Monday 11 August 2014

ಮನದ ಮಾತು

ಯಾರೊಬ್ಬರ ಮನಸ್ಸು ಅಷ್ಟು ಸುಲಭವಲ್ಲ ಅರ್ಥ ಮಾಡಿಕೊಳ್ಳಲು. ಮುಖವನ್ನು ನೋಡಿ ಮಣೆ ಹಾಕಬಾರದು (ನನ್ನನ್ನೂ ಸೇರಿಸಿಯೇ :-)  ), ಆದರೆ ಅಷ್ಟೆ ಸುಲಭಕ್ಕೆ ಅವರನ್ನು ಹೀಗೆಯೇ ಎಂದೂ ಸಹ ನಿರ್ಧರಿಸಲೂ ಆಗದು.

ನಿರ್ಭಾವುಕತೆಗೆ ನಿರಪೇಕ್ಷೆಯೇ ಸರಿಯಾದ ಉತ್ತರವೇ ಹೊರತು ತಿರಸ್ಕಾರವಲ್ಲ,,!

ಪ್ರತೀ ತಪ್ಪಿಗೂ ಅದರ ನೆರಳಂತೆ ಕಲಿಕೆಯಿದೆ, ಹಾಗೆಯೇ ಪ್ರತೀ ಜಡ್ಡುತನಕ್ಕೂ ಅದರದೇ ಆದ ನೋವುಗಳಿವೆ. ನೋವನ್ನರಿತು ನಡೆಯಲು ನಾವ್ಯಾರೂ ಬ್ರಹ್ಮರಲ್ಲ; ಮಾನವರು. ಆ ಕಾರಣಕ್ಕಾದರೂ ಮಾನವೀಯತೆಯಿರಲಿ. ತಿಳಿಯದೇ ನುಡಿವ, ತಿಳಿದು ಕೊಂಕಾಡುವ ಮನೋಸ್ಥಿತಿಯನ್ನು ಇನ್ನಾದರೂ ತೂರಿಬಿಡೋಣ. ಪ್ರತೀ ಜೀವಕೂ ಅದರದೇ ಆದ ತಪ್ಪು -ಜಡ್ಡುತನಗಳಿವೆ. ನಂತರ ಕಲಿಕೆಯ ಆಸರೆ ಮತ್ತು ಅದರ ನೋವಿಗೆ ಸ್ಪಂದಿಸೋ ಅದರದೇ ನೋವುಗಳಿವೆ, ಮತ್ತೂ ತಾನೇ ಕಂಡುಕೊಳ್ಳೋ ಸಾಂತ್ವನಗಳೂ. :-)

ಬೆರೆತು ಬಾಳೋ ಉದ್ದೇಶವೇ ಆಗಿದ್ದರೆ ನಮ್ಮಲ್ಲಿ ಸಹಿಸೋ ಗುಣ ಇನ್ನಷ್ಟು ಹೆಚ್ಚಲಿ. ಪ್ರೀತಿಸೋ ಹೃದಯಕೆ ಇನ್ನಷ್ಟು ಪ್ರೀತಿಯೇ ಸಿಗಲಿ.

ಶುಭದಿನ ಫ್ರೆಂಡ್ಸ್,,,, :-)

10/08/2014

No comments:

Post a Comment