Friday 3 May 2013

ಕವನ

                "ಚೇತನ"

ಸುಮ್ಮಸುಮ್ಮನೆ ಕೋಪಗೊಳ್ಳುವ ಗೆಳೆಯನೆ,
ಅದರ ಪರಿಣಾಮದ ಅರಿವು ನಿನಗಿದೆಯೇ?
ನಿನ್ನ ಕೋಪ-ತಾಪಗಳ ಪ್ರಖರತೆಯು,
ಭಾವದುಂಬಿ ಮಳೆಗರೆವ  ಮನದ ಬಾಂದಳದ
ಮೋಡಗಳನ್ನೇ ಆವಿಯಾಗಿಸಿದೆ;
ಶೂನ್ಯಸ್ಥಿತಿಯ ಮನಕ್ಕೆ ಶುಷ್ಕತೆಯು ಒದಗಿ
ಬರುಡಾಗುವ ಮುನ್ನ;
ನೀ ಬದಲಾಗಿ, ಮೋಡವಾಗಿ
ಮಳೆಯಾಗಿ, ನಗುವಾಗಿ, ಒಲವಾಗಿ
ಹರಿದುಬಿಡು ನನ್ನೋಳ "ಚೇತನ"ವೇ ನೀನಾಗಿ.

-ದಿವ್ಯ ಆಂಜನಪ್ಪ

2 comments: