Thursday 7 August 2014


ಕೆಲವು ಮನಗಳು
ತಮ್ಮ ಇರುವಿಕೆಯ
ಅರಿವು ನೀಡಲು
ಸೆಣಸಾಡುವುದು
ಅತ್ತು, ನಕ್ಕು, ಕಾಳಜಿ ತೋರಿ
ಕೊನೆಗೆ ಎದುರು ಬಿದ್ದು
ಬೇಕಾದುದು ತಮ್ಮೆಡೆಗಿನ
ಅವರ ಲಕ್ಷ್ಯವೇ ಹೊರತು
ಕನಿಕರವೂ ಅಲ್ಲ, ಪ್ರತಿಷ್ಠೆಯೂ ಅಲ್ಲ
ಜಗಳವೂ ಅಲ್ಲ, ಆದರೂ
ಸುಮ್ಮನಿರರು ಇವರು ಮೌನಿಗಳು
ಸುಮ್ಮನೆ ಗಲಬೆ ಎಬ್ಬಿಸುವರು ಮನಗಳಲಿ,,,

______________

ಅವನಿಲ್ಲದ ಈ ಹೊತ್ತು
ಬರೀ ಕತ್ತಲೆ,
ಸುಮ್ಮನೆ ಚಂದ್ರ ಲಾಂದ್ರಗಳ
ಬಿಂಬಿಸಿದೆ
ಕೆಣಕಿದರೆ ಹುಟ್ಟಿ ಬರುವನೇ
ಎಂಬ ಭ್ರಾಂತಿಗೆ!

07/08/2014

No comments:

Post a Comment