Tuesday 3 February 2015

ಕವನ

ದ್ರವ್ಯ

ಹಕ್ಕುಗಳ ಕಸಿದುಕೊಂಡು
ಅವರ ಪಾಲಾಗಿ ಬಿಟ್ಟು ಕೊಟ್ಟ 
ದ್ರವ್ಯ;
ಅದೇಕೋ
ಸಾಗರದ ನೀರಾಗಿದೆ!

ಅನೇಕ ಕಣ್ಗಳ ಕಣ್ಣೀರು
ಹಿಂದೆ ತುಳುಕಿದ್ದು
ಇನ್ನೂ ಹರಿದಿಲ್ಲ
ತಿಳಿಗೊಳ್ಳಲೂ ಇಲ್ಲ; ಮೌನವಹಿಸಿವೆ!

ಮೊದಲೇ ಹೇಳಿದಂತೆ
ಸಾಗರವ ಸೇರಿದ್ದು ನದಿಯೇ ಆದರೂ
ಉಪ್ಪಂತೆ; ಪ್ರಕೃತಿಯ ಕೈವಾಡಕೆ
ಆಪಾದನೆಗಳ ಅಬ್ಬರ...

ಬಾಯಾರಿದೆ
ಕುಡಿಯಲು ನೀರಿಲ್ಲವಂತೆ
ಕಡಲ ಮಧ್ಯೆ!

02/02/2015

No comments:

Post a Comment