Friday 10 May 2013

ಕವನ


ಜೀವದ ಭಾವ




ಬರಡು ಭೂಮಿಯ ಬದುಕಲಿ
ಬಯಕೆ ಹೊತ್ತ ಮನವು,
ತಡವುತ್ತಿರುವುದು ಅನುದಿನವೂ
ಬತ್ತದ ಪ್ರೀತಿಯ ಒರತೆಯ.
ಕಾಣಬಹುದು ಎಂದಾದರೂ
ಪ್ರೀತಿಯ ಜಲಧಾರೆಯಾ
ಕಂಡ ಮರೀಚಿಕೆಗಳ ನೆನೆದು,
ದಿಟವಾದದನ್ನೂ ಒಮ್ಮೆ ಅನುಮಾನಿಸೀತು.

ಮರುಭೂಮಿಯ ದಾರಿ ಮುಗಿದು
ಸಾಗಿರಬಹುದು ಚೈತನ್ಯದೂರಿನೆಡೆಗೆ,
ಹಸಿರನ್ನೂ ಒಮ್ಮೆ ನಿಟ್ಟುಸಿರಿನಲಿ ನೋಡಿ,
ಸಿಗಬಹುದೇ ಎನ್ನ ಋಣಕ್ಕೆ?,
ಎಂಬ ಸಂಶಯದಿಂದಲೇ
ನಿಜ ಸಂತಸವ ಕಳೆವುದು ಮನವು,
ಹಾಗಾಗಿ, ನಿಜಕ್ಕೆ ಸಿಕ್ಕರೂ ಕನಸಿಗೆ ಸಿಕ್ಕರೂ
ಸಂತಸದಿ ಸುಖಿಸಿಬಿಡುವುದೇ ಲೇಸು
ಈ ಜೀವದ ಭಾವವ. :-)

-ದಿವ್ಯ ಆಂಜನಪ್ಪ

No comments:

Post a Comment