Sunday 24 November 2013


ಶ್ರೀಗಂಧ ತೇದಷ್ಟು 
ಕಡುಕಂಪು
ವಿರಹದಿ ಬೆಂದಷ್ಟೂ
ಕಾವ್ಯ ಇಂಪು!


ನಿಜ ಜೀವನದಲಿ ನೋವುಗಳೆಂದರೆ
ಓಡುವ ಮನವು
ಕವನಗಳ ವಸ್ತುಗಳಲಿ ನೊಂದು
ನೋವುಗಳನೇ ಮೆಚ್ಚುವುದು
ವಿಪರ್ಯಾಸ!


***


ಕನಸು, 
ಕಲ್ಪನೆಗಳ 
ಸಾಲಿನಲ್ಲಿ 
ಅವನು...

***




ಇಷ್ಟು ಕಾಡಬೇಡ ನೀ,,, 
ನನ್ನನು;

ಕೂಗಿದರೂ ಕೇಳದೆ,
ಕೊರಗಿದರೂ ಕರಗದೆ,
ಪ್ರೀತಿಯಿದ್ದರೂ ಪ್ರೀತಿಸದೆ,

ಇಷ್ಟು ಕಾಡಬೇಡ ನೀ,,, 
ನನ್ನನು.


***


ಶೀತ ಗಾಳೀಲಿ ಮಿಂದು
ನಡುಗುವ ಹೂ ಮನಕೆ
ಬೆಚ್ಚನೆಯ ಅಪ್ಪುಗೆ
ನಿನ್ನ ಸವಿ ಮಾತಿನ ನೆನಪು

23/11/2013

No comments:

Post a Comment