Friday 10 May 2013

ಹನಿಗವನ

ನನ್ನ ದೇವನಿಗೊಂದು ವಿನಂತಿ


ಬಿಡಿಸಿ ಎಲ್ಲವ ನಾ ಹೇಳಲಾರೆ,

ಈ ಪದಗಳನ್ನೇ ಅರ್ಥೈಸಿಕೊ

ಕೊಡದು ಈ ವ್ಯವಸ್ಥೆಯು ಎನಗೆ

ಅಭಿವ್ಯಕ್ತಿಯ ಅವಕಾಶವ.

ಎಲ್ಲಾ ಬಲ್ಲವ ನೀನೇ ಅಲ್ಲವೇ?

ಅದರಂತೆ ನೀ ನೆಡೆದಿಕೊ,

ನನ್ನಾಸೆ-ಕನಸುಗಳ ನಿನ್ನ ಕೈಗಿತ್ತಿರುವೆ.

ಅರಳಿಸುವೆಯೋ? ಕಮರಿಸುವೆಯೋ ನೋಡಿಕೊ.

ಇಷ್ಟೇ ನನ್ನ ವಿನಂತಿ,

ನೀ ನಿಲ್ಲದೆ ನಾ ಒಂಟಿ.



-ದಿವ್ಯ ಆಂಜನಪ್ಪ

No comments:

Post a Comment