Saturday 24 January 2015

ಕವನ

"ಬಡತನ"



ಆ ಭಿಕ್ಷುಕನ,
ಆ ಅರಿವೆ ಇಲ್ಲದ
ತುಂಡು ಮಕ್ಕಳ
ಮುಳ್ಳಂತಹ ಮೊಳೆಯ 
ಅವರ ಬಡಕಲು ದೇಹ
ಕೊಳೆಗಳ ಸಮೇತ
ಛಾಯಚಿತ್ರ ತೆಗೆದ ಕಲೆಗಾರ
ಎನಿಸಿಕೊಂಡ 
ಶ್ರೇಷ್ಠ ಛಾಯಗ್ರಾಹಕ
ಗಿಟ್ಟಿಸಿಕೊಂಡ 
ಲಕ್ಷದ ಬಹುಮಾನ!
ಯಾರು ಹೇಳಿದರು 
ಬಡತನವನ್ನು 
'ಬಡತನ'ವೆಂದು!....

ಯಾರು ಬಡವರು, 
ಯಾರು ಉದಾರಿಗಳು?!
ಯಾರು ಯಾರಿಗೆ ಏನನಿತ್ತು 
ಏನೂ ಅರಿಯದೆ 
ಹಿಂದುಳಿದರು?!
ಹುಡುಕೋಣ ಬಿಡಿ ಸಮೀಕ್ಷೆಗಳಲಿ....

24/01/2015

No comments:

Post a Comment