷ್ಟು
ನಗಿಸಿಬಿಡೋ ಹುಮ್ಮಸ್ಸು,,!

05/08/2014


ಬೆಟ್ಟದಂತೆ ನಿಂತಾಗ
ಎಲ್ಲರೂ ಬೆನ್ನಹಿಂದೆ
ಬಿಳಲಾಗಿ ಇಳಿದಾಗ
ಎಲ್ಲರ ಅಡಿಗಳ ಕೆಳಗೆ

06/08/2014

__________________

ನೀ ಬಿಟ್ಟು ಹೋದ
ಹೆಜ್ಜೆಗಳಿಗೇ ಈ ಹೊಳಪು!,
ನೀ ಜೊತೆಗಿದ್ದು ಕೈಹಿಡಿದು
ನಡೆದಿದ್ದರೆ,, ಆಹಾ!
ಅದೇನು ತಳಕು, ಬಳಕು, ಒನಪು
ಇದ್ದಿರಬಹುದೋ ಗೆಳೆಯ,
ಬೇಡವೆಂದೇ ನಡೆದೆಯೇನೋ
ನಿನ್ನದೇ ದೃಷ್ಟಿ ತಾಗಿ
ಈ ಸೋಲದ ಪ್ರೀತಿಗೆ,,!

_____________________

ತಿರುಗಿ ಬಿದ್ರೆ ನಾ ಭಯಂಕರ
ಎಂದು ಹೇಳುವರು ಬಹಳ
ತಿರುಗಿ ಬಿದ್ರೆ ಭಯಂಕರ
ಎಂದೆನಿಸುವವರು ವಿರಳ!

______________________

ಹುಡುಕಾಟದಲ್ಲೂ ಸೊಗಸಿದೆ
ಎಂದೋ ಸುಮ್ಮನೆ ಅಂದೆ
ಈಗ ಜೂಟಾಟ ಬಿಟ್ಟು ಕಣ್ಣಾಮುಚ್ಚಾಲೆ
ಆಟವಾಗಿದೆ ಪ್ರೀತಿ ನಿನ್ನದು,,,

04/08/2014

ಕವನ

ಸ್ನೇಹ,,,,


ತರಾವರಿ ಹಕ್ಕಿಗಳು
ನಾವು
ಹಾರುವುದಷ್ಟೇ
ನಮ್ಮ ಗುರಿ

ಗೂಡು ಕಟ್ಟಿ,
ಆಹಾರ ಹೆಕ್ಕಿ,
ಗುಟುಕು ಕೊಟ್ಟು
ನಿಲ್ಲುವಾಗ

ಬೃಹತ್ ಜೀವನ ಮರದ
ರೆಂಬೆಗಳಲಿ ಇಣುಕಿ
ನೋಡಿದ್ದೂ ಇದೆ
ಪಕ್ಕದ ರೆಂಬೆ ಹಕ್ಕಿ ಗೂಡು

ಒಮ್ಮೆ ಕಲೆತು ಒಮ್ಮೆ ಕಲಿತು
ಒಮ್ಮೆ ಬೀಗಿ ಒಮ್ಮೆ ಅಹಂ ತೇಗಿ
ಅತ್ತು ಕರೆದು, ತೊರೆದು ಬಯಸಿ
ಮತ್ತೆ ಮತ್ತೆ ಸೇರಿ ಸಂಭ್ರಮಿಸಿ

ನಮ್ಮ ಚಿಲಿಪಿಲಿ ನಾದಕೆ
ನಿಮ್ಮ ನಲಿವು,,
ನಿಮ್ಮ ಸಾಂತ್ವನಕೆ
ನಮ್ಮ ಗೆಲುವು,,
ಇದುವೇ ಸ್ನೇಹ ಇದುವೇ ಪ್ರೀತಿ
ಇದುವೇ ಜೀವನ,,,
ತರಾವರಿ ರೀತಿ,,,

Happy Friendship day

ಚಿತ್ರ ಕೃಪೆ; ಅಂತರ್ಜಾಲ


03/08/2014

Saturday, 2 August 2014

ಕವನ

ಕಣ್ಬಾಣ,,,

ಅವಳ ಕವನದ ಕಣ್ಬಾಣಕೆ
ಅವರಾಗಿಯೇ ಎದುರಾಗಿ
ಎದೆಯೊಡ್ಡಿದ ತರುಣರು
ಅವಳಿಗೇಕೋ
ಎದುರಾಳಿಗಳಾಗಿ ಕಂಡರು,,

ಅವಳಿನ್ನೂ ಯುದ್ಧವ ಕೈಬಿಟ್ಟಿಲ್ಲ,
ಇವರೂ ಛಲವ ಕೈಬಿಟ್ಟಿಲ್ಲ,,
ಇದರ ನಡುವೆ ಅವನೂ ಬಂದೂ
ಎಲ್ಲಿಯೋ ಹೋದ,,

ಹುಡುಕಲೂ ಈಗ ತಾಳ್ಮೆಯಿಲ್ಲ,
ಸಿಕ್ಕರೂ ಈಗ ಕಾಲವಿಲ್ಲ,,
ಆದರೂ ಕವನಕ್ಕೇನು ಕಣ್ಣಿನ ಅಭಾವಲಿಲ್ಲ!!

02/08/2014

ಕವನ

"ನೀನು"

ನನ್ನೆಲ್ಲಾ ಆಲಾಪಗಳಿಗೆ
'ನೀನು' ಎನ್ನುವುದಷ್ಟೇ 'ಅಂಕಿತ',
ಬದಲಿ ಹೆಸರ ನೀಡಲಾರೆ
ಅವರಿವರದು;

ನೀನೋ ನನಗೆಂದೂ
ಸಿಗದಿದ್ದರೂ ಸರಿಯೆ,
ಸಂಧಿಸಿ ನಿರಾಶೆ ಮಾಡದಿರು,
'ಅಮೋಘ'ವೆಂಬ ಎನ್ನೆದೆಯ
ನಿನ್ನ 'ಪ್ರತಿಬಿಂಬ' ಮಂಕಾಗುವಂತೆ,

'ನೀನು' ನನಗೊಂದು ದೂರದ 'ದೀಪ'
ನಿನ್ನ ಸಂಙ್ಞೆಯಷ್ಟೇ ಸಾಕು
ಈ ಹಾದಿಗೆ,,, ಈ ಜನ್ಮಕೆ,,,

01/08/2014
ಮುನಿಸು ಸಾಧಿಸೊ
ಪ್ರೇಮವೂ ಹಿತವೇ,
ಮುನಿಸ ಸಂಭಾಳಿಸೋ
ಸ್ನೇಹವೂ ಇನಿತು ಹೆಚ್ಚೇ ಇನಿ,,

02/08/2014

____________________

ಎನ್ನನೇ ಪ್ರೀತಿಸಬೇಕೆಂದು
ತಪಸ್ಸು ಕುಳಿತಂತಿದೆ
ನಿನ್ನ ಮೌನ,,!!

01/08/2014

ಕವನ

ಈ ಸ್ನೇಹ,,,,

ನೋಡುತಾ ನೋಡುತಾ
ನಾ ನಿನ್ನೇ ನೋಡುತಾ
ನಿನ್ನ ಬೆರಗು ಮಾತನಾಲಿಸುತ,
ನಕ್ಕ ನಿನ್ನ ಹಾಗೆ ನಾನೂ ನಗುತ
ಹೇಗೋ ಇಷ್ಟವಾದೆ ನೀನಂದು,

ಇಂದು ಕಾಣದೇ ಕಾಡುತ
ಮೌನವ ತಾಳುತ
ಗತವಾಗಬಯಸಿಹೆ ಏನು?!
ಆಗದೊ ಗೆಳೆಯ,
ಈ ಸ್ನೇಹ ಸುಲಭವಲ್ಲವೊ
ತಿಳಿದಂತೆ ಒಡೆಯಲು
ವಿನಾ ಕಾರಣ ದೂರ ಸರಿಯಲು!

ಪ್ರೀತಿಗಾದರೂ
ಹಮ್ಮು-ಬಿಮ್ಮಿರಬಹುದು
ಮೋಹ ತೊರೆದ ಬಂಧವಿದು
ಪರಸ್ಪರ ಸಂತಸ ನೆಮ್ಮದಿಗಳಷ್ಟೇ
ಕಾಳಜಿಯಿದೆ ಪ್ರೀತಿಯಿದ್ದರೂ
ಈ ಬೆಸುಗೆಯಲಿ,,
ನಮ್ಮೀ ಮೈತ್ರಿಯಲಿ!!

31/07/2014


ಈ ಒಡೆದ ಮನಸು
ನಿನ್ನೊಳಗೂ ಉಳಿದಂತೆ
ಕಣ್ಣೀರಾದ ಹೊತ್ತು
ನೀನಿನ್ನೂ ನನಗೆ ಹತ್ತಿರ!

31/07/2014

__________________

ಮನಸ್ಸು ಓಡದಿದ್ದಾಗ
ನಾನೇ ಓಡುತ್ತೇನೆ
ಉಷ್ಣವೇರಿಯಾದರೂ
ಮಂಡೆ ಬಿಸಿಯಾಗಿ
ಹೃದಯ ಕರಗಬಹುದೆಂದು
ಇನ್ನೆಷ್ಟು ಕಾಲ ಹೀಗೆ ಹೆಪ್ಪಾಗಲಿ
ನಿನ್ನ ವಿರಹದಲಿ,,,

30/07/2014

________________________

ಕೋಪಕ್ಕೂ ಕಾರಣ ಪ್ರೀತಿಯೇ
ನಿನ್ನ ಅತಿಯಾಗಿ ಹಚ್ಚಿಕೊಂಡ ಕಾರಣಕ್ಕೆ
ನಿನ್ನ ಮೇಲೆ ನನಗೆ ಅಷ್ಟೇ ಕೋಪ
ನೀ ನನ್ನೆದುರು ಇನ್ನೂ ಬಾರದಿರೆ,
ನಾನೆಲ್ಲೇ ನಡೆದು ಹೋದರೂ
ಹಿಂಬಾಲಿಸೋ ನಿನ್ನ ಮಾತುಗಳ ಮೇಲೆ
ಕನಸಿಗೂ ತೂರಿ ಕೆಣಕೊ ನಿನ್ನ ಮೌನಕೆ
ಹೌದು ಕೋಪವೇ ನನ್ನ ಹುಟ್ಟು ಗುಣ
ಬಹುಶಃ ನಾ ತುಂಬಾ ಪ್ರೀತಿಸುವವಳೇನೋ,,,!!

29/07/2014