Friday 31 May 2013

ಕವನ

ನಿರುತ್ತರ

ಮನೆಯ ಮುಂದೆ ಯಾರದೋ ಅಂತಿಮಯಾತ್ರೆ
ದುಃಖದ ಛಾಯೆ ಮನೆಮನಗಳಲ್ಲೂ;
ಮಂಕಾದ ಮುಖ ಹೊತ್ತ ತಂದೆ
ಮಗಳಿಗೆ ಛಲ ಹುಟ್ಟಿಸಲೆಂದೋ?!
ಹಾಕಿದ ಹೀಗೊಂದು ಪ್ರಶ್ನೆ.

ಮಗಳೇ, ನನ್ನಂತ್ಯಕ್ಕಿಹರು
ಹೊಟ್ಟೆಯಲಿ ಪುಟ್ಟಿದ ಮಗನೂ-ಹೆಣ್ಣು ಮಕ್ಕಳು.
ಭಂಡ ಧೈರ್ಯದ ನಿನಗೆ
ಯಾರಿಹರು ಕೊನೆಗೆ??.,,,,,,

ದಿಗ್ಬ್ರಮೆಯಾದರೂ ನಕ್ಕಳು ಅರೆಘಳಿಗೆ,
ಮರುಕ್ಷಣ ಮೌನ,
ಕಳೆದೇ ಹೋದಳು ಬಹುಕಾಲ.
ಮನದಲಿ ಮುಗಿಯದ ಹುಡುಕಾಟ.

"ಆದಿ-ಅಂತ್ಯಗಳೆಲ್ಲಾ
ಬರೀ ಕನಸೇ,,,,,?"
ಎಚ್ಚೆತ್ತಾಗ ಅಲ್ಲಿ ಅವಳೊಬ್ಬಳೆ;
ಜೊತೆಗೆ ಫಳ್ಳನುದುರಿದ ತಣ್ಣನೆಯ ಕಣ್ಣೀರು.

-ದಿವ್ಯ ಆಂಜನಪ್ಪ
೨೮/೦೫/೨೦೧೩

2 comments:

  1. ಯಾರಿಹರು ಕೊನೆಗೆ??.,,,,,,ಎಚ್ಚೆತ್ತಾಗ ಅಲ್ಲಿ ಅವಳೊಬ್ಬಳೆ;--ನಮಗೆ ನಾವೇ ಎಂದು ತಿಳಿಯಬೇಕು...

    ReplyDelete
    Replies
    1. :-) ಹೌದು ಮೇಡಂ.ನಮಗೆ ನಾವೇ ದಾರಿ ದೀಪಗಳು. ಧನ್ಯವಾದಗಳು.

      Delete