Monday 11 August 2014


ಎಲ್ಲರ ಗಮನವೆಲ್ಲಾ ಬೇಕಿರಲಿಲ್ಲ ನನಗೆ
ಬೇಕಿದ್ದ ನೀನು ನಿನ್ನ ಲಕ್ಷ್ಯ
ಕತ್ತಲ ಮರೆಗೆ
ಬೆಳಕಿಲ್ಲದ ಮಾತ್ರಕೆ ನೀನೂ ಇಲ್ಲ
ಎನ್ನಲಾರೆ ದೊರೆಯೆ
ಕಣ್ಣು ಮುಚ್ಚಿ ಕನಸು ಕಂಡವಳು ನಾನು!
_______________________

ತನ್ನ ತೋರುವ ಕನ್ನಡಿ
ತುಸು ಓರೆ ಎನಿಸಿ
ಬೇಸರ ಮೂಡಿದರೆ
ಚಿಂತೆಯಿಲ್ಲ,
ಎಷ್ಟೋ ಸಿರಿ ಕನ್ನಡಿಗಳಿವೆ
ತಿರುಗಿಸಿ ನೋಡಿದರಾಯ್ತು
ಚೆಂದದ ಬಿಂಬಗಳು,
ನೋಟದೊಂದಿಗೆ ನಮ್ಮ ಒಳಬಿಂಬವಾದರೂ
ಹೆಮ್ಮೆಯ ಆರಾಧಕನಾಗಬಹುದು!
ಸೌಂದರ್ಯಗಳೂ ನಮ್ಮೊಳಗನ್ನೇ ಮೆಚ್ಚುವಂತೆ!!

08/08/2014
__________________

ಕೆಲವು ಮನಗಳು
ತಮ್ಮ ಇರುವಿಕೆಯ
ಅರಿವು ನೀಡಲು
ಸೆಣಸಾಡುವವು
ಅತ್ತು, ನಕ್ಕು, ಕಾಳಜಿ ತೋರಿ
ಕೊನೆಗೆ ಎದುರು ಬಿದ್ದು
ಬೇಕಾದುದು ತಮ್ಮೆಡೆಗಿನ
ಅವರ ಲಕ್ಷ್ಯವೇ ಹೊರತು
ಕನಿಕರವೂ ಅಲ್ಲ, ಪ್ರತಿಷ್ಠೆಯೂ ಅಲ್ಲ
ಜಗಳವೂ ಅಲ್ಲ, ಆದರೂ
ಸುಮ್ಮನಿರರು ಇವರು ಮೌನಿಗಳು
ಸುಮ್ಮನೆ ಗಲಭೆ ಎಬ್ಬಿಸುವರು ಮನಗಳಲಿ,,,

07/08/2014

No comments:

Post a Comment