Saturday 7 February 2015

ಕವನ

ಮತ್ತದೇ.............
ಏಕಾಂತ........


ಮಲ್ಲಿಗೆಯ ಘಮ
ನೇಸರ, ಸಂಜೆ
ಮಳೆ, ಹೊಂಬೆಳಕು
ಕಾಮನಬಿಲ್ಲೇ ಹರಡಿಕೊಂಡಿದ್ದೆ
ಒಳ ಮನೆಯೊಳು!

ಈಗೆಕೋ ಬಚ್ಚಿಟ್ಟ
ಹಿತ್ತಲ ವಿಷಗಳೆಲ್ಲಾ 
ನಡು ಮನೆಗೆ ದಾಳಿಯಿಟ್ಟಿವೆ 
ಗಾಳಿಯೊಡ ಸಂಗ ಮಾಡಿ!

ಎಲ್ಲವನೂ ತೂರಿ ಹೊರ ಹಾಕಬೇಕು
ಏನು ಮಾಡಲಿ ಆಜು  ಬಾಜಿನವರು
ಆಡಿಕೊಂಡಾರೆಂಬ ಭೀತಿ
ಅಂಜಿಕೆಯಿಂದಲೇ ಬಚ್ಚಿಟ್ಟೆ, 
ಮತ್ತೇನನ್ನೋ ಹರವಿಕೊಂಡೆ
ಎಷ್ಟು ಸುರಿದರೂ ಸುಗಂಧ
ತೊಲಗಿಸೀತೆ ಕಳಂಕ!

ಮೂರ್ಛೆ ಹಿಡಿದಂತೆ ಕಾಲ
ನಡೆದಿದೆ
ಬಿಟ್ಟು ಎಲ್ಲಾ ಆಕಾಂಕ್ಷೆಗಳ
ಹೀಗೆ ಬರಿಗೈನಲ್ಲಿ
ಹೂವೂ ಇಲ್ಲ, ವಿಷವು ಇಲ್ಲ
ಕವಿದ ಮಸುಕೆಲ್ಲಾ ಸರಿದಂತೆ

07/02/2015

No comments:

Post a Comment