Saturday 30 November 2013


ಸುರಿದ ಮಳೆಗೆ ಮೈ ಮರೆತು
ಮನದಣಿಯೇ ನೆನೆದು
ಅರಳಿದ ಮನವು ಮುದುಡಿದ್ದು
ನಗರ ಪ್ರದೇಶದ ಆಮ್ಲಮಳೆಗೆ ಬೆದರಿ!! 


***


ಮುದ್ದು ಮುದ್ದು ಮಕ್ಕಳು 
ಮುದ್ದಿಸಿಕೊಳ್ಳಲು 
ಹೆಚ್ಚೇ ಬೀಗುವರು


***


ಮುಳ್ಳುಗಳ ಮೊನೆ ತಾಗದ ಹೊರತು
ಹೂ ಪಕಳೆಗಳ ಮೃದುತ್ವ ಮುದ ನೀಡದು!,
ಕಹಿಗಳು ಬೇಕು, ಸಿಹಿ ಅರಿಯಲು,
ಮತ್ತೂ ಸವಿಯಲು,,,
ಜೀವನವೀಗ ಹೆಚ್ಚೇ ಸ್ಫೂರ್ತಿದಾಯಕ
ಭಾವಾನುಭವಗಳ ರಸಗಳರಿತ ಮೇಲೆ! 



***


ನಮ್ಮ ಪ್ರಶಂಸೆಗಳನ್ನೂ
ಮುಳ್ಳಂತೆ ಭಾವಿಸುವಾಗ
ಮಾಡಿದೆಲ್ಲವೂ ಅಪರಾಧವೇ,
ಇನ್ನಾದರೂ ನಿಲ್ಲಲಾರೆ 
ನಾ
ಅಪರಾಧಿಯಾಗಿ!!


***


ಬರೆದದ್ದೆಲ್ಲಾ ಅಳಿಸಲೆಂದೇ ಎಂದಿದ್ದರೆ
ಬರೆಯುತ್ತಿರಲಿಲ್ಲವೆನೋ
ನೆನಪುಗಳೂ ಹೀಗೆಯೇ ಎಂದಿದ್ದರೆ
ಘಟಿಸುತ್ತಿರಲಿಲ್ಲವೆನೋ!


27/11/2013

No comments:

Post a Comment